ಸಹಾಯ ನಿಧಿಗಾಗಿ 10 ಸಂಗೀತ ದಿಗ್ಗಜರಿಂದ ಶೋ
ಬೆಂಗಳೂರು, ಜೂನ್ 15: ಜೂನ್ 17 ರಂದು ಅಂಬೇಡ್ಕರ್ ಭವನದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಬೆಂಗಳೂರು ದಕ್ಷಿಣ ವಿಭಾಗದಿಂದ ಮನೋರಂಜನಾ ಸಹಾಯ ನಿಧಿ ಕಾರ್ಯಕ್ರಮವಿದೆ.
ಕಲಾ ಸಂಗಮದ ತಂಡದ ಕಲೆ ಹಾಗು ಸಂಗೀತ ಲೋಕದ ಹತ್ತು ನುರಿತ ಕಲಾವಿದರು ತಮ್ಮ ಅದ್ಭತ ಕಲಾ ಪ್ರದರ್ಶನದ ಮೂಲಕ ನಿಮ್ಮನ್ನು ಮನ ರಂಜಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಖರ್ಚು ಮಾಡುವ ಪ್ರತಿ ಮೊತ್ತವು ಅಸಹಾಯಕ ಮಕ್ಕಳ ಬಾಳು ಬೆಳಗಲು ಬಳಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.
ಕಲಾ ಸಂಗಮ: ಇದೊಂದು ಕ್ರಿಯಾತ್ಮಕ ಅಬ್ಬರದ ಪ್ರದರ್ಶನವಾಗಿದ್ದು ದ್ರುಶ್ಯ ಕಲೆ ಹಾಗು ಸಂಗೀತದ ಸಮ್ಮಿಳನವಾಗಿದೆ. ವಿದೇಶದಲ್ಲಿ ವೈಶಿಷ್ಟ್ಯ ವಿನ್ಯಾಸ ಕಾರ್ಯಕ್ರಮ ಪ್ರದರ್ಶಿಸಿ ಜೈತ್ರಯಾತ್ರೆ ಮುಗಿಸಿ ಬಂದ ದೇಶೀಯ ಸಂಗೀತಗಾರರ ಒಕ್ಕೂಟವಾಗಿದೆ.

ಕನ್ನಡ ಸುಗಮ ಸಂಗೀತ ಕ್ಷೇತ್ರದಿಂದ ಆಯ್ದ ಗೀತೆಗಳು ಹಾಗು ಸಮಕಾಲೀನ ಪ್ರಪಂಚದ ಸಮ್ಮಿಳಿತ ಗೀತೆಗಳಿಗೆ ಮೆರುಗನ್ನು ನೀಡುವಾಗ ನುರಿತ ಕಲಾವಿದರು ಕ್ಯಾನವಾಸ್ ಬೋರ್ಡನ ಮೇಲೆ ಚಿತ್ರ ಗಳನ್ನು ಬಿಡಿಸಲಿದ್ದಾರೆ. ಸ್ಪೀಡ್ ಪೇಯಿಂಟಿಂಗ್. ಸ್ಯಾಂಡ್ ಆರ್ಟ್.ಶ್ಯಾಡೋ ಪ್ಲೇ.ಹಾಗು ವಾಟರ್ ಪೇಂಟಿಂಗ್.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98458 25725 / 80959 04455
ಟಿಕೆಟ್ ಗಳು : ಟಾಕ್ ಆಫ್ ದಿ ಟೌನ್.ಇನ್ ವೆಬ್ ಸೈಟ್ ನಲ್ಲಿ ಲಭ್ಯ (ಒನ್ಇಂಡಿಯಾ ಸುದ್ದಿ)












Click it and Unblock the Notifications