ರೋಗ ಲಕ್ಷಣ ಇಲ್ಲದಿದ್ದರೂ ಹೊರರಾಜ್ಯದಿಂದ ಬರುವವರಿಗೆ ಕ್ವಾರೆಂಟೈನ್ ಕಡ್ಡಾಯ
ಬೆಂಗಳೂರು, ಮೇ 11: ಹೊರರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನ ಕರೆತನ್ನಿ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಸಾರ್ವಜನಿಕರು ಕೂಡ ಕನ್ನಡಿಗರನ್ನು ಕರೆತರಲು ಸರ್ಕಾರಕ್ಕೆ ಒತ್ತಾಯಿಸಿದ್ದರು.
ಇದೀಗ, ಹೊರರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಕ್ವಾರೆಂಟೈನ್ಗೆ ಒಳಗಾಗಬೇಕು, ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆ
''ದೆಹಲಿ, ಗುಜರಾತ್, ರಾಜಸ್ಥಾನ್, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ ಅಂತರರಾಜ್ಯ ಮರಳಿದವರು 14 ದಿನಗಳ ಕ್ವಾರೆಂಟೈನ್ಗೆ ಒಳಗಾಗಬೇಕು. ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಪಾಸ್ ನೀಡಲಾಗುತ್ತಿದೆ. ತೀರಾ ಅಗತ್ಯವೆನಿಸಿದರೆ ಮಾತ್ರ ಪ್ರಯಾಣ ಮಾಡಿ. ರೋಗಲಕ್ಷಣ ಇಲ್ಲವಾದರೂ ಕ್ವಾರೆಂಟೈನ್ ಆಗಲೇಬೇಕು'' ಎಂದು ಸೂಚಿಸಿದ್ದಾರೆ.
Inter state returnees from Delhi Gujrat RAJSTHAN Maharashtra and Tamilnadu will have to undergo 14 days institutional quarantine. Passes are issued only through govt portal seva sindhu. Travel only if it is absolutely essential. Be prepared for quarantine even if asypmtomatic.
— DGP KARNATAKA (@DgpKarnataka) May 11, 2020
ಈ ಮೂಲಕ ಅಂತರರಾಜ್ಯ ಪಾಸ್ಗಳನ್ನು ಪಡೆದವರು ಕರ್ನಾಟಕ ರಾಜ್ಯಕ್ಕೆ ಆಗಮಿಸಬಹುದು. ಆದರೆ, ಅವರು ಕಡ್ಡಾಯವಾಗಿ ಕ್ವಾರೆಂಟೈನ್ಗೆ ಒಳಗಾಗಬೇಕಿದೆ.
ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆ ಆರಂಭವಾದರೆ, ದೆಹಲಿ, ಗುಜರಾತ್, ರಾಜಸ್ಥಾನ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಕಾರ್ಮಿಕರು ಮತ್ತೆ ವಾಪಸ್ ಬರುವ ಸಾಧ್ಯತೆ ಇದೆ. ಮುಂದಿನ ದಿನದಲ್ಲಿ ಇದು ಹೇಗೆ ರಾಜ್ಯಕ್ಕೆ ಸವಾಲಾದರೂ ಆಗಬಹುದು.