ಫ್ಲಾಸ್ಕ್, ಮಹಿಳೆಯರ ಪರ್ಸ್ ಎಲ್ಲವೂ ಚಿನ್ನ, ಕಳ್ಳಸಾಗಣೆ ಹೀಗೂ ಮಾಡ್ತಾರ್ರೀ...
ಕಳ್ಳಸಾಗಾಣಿಕೆ ಮಾಡುವವರ ಅದಕ್ಕಾಗಿ ಏನೆಲ್ಲಾ ಮಾಡ್ತಾರೆ ಎಂಬುದಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನ ಉದಾಹರಣೆ ಇಲ್ಲಿದೆ.
ಬೆಂಗಳೂರು, ಮಾರ್ಚ್ 1: ಕಳ್ಳಸಾಗಾಣಿಕೆ ಮಾಡೋದಿಕ್ಕೆ ಏನೆಲ್ಲ ಮತ್ತು ಹೇಗೆಲ್ಲ ತಲೆ ಉಪಯೋಗಿಸ್ತಾರೆ ನೀವೇ ನೋಡಿ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.47 ಕೆಜಿ ಚಿನ್ನದೊಂದಿಗೆ ಸಿಕ್ಕಿಬಿದ್ದ ಇಪ್ಪತ್ತೆರಡು ವರ್ಷದ ಇರ್ಷಾದ್ ಪೂವತಿನ್ ಬಳಿ ಇದ್ದ ವಸ್ತುಗಳು ಎಂಥವು ಗೊತ್ತಾ?
ಸೋಲಾರ್ ಪ್ಯಾನೆಲ್ ಚಾರ್ಜರ್, ಹೆಣ್ಮಕ್ಕಳ ಪರ್ಸ್, ಕೈಗಡಿಯಾರ ಇವುಗಳೆಲ್ಲ ಹತ್ತಾರು ಇದ್ದವು. ಮತ್ತು ಇವುಗಳ ಬಿಡಿಭಾಗಗಳನ್ನು ಚಿನ್ನದಲ್ಲಿ ಮಾಡಲಾಗಿತ್ತು. ಅವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಕೇರಳದ ಕೋಳಿಕ್ಕೋಡ್ ನ ಸೇಲ್ಸ್ ಮನ್ ಇರ್ಷಾದ್ ಪೂವತಿನ್ ದುಬೈನಿಂದ ಭಾರತಕ್ಕೆ ಹಿಂತಿರುಗಿದ್ದ. ತಿಂಗಳ ಕಾಲ ದುಬೈನಲ್ಲಿದ್ದ ಅತನ ಬ್ಯಾಗ್ ಪರಿಶೀಲಿಸುವಾಗ ಅನುಮಾನ ಬಂದಿದೆ.[ಮಕ್ಕಳ ಡಯಾಪರ್ ನಲ್ಲಿ16 ಕೆಜಿ ಚಿನ್ನ ಸ್ಮಗಲಿಂಗ್]

ಆತನ ಬ್ಯಾಗ್ ನಲ್ಲಿ ಫ್ಲಾಸ್ಕ್ ಗಳು, ಕೀ ಬೋರ್ಡ್ ವಸ್ತುಗಳು ಹಾಗೂ ಸೋಲಾರ್ ಪ್ಯಾನಲ್ ಚಾರ್ಜರ್ ಗಳು ಸಿಕ್ಕಿವೆ. ಆತ ಏಕೆ ಇಷ್ಟೆಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗ್ತಿದ್ದ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಿಲ್ಲ. ಫ್ಲಾಸ್ಕ್ ನ ಸ್ಕ್ಯಾನಿಂಗ್ ಗೆ ಕಳಿಸಿದಾಗ ಅದರ ಒಳಭಾಗ ಮಾಮೂಲಿಗಿಂತ ಹೆಚ್ಚು ಪ್ರಖರವಾಗಿ ಕಂಡಿದೆ. ಆನಂತರ ಅದು ಚಿನ್ನದಿಂದ ಮಾಡಿದ್ದು ಎಂದು ಗೊತ್ತಾಗಿದೆ.
ಆ ನಂತರ ಉಳಿದ ಫ್ಲಾಸ್ಕ್ ಗಳನ್ನು ಪರಿಶೀಲಿಸಿದಾಗ ಎಲ್ಲವೂ ಚಿನ್ನದಿಂದ ಮಾಡಿರುವುದು ಎಂದು ಗೊತ್ತಾಗಿದೆ. ಚಿನ್ನವನ್ನು ಗುರ್ತಿಸಬಾರದು ಎಂಬ ಕಾರಣಕ್ಕೆ ಪಾದರಸದ ಕೋಟಿಂಗ್ ಕೂಡ ಮಾಡಲಾಗಿತ್ತು. ಇದರ ಜೊತೆಗೆ ಚಿನ್ನದ ಸರಕ್ಕೆ ಬೆಳ್ಳಿ ಪಾಲಿಷ್ ಮಾಡಿಸಿರುವುದು ಕೂಡ ಗೊತ್ತಾಗಿದೆ.[2.30 ಕೋಟಿ ಮೌಲ್ಯದ 8.3 ಕೆ.ಜಿ. ಚಿನ್ನ ವಶಕ್ಕೆ]
ಪೂವತಿನ್ ನನ್ನು ದುಬೈನಲ್ಲಿದ್ದ ಸ್ನೇಹಿತ ಕರೆಸಿಕೊಂಡಿದ್ದನಂತೆ. ಈ ರೀತಿ ವಸ್ತುಗಳಲ್ಲಿ ಚಿನ್ನ ಇರುವ ಸಂಗತಿಯೇ ಆತನಿಗೆ ತಿಳಿದಿರಲಿಲ್ಲವಂತೆ. ಇವೆಲ್ಲವನ್ನೂ ಕೋಳಿಕ್ಕೋಡ್ ವಿಮಾನ ನಿಲ್ದಾಣದ ಹೊರಗೆ ಇಂಥ ವ್ಯಕ್ತಿಗೆ ತಲುಪಿಸುವಂತೆ ತಿಳಿಸಲಾಗಿತ್ತಂತೆ. ಇಷ್ಟು ಅಂತೆ-ಕಂತೆ ಕೇಳಿಸಿಕೊಂಡ ನಂತರ ಅತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಲ್ಫ್ ದೇಶಗಳಲ್ಲಿನ ಕೆಲವು ಆಭರಣ ತಯಾರಕರು ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುವುದೇ ಹೀಗೆ. ಇಸ್ತ್ರಿ ಪೆಟ್ಟಿಗೆ, ಓವನ್ಸ್, ಹೀಟರ್, ಫ್ಲಾಸ್ಕ್ ಹಾಗೂ ಟಾರ್ಚ್ ಲೈಟ್ ನ ಬಿಡಿಭಾಗಗಳಾಗಿ ಚಿನ್ನವನ್ನೇ ಬಳಸಿ ತಯಾರು ಮಾಡುತ್ತಾರೆ. ಅವುಗಳನ್ನು ಇಲ್ಲಿಗೆ ಕಳಿಸುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications