Get Updates
Get notified of breaking news, exclusive insights, and must-see stories!

Hebbal Junction: ಬಿಎಂಆರ್‌ಸಿಎಲ್‌ಗೆ ಹೆಬ್ಬಾಳದಲ್ಲಿ 45 ಎಕರೆ ಭೂಮಿ ಸಿಗೋದು ಡೌಟ್‌, ಕಾರಣವೇನು?

ಬೆಂಗಳೂರಿನ ಹೆಬ್ಬಾಳದಲ್ಲಿ ಬಹು-ಮಾದರಿ ಸಾರಿಗೆ ಕೇಂದ್ರಕ್ಕಾಗಿ "ನಮ್ಮ ಮೆಟ್ರೋ"ಗೆ 45 ಎಕರೆ ಭೂಮಿ ನೀಡುವ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಮಹತ್ವದ ಸಭೆ ನಡೆಸಿದ್ದರು. ಯಾವುದೇ ಕಾರಣಕ್ಕೂ ನಾವು ಯೋಜನೆ ಹಿಂಪಡೆಯಲು ಸಾಧ್ಯವಿಲ್ಲ ಎಂದೂ ಡಿಕೆಶಿ ಹೇಳಿದ್ದರು. ಆದರೆ, ಆ ಒಂದು ಕಾರಣಕ್ಕಾಗಿ ಬಿಎಂಆರ್‌ಸಿಎಲ್‌ಗೆ ಹೆಬ್ಬಾಳ ಭೂಮಿಯನ್ನು ನೀಡಲು ಕರ್ನಾಟಕ ಸರ್ಕಾರ ನಿರಾಕರಿಸಿದೆ ಎಂದು ಬಿಜೆಪಿ ಸಂಸದ ಪಿಸಿ ಮೋಹನ್‌ ಗಂಭೀರ ಆರೋಪ ಮಾಡಿದ್ದಾರೆ.

ಹೆಬ್ಬಾಳ ಉಪನಗರ ರೈಲು ಮತ್ತು ವಿಮಾನ ನಿಲ್ದಾಣ ಮಾರ್ಗ ಮೆಟ್ರೋ ಎರಡಕ್ಕೂ ಈ ಯೋಜನೆ ಪ್ರಮುಖವಾಗಿದೆ. ಆದರೆ, ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಒತ್ತಡಕ್ಕೆ ಮಣಿದು, ಈ ಬಹು-ಮಾದರಿ ಸಾರಿಗೆ ಕೇಂದ್ರಕ್ಕಾಗಿ ಬಿಎಂಆರ್‌ಸಿಎಲ್‌ಗೆ ಹೆಬ್ಬಾಳದ ಬಳಿ 45 ಎಕರೆ ಭೂಮಿ ನೀಡಲು ಕರ್ನಾಟಕ ಸರ್ಕಾರ ನಿರಾಕರಿಸಿದೆ. ರಿಯಲ್ ಎಸ್ಟೇಟ್ ಲಾಬಿಗಳ ವಿರುದ್ಧ ಬಿಎಂಆರ್‌ಸಿಎಲ್ ದೃಢವಾಗಿ ನಿಲ್ಲಬೇಕು ಎಂದು ಪಿಸಿ ಮೋಹನ್‌ ಹೇಳಿದ್ದಾರೆ.

Karnataka Govt Denies BMRCL 45 Acres In Hebbal Due To Real Estate Pressure PC Mohan

ನಿನ್ನೆ ಸಭೆ ನಡೆಸಿ ಮಾತನಾಡಿದ್ದ ಡಿಕೆ ಶಿವಕುಮಾರ್‌ ಅವರು ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಬಹಳ ಮುಖ್ಯವಾದ ಜಾಗ. ಇಲ್ಲಿ ಮೆಟ್ರೋ ಹಾಗೂ ಟನಲ್ ರಸ್ತೆ ಅವಶ್ಯಕವಿದೆ. ಯಾವುದೇ ಕಾರಣಕ್ಕೂ ನಾವು ಯೋಜನೆ ಹಿಂಪಡೆಯಲ್ಲ. ಮೆಟ್ರೋ ಹಾಗೂ ಟನಲ್ ರಸ್ತೆಗೆ ವಿನ್ಯಾಸ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇದಕ್ಕೆ ಅಗತ್ಯವಿರುವ ಮಿಲಿಟರಿ ಜಾಗ ಹಾಗೂ ಖಾಸಗಿ ಜಾಗ ಎಷ್ಟು ಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದೆ. ಇದಕ್ಕೆ ಅಗತ್ಯವಿರುವ ಜಾಗದ ವಿಚಾರವಾಗಿ ನಾವು ಸಭೆ ಮಾಡಿದ್ದೇವೆ ಎಂದು ಹೇಳಿದ್ದರು.

45 ಎಕರೆ ಬದಲು 10 ಎಕರೆ?

ನಿನ್ನೆ ಸಭೆ ನಡೆದ ಬೆನ್ನಲ್ಲೇ ಬಹು-ಮಾದರಿ ಸಾರಿಗೆ ಕೇಂದ್ರಕ್ಕೆ ಹೆಬ್ಬಾಳದ ಬಳಿ 45 ಎಕರೆ ಜಾಗ ನೀಡುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದೆ. ಅದಕ್ಕೆ ಬದಲಾಗಿ 10 ಎಕರೆ ಜಮೀನು ಮಾತ್ರ ನೀಡುವ ಕುರಿತು ಚರ್ಚೆ ಶುರುವಾಗಿದೆ ಎಂದು ವರದಿಯಾಗಿದೆ.ಹೆಬ್ಬಾಳದಲ್ಲಿ ಈ ಸಾರಿಗೆ ಹಬ್‌ ನಿರ್ಮಿಸಲು ಸುಮಾರು 45 ಎಕರೆ ಜಮೀನಿನ ಅಗತ್ಯವಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೇರಿರುವ 55 ಎಕರೆ ಜಮೀನು ಇದೇ ಭಾಗದಲ್ಲಿದ್ದು, ಈ ಹಿಂದೆ ಬೇರೆ ಉದ್ದೇಶಕ್ಕಾಗಿ ಜಮೀನು ಪಡೆದಿತ್ತು. ಆದರೆ ಕೆಲಸಗಳು ನಡೆದಿರಲಿಲ್ಲ.

Karnataka Govt Denies BMRCL 45 Acres In Hebbal Due To Real Estate Pressure PC Mohan

ಈಗ ಪ್ರಸ್ತಾವಿತ ಬಹು ಮಾದರಿ ಸಾರಿಗೆ ಹಬ್‌ ನಿರ್ಮಾಣಕ್ಕೆ ಈ ಜಮೀನನ್ನೇ ಕೊಡಿ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ ಮನವಿ ಮಾಡಿತ್ತು. ರೈಲು, ಮೆಟ್ರೊ ರೈಲು, ಉಪನಗರ ರೈಲು, ಬಿಎಂಟಿಸಿ ಬಸ್‌ಗಳು ಸೇರಿದಂತೆ ಹಲವು ಸಾರಿಗೆಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ಸಾರಿಗೆ ಕೇಂದ್ರ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಮುಂದಾಗಿದೆ.

Take a Poll

ಕೆಐಎಡಿಬಿಯ ಅಧೀನದಲ್ಲಿರುವ ಜಮೀನನ್ನು ಹಿಂಪಡೆಯುವುದು ಕಷ್ಟದ ಕೆಲಸವಾಗಿದ್ದು, ಬಿಎಂಆರ್‌ಸಿಎಲ್‌ ಕೇಳಿರುವಂತೆ ಅಷ್ಟು ಪ್ರಮಾಣ ಭೂಮಿ ಸಿಗುವುದು ಕಷ್ಟ. ಹೆಚ್ಚೆಂದರೆ 10 ಎಕರೆ ಭೂಮಿ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಿಎಂಆರ್‌ಸಿಎಲ್‌ಗೆ ತೇಜಸ್ವಿ ಸೂರ್ಯ ಪತ್ರ

ಹೆಬ್ಬಾಳದಲ್ಲಿರುವ 45 ಎಕರೆ ಭೂಮಿಯನ್ನು ಪ್ರಸ್ತಾವಿತ ಮೆಟ್ರೋ ಮೂಲಸೌಕರ್ಯ ಮತ್ತು ಬಹು-ಮಾದರಿ ಸಾರಿಗೆ ಕೇಂದ್ರಕ್ಕಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬಿಬಿಎಂಪಿ ಕಮೀಷನರ್‌ ಅವರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ.

ಈ ಭೂಮಿ ಇಂತಹ ಪ್ರಮುಖ ಸ್ಥಳದಲ್ಲಿ ಲಭ್ಯವಿರುವ ಕೊನೆಯ ದೊಡ್ಡ ಭೂಮಿಗಳಲ್ಲಿ ಒಂದಾಗಿದೆ. ಇದನ್ನು ಸುರಂಗ ರಸ್ತೆಯಂತಹ ಯಾವುದೇ ಇತರ ಉದ್ದೇಶಕ್ಕಾಗಿ ಬಳಸಿದರೆ, ಅದು ಬೆಂಗಳೂರಿನ ಸಾರ್ವಜನಿಕ ಸಾರಿಗೆ ಯೋಜನೆಗಳಿಗೆ ಪ್ರಮುಖ ಮತ್ತು ಶಾಶ್ವತ ಹಿನ್ನಡೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್‌ನಲ್ಲಿ ಅಧಿಕಾರ ಹಿಡಿದಿರುವುದರಿಂದ, ಬೆಂಗಳೂರಿನ ನಗರದ ಅಗತ್ಯಗಳನ್ನು ಪೂರೈಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇದು ಅತ್ಯಂತ ಸೂಕ್ತ ಕ್ಷಣ ಎಂದಿದ್ದಾರೆ.

ಬೆಂಗಳೂರಿನ ಚಲನಶೀಲತೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸಕಾಲಿಕ ವಿಸ್ತರಣೆ ಮತ್ತು ಒಟ್ಟುಗೂಡಿಸುವುದರ ಮೇಲೆ ಅವಲಂಬಿತವಾಗಿದೆ. ಈ ನಿಟ್ಟಿನಲ್ಲಿ ಹೆಬ್ಬಾಳದಲ್ಲಿರುವ 45 ಎಕರೆ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಉದ್ದೇಶಿಸಿರುವ ಬಿಎಂಆರ್‌ಸಿಎಲ್‌ನಿಂದ ಮೆಟ್ರೊ ಮೂಲಸೌಕರ್ಯ ಮತ್ತು ಬಹು ಮಾದರಿ ಸಾರಿಗೆ ಕೇಂದ್ರದ ಉದ್ದೇಶಿತ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂದು ಬಲವಾಗಿ ಒತ್ತಾಯಿಸುತ್ತೇನೆ.

ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಹಾಗೂ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ಸ್ಥಾನಗಳನ್ನು ಹೊಂದಿದ್ದೀರಿ. ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬೆಂಗಳೂರಿನ ನಗರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇದು ಸೂಕ್ತ ಸಮಯ ಎಂದಿದ್ದಾರೆ.

ಹೆಬ್ಬಾಳವು ಬೆಂಗಳೂರಿನ ಅತ್ಯಂತ ಕಷ್ಟಕರವಾದ ಟ್ರಾಫಿಕ್ ಜಾಗಗಳಲ್ಲಿ ಒಂದಾಗಿದೆ. ಹೊರ ವರ್ತುಲ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ-44ರ ಜಂಕ್ಷನ್‌ನಲ್ಲಿರುವ ಇದು ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಹಲವು ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ಜಾಗವು ಪ್ರತಿದಿನ ಭಾರೀ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದ್ದಾರೆ.

ಎರಡು ಪ್ರಮುಖ ನಿಲ್ದಾಣಗಳು ಮತ್ತು ಮಲ್ಟಿ-ಮೋಡಲ್ ಹಬ್ ಅನ್ನು ಒಳಗೊಂಡಿರುವ ಈ ಸ್ಥಳದಲ್ಲಿ ಮೆಟ್ರೋದ ಪ್ರಸ್ತಾವಿತ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ಮೆಟ್ರೋ ಏರ್‌ಪೋರ್ಟ್ ಲೈನ್ (ಬ್ಲೂ ಲೈನ್) ಮತ್ತು ಹೊರ ವರ್ತುಲ ರಸ್ತೆಯಲ್ಲಿ 3ನೇ ಹಂತದ ಕಾಮಗಾರಿ ನಡೆಯುತ್ತಿದೆ. ಹೆಬ್ಬಾಳವನ್ನು ಪ್ರಮುಖ ಕೇಂದ್ರವಾಗಿ ಮಾಡಲಿದ್ದು, ಬಿಎಂಟಿಸಿ ಬಸ್‌ಗಳು, ವಿಮಾನ ನಿಲ್ದಾಣದ ಶಟಲ್‌ಗಳು, ಟ್ಯಾಕ್ಸಿಗಳು, ಆಟೋಗಳು ಮೆಟ್ರೋ ಸೇವೆಗಳನ್ನು ಸಂಯೋಜಿಸುವ ಮೂಲಕ ಈ ಕೇಂದ್ರವು ಉತ್ತರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಜೊತೆಗೆ ಲಕ್ಷಾಂತರ ನಾಗರಿಕರಿಗೆ ನೆಮ್ಮದಿಯ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+