ಕೆ. ಆರ್. ಪುರ ಕದನ; 4 ಬಿಬಿಎಂಪಿ ಸದಸ್ಯರನ್ನು ಉಚ್ಚಾಸಿದ ಕಾಂಗ್ರೆಸ್

ಬೆಂಗಳೂರು, ನವೆಂಬರ್ 20 : ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕದನ ರಂಗೇರಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಬಿಬಿಎಂಪಿ ಸದಸ್ಯರನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಿದೆ. ಡಿಸೆಂಬರ್‌ 5ರಂದು ಉಪ ಚುನಾವಣೆ ನಡೆಯಲಿದೆ.

ಬುಧವಾರ ಕರ್ನಾಟಕ ಕಾಂಗ್ರೆಸ್ ನಾಲ್ವರು ಬಿಬಿಎಂಪಿ ಸದಸ್ಯರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ. ಈ ಮುಖಂಡರುಗಳು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ವಾರ್ಡ್ ನಂ 53 (ಬಸವಪುರ) ಜಯಪ್ರಕಾಶ್, ವಾರ್ಡ್ ನಂ 55 (ದೇವಸಂದ್ರ) ಶ್ರೀಕಾಂತ್, ವಾರ್ಡ್‌ ನಂ 56 (ಎ. ನಾರಾಯಣಪುರ) ಸುರೇಶ್, ವಾರ್ಡ್‌ ನಂ 81 (ವಿಜ್ಞಾನ ನಗರ) ಎಚ್. ಜಿ. ನಾಗರಾಜ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

KR Puram By Elections Congress Expels Leaders

ಕೆ. ಆರ್. ಪುರ ಉಪ ಚುನಾವಣೆಯಲ್ಲಿ ನಾರಾಯಣಸ್ವಾಮಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಬೈರತಿ ಬವಸರಾಜ ಕಣದಲ್ಲಿದ್ದಾರೆ. ನಾರಾಯಣಸ್ವಾಮಿ ವಿರುದ್ಧ ನಾಲ್ವರು ಬಿಬಿಎಂಪಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಕೆಪಿಸಿಸಿಗೆ ಬಂದಿತ್ತು.

ನಾಲ್ವರು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+