ಗೂಗಲ್ ಭಾಷಾಂತರದಲ್ಲಿ ಪಾಲ್ಗೊಳ್ಳಿ ಆಂಡ್ರಾಯ್ಡ್ ಒನ್ ಫೋನ್ ಗೆಲ್ಲಿ!
ಬೆಂಗಳೂರು, ಡಿ.23: ಭಾರತದಲ್ಲಿ 22 ಅಧಿಕೃತ ಭಾಷೆಗಳಿವೆ. ಗೂಗಲ್ ಟ್ರಾನ್ಸ್ ಲೇಟ್ ಟೂಲ್ ಬಳಸಿ 9 ಭಾಷೆಗಳನ್ನು ಭಾಷಾಂತರಗೊಳಿಸಿ ಓದಬಹುದಾಗಿದೆ. ಭಾಷೆ ಬಗ್ಗೆ ಅಭಿಮಾನವುಳ್ಳ ಬೆಂಗಾಳಿ, ತೆಲುಗು, ತಮಿಳು ಭಾಷಿಕರು ಈ ಕಾರ್ಯವನ್ನು ಸಾಧಿಸಿದ್ದಾರೆ. ಈಗ ಕನ್ನಡ ಸೇರಿದಂತೆ ಮಿಕ್ಕ ಭಾಷಿಗರಿಗೆ ಅವಕಾಶ ಲಭ್ಯವಾಗಿದೆ.
ಗೂಗಲ್ ಭಾರತದಲ್ಲಿ ಎರಡನೇ ಟ್ರಾನ್ಸ್ಲೇಥನ್ ಆರಂಭಿಸಿದ್ದು, ಕನ್ನಡ, ಹಿಂದಿ, ಬೆಂಗಾಳಿ, ತೆಲುಗು, ತಮಿಳು, ಮರಾಠಿ, ಗುಜರಾತಿ, ಮಲೆಯಾಳಂ ಹಾಗೂ ಪಂಜಾಬಿ ಭಾಷೆಗೆ ಭಾಷಾಂತರ ಮಾಡುವ ಅವಕಾಶ ಸಿಕ್ಕಿದೆ.ವಿವಿಧ ಭಾಷೆಗಳಲ್ಲಿ ಸೇವೆಯನ್ನು ನೀಡುತ್ತಿರುವ ಗೂಗಲ್ ಭಾರತೀಯ ಬಳಕೆದಾರರಿಗೆ ಅವರ ಭಾಷೆಯಲ್ಲೇ ತನ್ನ ಸೇವೆಯನ್ನು ನೀಡುತ್ತಿದೆ.[ಕನ್ನಡ ಭಾಷಾಂತರಕಾರರಿಗೆ ಗೂಗಲ್ ನಿಂದ ಅನ್ಯಾಯ]

ನೀವು ನಿಮ್ಮ ಫೋನ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ, ಸ್ವೈಪ್ ಅಥವಾ ಟಾಪ್ ಮಾಡಿ ನೀವು ಮಾತನಾಡುವ ಭಾಷೆಯ ಭಾಷಾಂತರ ಕಾರ್ಯಕ್ಕೆ ಮುಂದಾಗಬಹುದು.[ಭಾರತಕ್ಕಾಗಿ ಗೂಗಲ್, ಪಿಚ್ಚೈ ಹಂಚಿದ ಕನಸುಗಳೇನು?]
ಈಗಾಗಲೇ ಆರಂಭಗೊಂಡಿರುವ ಗೂಗಲ್ ಟ್ರಾನ್ ಲಾಥನ್ ಡಿಸೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ಗೂಗಲ್ ಅಕೌಂಟಿನಿಂದ ಲಾಗಿನ್ ಆಗಿ ಗೂಗಲ್ ಟ್ರಾನ್ಸ್ಲೇಥನ್ ಕಮ್ಯೂನಿಟಿಗೆ ಹೋಗಿ ಅಲ್ಲಿ ನೀಡಲಾಗಿರುವ ಸರಳ ವಾಕ್ಯಗಳನ್ನು ಭಾಷಾಂತರ ಮಾಡಬೇಕು. ಅತಿ ಹೆಚ್ಚು ಕ್ರಿಯಾಶೀಲರಾದ 50 ಬಳಕೆದಾರರಿಗೆ ಆಂಡ್ರಾಯ್ಡ್ ಒನ್ ಫೋನ್ ಗೆಲ್ಲಬಹುದು.
ಕಳೆದ ವರ್ಷ ಸುಮಾರು 20 ಸಾವಿರ ಜನ ಲಕ್ಷಾಂತರ ಪದಗಳ ಭಾಷಾಂತರ ಕಾರ್ಯದಲ್ಲಿ ತೊಡಗಿದ್ದರು. ಇದರಿಂದ ಇಂಗ್ಲೀಷ್ ಭಾಷೆ ಗೊತ್ತಿಲ್ಲದೆ ಆನ್ ಲೈನ್ ಗೆ ಬಂದು ಮಾಹಿತಿ ಹುಡುಕುವ ಅನೇಕ ಮಂದಿಗೆ ನೆರವಾಗಲಿದೆ. ತಮ್ಮದೇ ಭಾಷೆ, ಪದ, ವಾಕ್ಯಗಳನ್ನು ಹುಡುಕಿಕೊಳ್ಳಬಹುದು.ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ತುರ್ಜುಮೆ ಕಾರ್ಯ ಮುಂದುವರೆಸಿ. ನೋಂದಾಯಿಸಿಕೊಳ್ಳಲು ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications