ರಂಗಶಂಕರದಲ್ಲಿ ಜೋಗಿಯವರ ಆಸ್ಕ್ ಮಿ ವೈಎನ್ಕೆ
ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡುವುದು ಏನಕೆ? ಆಸ್ಕ್ ಮಿಸ್ಟರ್ ವೈಎನ್ಕೆ... ಎಂಬುದು YNK ಎಂದೇ ಖ್ಯಾತರಾಗಿದ್ದ ಪತ್ರಕರ್ತ ವೈಎನ್ ಕೃಷ್ಣಮೂರ್ತಿ ಅವರು ಬರೆದಿದ್ದ ಚುಟುಕು ಕವನ. ಈ ಕವನದ ಸಾಲೊಂದನ್ನು ಸ್ಫೂರ್ತಿಯಾಗಿಟ್ಟುಕೊಂಡು ಹಾಸ್ಯ ನಾಟಕ ಬರೆದಿರುವುದು ಜೋಗಿ ಎಂದು ಹೆಸರುವಾಸಿಯಾಗಿರುವ ಪತ್ರಕರ್ತ ಗಿರೀಶ್ ರಾವ್.
ಜೋಗಿ ವಿರಚಿಸಿರುವ "ಆಸ್ಕ್ ಮಿಸ್ಟರ್ ವೈಎನ್ಕೆ" ಹಾಸ್ಯ ನಾಟಕವನ್ನು punಡಿತ ಎಂದೆ ಖ್ಯಾತಿಯಾಗಿರುವ ಯೆಳಂದೂರು ನರಸಿಂಹಮೂರ್ತಿ ಕ್ರಿಷ್ಣಮೂರ್ತಿ (YNK) ಅವರಿಗೆ ಅರ್ಪಣೆ ಮಾಡಲಾಗಿದೆ.[ತುಳು ರಂಗಭೂಮಿಯಲ್ಲಿ ಹೊಸ ದಾಖಲೆಗೆ ಕ್ಷಣಗಣನೆ]

ಮಂಜು ನಾರಾಯಣ್ ಅವರು ನಿರ್ದೇಶಿಸಿರುವ ಈ ನಾಟಕವನ್ನು ಏಪ್ರಿಲ್ 4ರಂದು ಸಂಜೆ 7.30ಕ್ಕೆ ರಂಗಪ್ರತಿಭೆ ತಂಡ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶಿಸುತ್ತಿದೆ. ಟಿಕೆಟ್ ಬೆಲೆ ಕೇವಲ 100 ರುಪಾಯಿಗಳು.
ಈ ನಾಟಕವನ್ನು ನಿರ್ದೇಶಿಸಿರುವವರು ಬೆಳಕು ತಜ್ಞ ಮಂಜು ನಾರಾಯಣ್. ಈ ನಾಟಕವನ್ನು ಮಂಜು ನಾರಾಯಣ್ ಅವರು ಹಲವಾರು ಪ್ರದರ್ಶಿಸಿದ್ದು, ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಈವರೆಗೆ ನಾಲ್ಕು ಪ್ರದರ್ಶನ ಯಶಸ್ವಿಯಗಿದ್ದು, ಇದೀಗ ಐದನೆ ಬಾರಿ ಈ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.[ನಾಟಕಚೈತ್ರ 2017 : ಎರಡು ನಾಟಕಗಳ ವಿಮರ್ಶೆ]

ನಾಟಕದ ಬಗ್ಗೆ : ದಾಂಪತ್ಯದಲ್ಲಿನ ಏಳು ಬೀಳು, ಆಗು ಹೋಗುಗಳನ್ನು ಹಾಸ್ಯಮಯವಾಗಿ YNKಯವರ "ಘಾ" ಪಾತ್ರದ ಮೂಲಕ ತೋರಿಸಿದ್ದಾರೆ ಜೋಗಿ. ಮಾಡರ್ನ್ ವಿಶ್ವಾಮಿತ್ರ ಮತ್ತು ಮೇನಕೆ, "ದಾಂಪತ್ಯ ನಿರ್ಮೂಲನ ಯೋಜನೆ"ಯಡಿ ತಮ್ಮ ದಾಂಪತ್ಯವನ್ನು ನಿರ್ಮೂಲನೆ ಮಾಡಿಕೊಳ್ಳಲು ಹೊರಡುತ್ತಾರೆ. ಹೆಂಡತಿ ಅಂದರೆ ಬರಿ ಮನೆ ಕೆಲಸ ಮಾಡುವ ಆಳಲ್ಲ, ಆಕೆ ಒಂಟಿಯಾಗಿ ಬದುಕಬಲ್ಲಳು ಎನ್ನುತ್ತಾಳೆ ಮೇನಕೆ. ಹೆಂಡತಿ ಅಂದ್ರೆ ಸಿಲ್ಲಬಸ್ ನಲ್ಲೇ ಇಲ್ಲದೆ ಇರೊ ಪ್ರಶ್ನೆ ಇದ್ದ ಹಾಗೆ ಅಂತಾನೆ ವಿಶ್ವಾಮಿತ್ರ.
ಇದರ ಮಧ್ಯೆಯು, ಪ್ರೀತಿಯಲ್ಲಿ, ಮದುವೆಯಲ್ಲಿ ನಂಬಿಕೆ ಇಟ್ಟಿರುವ ಮಾಡರ್ನ್ ಶಕುಂತಲೆ ಮತ್ತು ದುಶ್ಯಂತ. ಆದರೆ ಹೀಗೆ ದಾಂಪತ್ಯ ನಿರ್ಮೂಲನೆ ಮಾಡಬಹುದೆ? ಸಮಜಕ್ಕೆ ಇದರಿಂದ ಆಗುವ ಪರಿಣಾಮವೇನು? ಇದರಿಂದ ಲಾಭವೆ? ಮದುವೆ ಅನ್ನೋದು ವ್ಯವಸ್ಥೆಯೊ ಅಥವ ಅವ್ಯವಸ್ಥೆಯೊ? ಇದೆಲ್ಲ ತಿಳಿಯಬೇಕಾದರೆ, ನಾಟಕವನ್ನು ನೋಡಲೆಬೇಕು.[ಬೀದಿಯೊಳಗೊಂದು ಮನೆಯ ಮಾಡಿ ಮತ್ತೊಮ್ಮೆ ನೋಡಿ]
ತಂಡ - ರಂಗಪ್ರತಿಭೆ
ರಚನೆ - ಜೋಗಿ
ಸಂಗೀತ - ಅರ್ಜುನ್ ರಾಮು ಮತ್ತು ತೇಜಸ್ವಿ ಹರಿದಾಸ್
ವಿನ್ಯಾಸ ಮತ್ತು ನಿರ್ದೇಶನ - ಮಂಜು ನಾರಾಯಣ್
4/4/2017, ರಂಗಶಂಕರ, ಜೆ.ಪಿ.ನಗರ, ಸಂಜೆ 7:30 (5ನೇ ಪ್ರದರ್ಶನ)
ಟಿಕೆಟ್ ದರ-100 ರುಪಾಯಿ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications