ಪರಿಸರ ಸಂರಕ್ಷಣೆಯಲ್ಲಿ ವಿದೇಶಿ ಹಸ್ತಕ್ಷೇಪ: ಹೈಕೋರ್ಟ್ ಗರಂ
ಬೆಂಗಳೂರು, ಜನವರಿ 12: ಪರಿಸರ ಸಂರಕ್ಷಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ.
ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸುವಾಗ ನಿಖರತೆ ಇರಬೇಕು ಎಂದು ತಾಕೀತು ಮಾಡಿದೆ. ಹಲವು ಎನ್ ಜಿಓಗಳು ತಮ್ಮ ಆದೇಶದ ಪ್ರಕಾರ ಕಾರ್ಯ ನಿರ್ವಹಿಸುತ್ತವೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.
ಮನಸೋ ಇಚ್ಛೆ ಹೇಳಿಕೆ ನೀಡಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಪರಿಸರ ಪರಿಣಾಮ ಮೌಲ್ಯಮಾಪನ(ಇಐಎ) ಪರಿಗಣಿಸದೆ ರಾಷ್ಟ್ರೀಯ ಹೆದ್ದಾರಿ 4 ವಿಸ್ತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಗಸ್ಟ್ 22, 2013 ರಲ್ಲಿ ಹೈಕೋರ್ಟ್ನಲ್ಲಿ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅಫಿಡವಿಟ್ ಕುರಿತು ಬೇಸರ
ಅಫಿಡವಿಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ವಿಭಾಗೀಯ ಪೀಠವು ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ (ಟಿ) ಆರ್.ಬಿ.ಪೇಕಮ್ ಸಲ್ಲಿಸಿದ ಅಫಿಡವಿಟ್ ಬಗ್ಗೆ ತನಿಖೆ ನಡೆಸಲು ಉನ್ನತ ಅಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ಎನ್ಎಚ್ಎಐ ಅಧ್ಯಕ್ಷರಿಗೆ ನಿರ್ದೇಶನ ನೀಡಿದೆ.
ಆಕ್ಷೇಪಣೆ ಹಿಂಪಡೆಯಲು ಅವಕಾಶವಿಲ್ಲ
ಈ
ಆಕ್ಷೇಪಣೆ
ಹಿಂಪಡೆಯಲು
ಅವಕಾಶ
ನೀಡದ
ಪೀಠ,
‘ಆಕ್ಷೇಪಣೆ
ಸಿದ್ಧಪಡಿಸಿರುವ
ಹಿಂದಿನ
ಉದ್ದೇಶ
ಮತ್ತು
ಪ್ರಹಸನದ
ಸಂಪೂರ್ಣ
ತನಿಖೆ
ನಡೆಸಬೇಕು'
ಎನ್ಎಚ್ಎಐ
ಅಧ್ಯಕ್ಷರಿಗೆ
ಸೂಚನೆ
ನೀಡಿತು.
ವಿದೇಶಿ
ಹಣ
ಪಡೆಯಲಾಗುತ್ತಿದೆಯೇ
ಎಂಬುದನ್ನು
ಸ್ಪಷ್ಟಪಡಿಸುವಂತೆ
ಅರ್ಜಿದಾರರಾದ
ಯುನೈಟೆಡ್
ಕನ್ಸರ್ವೇಷನ್
ಮೂವ್ಮೆಂಟ್
ಚಾರಿಟಬಲ್
ಮತ್ತು
ವೆಲ್ಫೇರ್
ಟ್ರಸ್ಟ್ಗೂ
ಪೀಠ
ತಿಳಿಸಿತು.
ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿರ್ಧಾರ
1972 ರ ಜೂನ್ನಲ್ಲಿ ಸ್ಟಾಕ್ಹೋಮ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಇದರಲ್ಲಿ ಮಾನವ ಪರಿಸರದ ರಕ್ಷಣೆ ಮತ್ತು ಸುಧಾರಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಎಂದು ಅಫಿಡೆವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
Recommended Video
ಸಂಘಟನೆಗಳು ಗೌಪ್ಯ ಉದ್ದೇಶವನ್ನು ಹೊಂದಿವೆ
‘ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಬಹುತೇಕ ಸಂಘಟನೆಗಳು ಗೌಪ್ಯ ಉದ್ದೇಶಗಳನ್ನು ಒಳಗೊಂಡಿವೆ. ವಿದೇಶಿ ಶಕ್ತಿಗಳ ಬೆಂಬಲ ಪಡೆದಿರುತ್ತವೆ ಮತ್ತು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತವೆ' ಎಂದು ಎನ್ಎಚ್ಎಐ ಉಪಮಹಾ ವ್ಯವಸ್ಥಾಪಕ ಆರ್.ಬಿ. ಪೇಕಮ್ ಆಕ್ಷೇಪಣೆ ಸಲ್ಲಿಸಿದ್ದರು.