Get Updates
Get notified of breaking news, exclusive insights, and must-see stories!

ವಕೀಲರಿಂದ ನಾಟಕ ಪ್ರದರ್ಶನ, ಬಂದ ಹಣ ಕೊಡಗು ಸಂತ್ರಸ್ತರಿಗೆ

ಬೆಂಗಳೂರು, ಆಗಸ್ಟ್ 22: ಸದಾ ಗಂಭೀರ ಮುಖಭಾವದ, ಕೋರ್ಟು, ಕಟ್ಟಳೆಗಳ ಜಂಜಾಟದಲ್ಲಿ ಪ್ರತಿದಿನ ದೂಡುವ ವಕೀಲರು ಹೊಸದೊಂದು ಪ್ರಯೋಗಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ನಗರದ ಲಹರಿ ವಕೀಲರ ವೇದಿಕೆಯಿಂದ ಆಗಸ್ಟ್ 24-25 ರಂದು ಎರಡು ದಿನಗಳ ಏಕಾಂಕ ನಾಟಕ ಸ್ಪರ್ಧೆಯನ್ನು ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ವಕೀಲರನ್ನು ಸೇರಿಸಿ ಏಕಾಂಕ ನಾಟಕಗಳ ಸ್ಪರ್ದೆಯನ್ನು ಏರ್ಪಡಿಸುವ ಮೂಲಕ ಲಹರಿ ವಕೀಲರ ವೇದಿಕೆ ರಂಗ ಭೂಮಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Lahari lawyers association conducting Drama compilation in Bengaluru

ಎರಡು ದಿನಗಳ ಕಾಲ ನಡೆಯುವ ಲಹರಿ ಲಾಯರ್ಸ್ ಆಕ್ಟ್ -2018 ನಾಟಕ ಪ್ರದರ್ಶನವು ಇದೇ ಅಗಸ್ಟ್‌ 24 ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಶ್ರೀ ಉದಯ ಹೊಳ್ಳ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಧಾರವಾಡ, ಶಿವಮೊಗ್ಗ, ದಾವರಣಗೆರೆ, ಮೈಸೂರು ಹಾಗೂ ಬೆಂಗಳೂರಿನ ಐದು ತಂಡಗಳ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ವಿಜೇತರಾಗುವ ಮೊದಲ ತಂಡ ರೂ. 75 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ನೀಡಲಾಗುತ್ತಿದೆ.

ದ್ವಿತೀಯ ಬಹುಮಾನವಾಗಿ ರೂ.50 ಸಾವಿರ ನಗದು ಹಾಗೂ ಪಾರಿತೋಷಕ ಮತ್ತು ತೃತೀಯ ಬಹುಮಾನವಾಗಿ ರೂ. 25 ಸಾವಿರ ನಗದು ಮತ್ತು ಪಾರಿತೋಷಕ ನೀಡಲಾಗುವುದು. ಅಲ್ಲದೇ, ಅತ್ಯುತ್ತಮ ನಿರ್ದೇಶನಕ್ಕೆ ರೂ. 10 ಸಾವಿರ. ಅತ್ಯುತ್ತಮ ನಟ/ನಟಿ, ಅತ್ಯುತ್ತಮ ರಂಗಪರಿಕರ ಮತ್ತು ರಂಗ ಸಜ್ಜಿಕೆ, ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕೆ ತಲಾ ರೂ. 5 ಸಾವಿರ ನಗದು ಮತ್ತು ಪಾರಿತೋಷಕ ನೀಡಲಾಗುವುದು ಎಂದು ಲಹರಿ ವಕೀಲರ ವೇದಿಕೆಯ ಅಧ್ಯಕ್ಷೆ ಪಿ.ಅನು ಚೆಂಗಪ್ಪ ತಿಳಿಸಿದ್ದಾರೆ.

ನಾಟಕ ವಿಕ್ಷಣೆಗೆ ರೂ.50 ಪ್ರವೇಶದರವನ್ನು ನಿಗದಿಪಡಿಸಲಾಗಿದ್ದು ಸಂಗ್ರಹವಾಗುವ ಸಂಪೂರ್ಣ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ಲಹರಿ ವಕೀಲರ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯ ಸಂಚಾಲಕ ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+