Get Updates
Get notified of breaking news, exclusive insights, and must-see stories!

ಕಲಾಕ್ಷೇತ್ರದಲ್ಲಿ ಕೃಷ್ಣ ಸಂಧಾನ-ಮಂತ್ರ ಮಯೂರಿ ಯಕ್ಷಗಾನ, ಮಿಸ್ ಮಾಡ್ಲೇಬೇಡಿ

ಬೆಂಗಳೂರು, ಜೂನ್ 13: ಯಕ್ಷಸಿಂಧೂರ ಕಲಾಮಂಡಳಿಯು ಇದೇ ಜೂನ್ 15ರಂದು ಕೃಷ್ಣ ಸಂಧಾನ- ಮಂತ್ರ ಮಯೂರಿ ಯಕ್ಷಗಾನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸುತ್ತಿದೆ.

ರಾತ್ರಿ 10 ಗಂಟೆಗೆ ಯಕ್ಷಗಾನ ಆರಂಭವಾಗಲಿದೆ. ಊರಿನ ತಿರುಗಾಟ ಮುಗಿಸಿದ ಮೇಳಗಳು ರಾಜಧಾನಿಯತ್ತ ಮುಖ ಮಾಡುತ್ತಿವೆ. ಆಟಕ್ಕಾಗಿ ಕಾಯುತ್ತಿರುವ ಕಲಾಕ್ಷೇತ್ರದ ಕಲಾರಸಿಕರ ವಲಯಕ್ಕೆ ನಿರೀಕ್ಷೆ ಹೆಚ್ಚುತ್ತಿದೆ .

ಈ ಬಾರಿ ಜೂನ್‌‌ನಲ್ಲೆ ಪೌರಾಣಿಕ ಮತ್ತು ಸಾಮಾಜಿಕ ಉಭಯ ಪ್ರೇಕ್ಷಕ ವರ್ಗಕ್ಕೂ ಒಂದೇ ದಿನ ಸವಿ ಉಣಬಡಿಸಲು ಯಕ್ಷಸಿಂಧೂರ ತಂಡ ಸಜ್ಜಾಗುತ್ತಿದೆ . ತೆಂಕುತಿಟ್ಟಿನ ಭಾರಿ ಬಿಸಿಯ ವಾಕ್ ವೈಖರಿಯ ಜೋಡಿ ಪೆರ್ಮದೆ ಜಯಪ್ರಕಾಶ್ ಶೆಟ್ಟರ ಕೌರವನಿಗೆ ರಂಗಾಭಟ್ಟರ ಕೃಷ್ಣ , ಇದು ಈಗಾಗಲೇ ಪ್ರೇಕ್ಷಕರಲ್ಲಿ ಚರ್ಚೆಯಾಗುತ್ತಿದೆ . ಇಬ್ಬರು ಅತ್ಯುತ್ತಮ ಕೂಟದ ಕಲಾವಿದರು ಆಟದಲ್ಲಿ ಅದೂ ಬಡಗಿನಲ್ಲಿ ಹಿಲ್ಲೂರು ಗಾನ ಸಾರಥ್ಯದಲ್ಲಿ ಹೇಗೆ ಸಂಧಾನ ಮಾತುಕತೆ ಮಾಡಲಿದ್ದಾರೆ ಎನ್ನುವುದಕ್ಕೆ ನೀವು ಸಾಕ್ಷಿಯಾಗಬೇಕು .

Krishna Sandhana Yakshagana at Ravindra Kalakshetra

ಇನ್ನು ಊರಿನ ತಿರುಗಾಟದಲ್ಲಿ ಜನಮೆಚ್ಚುಗೆಯ ಪ್ರಸಂಗ ಮಂತ್ರ ಮಯೂರಿ . ಈಗ ಚಾಲ್ತಿಯಲ್ಲಿರುವ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಹಟ್ಟಿಯಂಗಡಿ ಮೇಳದ ಹಿಟ್ ಪ್ರಸಂಗವಿದು. ಅವಳಿ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಈ ಪ್ರಸಂಗದ ಕಥಾಹಂದರ ಈಗಾಗಲೇ ಸದ್ದು ಮಾಡುತ್ತಿದೆ .

ಐರಬೈಲ್ ಆನಂದ ಶೆಟ್ಟಿ , ಸುರೇಶ ಶೆಟ್ಟಿ , ಹೆನ್ನಾಬೈಲ್ ವಿಶ್ವನಾಥ , ಪ್ರಶಾಂತ ಗಾಣಿಗ , ನಿತೀನ್ ಶೆಟ್ಟಿ , ಭರತ್ ಪರ್ಕಳ , ಹಳ್ಳಾಡಿ ಜಯರಾಮ ಶೆಟ್ಟಿ , ಯಳಬೇರು ಶೇಖರ ಶೆಟ್ಟಿ , ದೇವಲ್ಕುಂದ , ಕಿರಾಡಿ , ರಾಜೇಶ್ ಬೈಕಾಡಿ , ಅಮಾಸ್‌ಬೈಲ್ , ಇನ್ನಿತರರ ರಂಗವೈಭವದ ಆಟ ಕಾಣಬೇಕೆಂಬ ಕುತೂಹಲಕ್ಕೆ ಕಲಾಕ್ಷೇತ್ರವೇ ದಾರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+