ಬೊಮ್ಮನಹಳ್ಳಿಯಲ್ಲಿ ಹ್ಯಾಟ್ರಿಕ್ ಗೆಲುವಿನತ್ತ ಸತೀಶ್ ರೆಡ್ಡಿ ಹೆಜ್ಜೆ.!
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಭಾರಿ ರೋಚಕತೆಯಿಂದ ಕೂಡಿದ್ದು, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಮುಂದೆ ಸಾಗುತ್ತಿದೆ. ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಷ್ಮಾರಾಜ್ ಗೋಪಾಲ್ ರೆಡ್ಡಿ ಅವರು ಎದುರಾಳಿಯಾಗಿದ್ದು, ಮೊದಲ ಸುತ್ತಿನಿಂದಲೂ ಹಿನ್ನಡೆಯಲ್ಲಿದ್ದಾರೆ. ಇದುವರೆಗೂ ಆರು ಸುತ್ತು ಮತ ಎಣಿಕೆ ನಡೆದಿದ್ದು, ಸತೀಶ್ ರೆಡ್ಡಿ ಆರಂಭದಿಂದಲೂ ಮುನ್ನಡೆಯಲ್ಲಿದ್ದಾರೆ.
ಈಗಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸತೀಶ್ ರೆಡ್ಡಿ ಈ ಬಾರಿ ಆಯ್ಕೆಯಾದರೇ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಸತತ 10 ವರ್ಷ ಆಳ್ವಿಕೆ ನಡೆಸಿರುವ ಸತೀಶ್ ರೆಡ್ಡಿ ಅವರು ಬೊಮ್ಮನಹಳ್ಳಿಯಲ್ಲಿ ಪ್ರಭಾವಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.













Click it and Unblock the Notifications