ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ರಂಗತಂಡದಿಂದ ಬೆಂಗಳೂರಿನಲ್ಲಿ ನಾಟಕೋತ್ಸವ

|
Google Oneindia Kannada News

ಶಿವಮೊಗ್ಗದ ಹೆಸರಾಂತ ರಂಗತಂಡವಾದ ಹೊಂಗಿರಣ ಈಗ ಬೆಂಗಳೂರಿನಲ್ಲಿ ಒಂದು ನಾಟಕೋತ್ಸವನ್ನು ಆಯೋಜನೆ ಮಾಡಿದೆ. ಹೊಂಗಿರಣೋತ್ಸವ ಹೆಸರಿನಲ್ಲಿ 7ನೇ ಬಾರಿ ಈ ಕಾರ್ಯಕ್ರಮ ನಡೆಯುತ್ತಿದೆ.

ಮೂರು ದಿನಗಳ ನಾಟಕೋತ್ಸವ ಇದಾಗಿದ್ದು, ಅಕ್ಟೋಬರ್ 12, 13, ಹಾಗೂ 14 ರಂದು ನಾಟಕಗಳ ಪ್ರದರ್ಶನ ಆಗುತ್ತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ನಾಟಕಗಳು ಶುರು ಆಗಲಿವೆ.

kannada drama festival will be held in october

ಮೊದಲ ದಿನ : ನನ್ನ ಪ್ರೀತಿಯ ನರಕ..!?

ರಚನೆ : ಎಸ್ ಆರ್ ಗಿರೀಶ್ (ಚಂದ್ರಗಿರಿ)

ನಿರ್ದೇಶನ : ಡಾ. ಸಾಸ್ವೆಹಳ್ಳಿ ಸತೀಶ್

ಅಭಿನಯ : ಹೊಂಗಿರಣ

ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ನಾಳೆ ಪ್ರದರ್ಶನ ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ನಾಳೆ ಪ್ರದರ್ಶನ

ಎರಡನೇ ದಿನ : ಬಯಲು ಸೀಮೆ ಕಟ್ಟೆಪುರಾಣ

ರಚನೆ : ಬಿ ಚಂದ್ರೇಗೌಡ

ನಿರ್ದೇಶನ : ಎಸ್ ಆರ್ ಗಿರೀಶ್ (ಚಂದ್ರಗಿರಿ)

ಅಭಿನಯ : ನಮ್ ಟೀಮ್, ಶಿವಮೊಗ್ಗ

kannada drama festival will be held in october

ಮೂರನೇ ದಿನ : ವೀರ ಉತ್ತರಕುಮಾರ

ರಚನೆ, ವಿನ್ಯಾಸ, ನಿರ್ದೇಶನ : ಡಾ. ಸಾಸ್ವೆಹಳ್ಳಿ ಸತೀಶ್

ಅಭಿನಯ : ಹೊಂಗಿರಣ

ರಂಗಭೂಮಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳುವ 'ಸರ್ಗ' ರಂಗಭೂಮಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳುವ 'ಸರ್ಗ'

ಈ ಮೂರು ನಾಟಕಗಳು ಹಾಸ್ಯಮಯವಾಗಿವೆ. ರಂಗಭೂಮಿಯಲ್ಲಿ ಒಳ್ಳೆಯ ಹೆಸರು ಮಾಡಿರುವ ಡಾ. ಸಾಸ್ವೆಹಳ್ಳಿ ಸತೀಶ್ ಅವರ ಸಾರಥ್ಯದಲ್ಲಿ ಈ ನಾಟಕಗಳು ರೂಪುಗೊಂಡಿವೆ. ಮುಂದಿನ ತಿಂಗಳು ಬಿಡುವು ಮಾಡಿಕೊಂಡು ನೀವು ಈ ನಾಟಕಗಳನ್ನು ನೋಡಿ.

English summary
Kannada drama festival will be held in October 12, 13 and 14. The play is directed by Sasvehalli Sathish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X