ಸರ್ಕಾರದ ವಶಕ್ಕೆ ಐತಿಹಾಸಿಕ, ಶ್ರೀಮಂತ ಬೆಂಗಳೂರು ಕ್ಲಬ್
ಬೆಂಗಳೂರು, ಜುಲೈ 22: ಐತಿಹಾಸಿಕ ಬೆಂಗಳೂರು ಕ್ಲಬ್ ಗೆ ಸೇರಿದ ಅತ್ಯಂತ ಬೆಲೆಬಾಳುವ ಜಮೀನು ಈಗ ಕರ್ನಾಟಕ ಸರ್ಕಾರದ ವಶವಾಗಿದೆ. ಉತ್ತರ ಉಪ ವಿಭಾಗಾಧಿಕಾರಿ ಮಹೇಶ್ಬಾಬು ಅವರ ಆದೇಶದಂತೆ ಈ ವಾರದಲ್ಲೇ ಬೆಂಗಳೂರು ಕ್ಲಬ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.
ವಿಧಾನಸಭೆಯ ಸದನ ಸಮಿತಿ ಸೂಚನೆಯಂತೆ ರೆಸಿಡೆನ್ಸಿ ರಸ್ತೆ ಬಳಿ ಇರುವ ಬೆಂಗಳೂರು ಕ್ಲಬಿಗೆ ಸೇರಿರುವ ವಿವಾದಿತ 13 ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರ ತನ್ನದಾಗಿಸಿಕೊಳ್ಳಲಿದೆ. ಸುಮಾರು 6 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬೆಂಗಳೂರಿನ ಕ್ಲಬಿನ ಈ ವಿವಾದಿತ ಜಮೀನಿನ ಮೌಲ್ಯ ಸುಮಾರು 3 ಸಾವಿರ ಕೋಟಿ ರು ಗೂ ಅಧಿಕ ಎಂದು ಅಂದಾಜಿಸಲಾಗಿದೆ.
1868ರಲ್ಲಿ ಆರಂಭವಾದ ಬೆಂಗಳೂರು ಕ್ಲಬ್ ನಗರದ ಅತಿ ಹಳೆಯ ಕ್ಲಬ್ ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ಪ್ರಧಾನಿಯಾಗಿದ್ದ ವಿನ್ಸ್ಟನ್ ಚರ್ಚಿಲ್ ಹಾಗೂ ಮೈಸೂರು ಮಹಾರಾಜರು ಕ್ಲಬ್ನ ಪ್ರತಿಷ್ಠಿತ ಸದಸ್ಯರಾಗಿದ್ದರು. ಚರ್ಚಿಲ್ ಅವರು ಈ ಕ್ಲಬಿನ ಬಿಲ್ ಪಾವತಿಸಿಲ್ಲ ಎಂಬ ಸುದ್ದಿಯೂ ಈ ಹಿಂದೆ ಬಂದಿತ್ತು.[ಬೆಂಗಳೂರು ಕ್ಲಬ್ಬಿಗೆ ಚರ್ಚಿಲ್ ಬಾಕಿ ಎಷ್ಟು ಗೊತ್ತೆ?]

ಮೈಸೂರು ಒಡೆಯರ ವಶದಲ್ಲಿದ್ದ ಕ್ಲಬ್ ಕೊನೆಗೆ ಪ್ರಜಾಪ್ರಭುತ್ವ ಬಂದ ಮೇಲೆ ಸರ್ಕಾರದ ವಶವಾಗಬೇಕಿತ್ತು. ಆದರೆ, ಕೆಲ ಖಾಸಗಿ ಸಂಸ್ಥೆಗಳು, ಉದ್ಯಮಿಗಳ ಕಿರಿಕಿರಿಯಿಂದ ಸರ್ಕಾರಕ್ಕೆ ಈ ಕ್ಲಬ್ ಕೈವಶವಾಗಿರಲಿಲ್ಲ.
ರಾಜ್ಯದಲ್ಲಿರುವ ಕ್ಲಬ್ಗಳ ವಿವರ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ವರ್ಷದ ಹಿಂದೆ ಸದನ ಸಮಿತಿ ರಚಿಸಲಾಗಿತ್ತು. ಕ್ಲಬ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು. ಸಮಿತಿ ನೀಡಿದ ಆದೇಶದಂತೆ ಈಗ ಕರ್ನಾಟಕ ಸರ್ಕಾರದ ವಶಕ್ಕೆ ಬೆಂಗಳೂರು ಕ್ಲಬ್ ಸೇರಲಿದೆ.
ಕ್ಲಬ್ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ವಿವಾದಿತ ಜಮೀನು ಸರ್ಕಾರದ ವಶವಾಗಲಿದೆ. ಅದರೆ, ಕ್ಲಬ್ ಅಸ್ತಿತ್ವಕ್ಕೆ ಇದರಿಂದ ಧಕ್ಕೆ ಏನು ಆಗುವುದಿಲ್ಲ ಎಂದು ಬೆಂಗಳೂರು ಕ್ಲಬ್ ನ ಉಪಾಧ್ಯಕ್ಷ ಥಾಮಸ್ ಚಾಂಡಿ ಹೇಳಿದ್ದಾರೆ.
'ಕ್ಲಬ್ನ ಪದಾಧಿಕಾರಿಗಳು ಪಾಲಿಕೆಗೆ ವಾರ್ಷಿಕ 20 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಕ್ಲಬ್ನ ಸದಸ್ಯತ್ವ ನೀಡಲು ಒಂದು ಕೋಟಿ ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಒಂದು ಲಕ್ಷ ರೂ. ಮೌಲ್ಯವಿದ್ದು, 13 ಎಕರೆಗೆ 5,662 ಕೋಟಿ ರೂ.ಗಿಂತ ಹೆಚ್ಚು ಬೆಲೆಬಾಳುವ ಆಸ್ತಿ ಇದಾಗಿದೆ ಎಂದು ಬಿಬಿಎಂಪಿ ಸದಸ್ಯರಾಗಿದ್ದ ಪದ್ಮನಾಭ ರೆಡ್ಡಿ ಅವರು ಈ ಹಿಂದೆ ಆಕ್ಷೇಪ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications