Get Updates
Get notified of breaking news, exclusive insights, and must-see stories!

ಹೆಸರಘಟ್ಟ ಮೀಸಲು ಪ್ರದೇಶವಾಗಬೇಕು ಎಂದ ಕರ್ನಾಟಕ ವನ್ಯಜೀವಿ ಮಂಡಳಿ

ಬೆಂಗಳೂರು, ನವೆಂಬರ್‌ 9: ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಸಂರಕ್ಷಣಾ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಿಗೆ ಹುಲ್ಲುಗಾವಲು ಪ್ರಾಮುಖ್ಯತೆಯನ್ನು ವಿವರಿಸಿ ನವೆಂಬರ್ 7 ರಂದು ಮುಖ್ಯಮಂತ್ರಿಗೆ ಸಹಿ ಮಾಡಿದ ಮನವಿಯನ್ನು ಕಳುಹಿಸಲಾಗಿದೆ. ಆರು ಪುಟಗಳ ಪತ್ರದಲ್ಲಿ ಇದು ಜನರನ್ನು ಭೂದೃಶ್ಯದಿಂದ ಹೊರಗಿಡುವುದಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.

ಸಂಪೂರ್ಣ 5,100 ಎಕರೆ ಭೂಮಿ ರಾಜ್ಯ ಸರ್ಕಾರಕ್ಕೆ ಸೇರುತ್ತದೆ. ಇದು 3,500 ಎಕರೆಗಳಲ್ಲಿ ಸರ್ಕಾರಿ ಸಂಸ್ಥೆಗಳನ್ನು ಹೊಂದಿದೆ. ಉಳಿದವು ಕೆರೆಯ ತಳವಾಗಿದೆ. ಸಂರಕ್ಷಣಾ ಮೀಸಲು ಎಂದು ಪ್ರಸ್ತಾಪಿಸಲಾಗಿದೆ. ಸ್ಥಳೀಯ ಸಮುದಾಯಗಳು ಮತ್ತು ಗ್ರಾಮಸ್ಥರಿಂದ ಭೂಮಿಯ ಬಳಕೆ ಮುಂದುವರಿಯುತ್ತದೆ ಎಂದು ಸದಸ್ಯರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

Karnataka Wildlife Board demand Hesaraghatta meadow as reserve conservation area

ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಸಿಎಂಗೆ ಸದಸ್ಯರು ವಿವರಿಸಿ, ಯಾವುದೇ ಹೊಸ ಪ್ರಭೇದಗಳನ್ನು ಪರಿಚಯಿಸುವುದಿಲ್ಲ ಮತ್ತು ಪ್ರಸ್ತುತ ಪ್ರದೇಶವನ್ನು ಮೀಸಲು ಎಂದು ಘೋಷಿಸುವ ಆಲೋಚನೆ ಇದೆ. ರಾಷ್ಟ್ರೀಯ ಉದ್ಯಾನವನದಂತೆ ಪ್ರದೇಶದ ಸುತ್ತಲೂ ಬಫರ್ ಅಥವಾ ಪರಿಸರ- ಸೂಕ್ಷ್ಮ ವಲಯವನ್ನು ಘೋಷಿಸಲು ಯಾವುದೇ ಆದೇಶವಿಲ್ಲ. ಆದ್ದರಿಂದ ಅಸ್ತಿತ್ವದಲ್ಲಿರುವ ಮತ್ತು ಹೊಸ ರಚನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗಳ ಪ್ರಸ್ತಾವನೆ ಮಾತ್ರ ಸಾಕಾಗದ ಕಾರಣ ಸಿಎಂ ಸಾರ್ವಜನಿಕ ಚರ್ಚೆಗೆ ಕರೆದ ಕೆಲವೇ ದಿನಗಳಲ್ಲಿ ಸದಸ್ಯರು ಪತ್ರ ನೀಡಿದ್ದಾರೆ. ಹೆಸರಘಟ್ಟ ರಕ್ಷಿಸಿ ಅಭಿಯಾನ ಜೋರಾಗಿ ನಡೆಯುತ್ತಿದ್ದು, ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹೆಸರಘಟ್ಟದ ಸುತ್ತಲಿನ ಐದು ಸಾವಿರ ಎಕರೆಯ ಹುಲ್ಲುಗಾವಲವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಒತ್ತಡ ಹೇರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಅಕ್ಟೋಬರ್ 27ಕ್ಕೆ ಪರಿಸರವಾದಿಗಳು ಸಭೆ ನಡೆಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+