ಗೂಗಲ್ ಭಾಷಾಂತರದಲ್ಲಿ ಪಾಲ್ಗೊಳ್ಳಿ ಆಂಡ್ರಾಯ್ಡ್ ಒನ್ ಫೋನ್ ಗೆಲ್ಲಿ!
ಬೆಂಗಳೂರು, ಡಿ.23: ಭಾರತದಲ್ಲಿ 22 ಅಧಿಕೃತ ಭಾಷೆಗಳಿವೆ. ಗೂಗಲ್ ಟ್ರಾನ್ಸ್ ಲೇಟ್ ಟೂಲ್ ಬಳಸಿ 9 ಭಾಷೆಗಳನ್ನು ಭಾಷಾಂತರಗೊಳಿಸಿ ಓದಬಹುದಾಗಿದೆ. ಭಾಷೆ ಬಗ್ಗೆ ಅಭಿಮಾನವುಳ್ಳ ಬೆಂಗಾಳಿ, ತೆಲುಗು, ತಮಿಳು ಭಾಷಿಕರು ಈ ಕಾರ್ಯವನ್ನು ಸಾಧಿಸಿದ್ದಾರೆ. ಈಗ ಕನ್ನಡ ಸೇರಿದಂತೆ ಮಿಕ್ಕ ಭಾಷಿಗರಿಗೆ ಅವಕಾಶ ಲಭ್ಯವಾಗಿದೆ.
ಗೂಗಲ್ ಭಾರತದಲ್ಲಿ ಎರಡನೇ ಟ್ರಾನ್ಸ್ಲೇಥನ್ ಆರಂಭಿಸಿದ್ದು, ಕನ್ನಡ, ಹಿಂದಿ, ಬೆಂಗಾಳಿ, ತೆಲುಗು, ತಮಿಳು, ಮರಾಠಿ, ಗುಜರಾತಿ, ಮಲೆಯಾಳಂ ಹಾಗೂ ಪಂಜಾಬಿ ಭಾಷೆಗೆ ಭಾಷಾಂತರ ಮಾಡುವ ಅವಕಾಶ ಸಿಕ್ಕಿದೆ.ವಿವಿಧ ಭಾಷೆಗಳಲ್ಲಿ ಸೇವೆಯನ್ನು ನೀಡುತ್ತಿರುವ ಗೂಗಲ್ ಭಾರತೀಯ ಬಳಕೆದಾರರಿಗೆ ಅವರ ಭಾಷೆಯಲ್ಲೇ ತನ್ನ ಸೇವೆಯನ್ನು ನೀಡುತ್ತಿದೆ.[ಕನ್ನಡ ಭಾಷಾಂತರಕಾರರಿಗೆ ಗೂಗಲ್ ನಿಂದ ಅನ್ಯಾಯ]

ನೀವು ನಿಮ್ಮ ಫೋನ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ, ಸ್ವೈಪ್ ಅಥವಾ ಟಾಪ್ ಮಾಡಿ ನೀವು ಮಾತನಾಡುವ ಭಾಷೆಯ ಭಾಷಾಂತರ ಕಾರ್ಯಕ್ಕೆ ಮುಂದಾಗಬಹುದು.[ಭಾರತಕ್ಕಾಗಿ ಗೂಗಲ್, ಪಿಚ್ಚೈ ಹಂಚಿದ ಕನಸುಗಳೇನು?]
ಈಗಾಗಲೇ ಆರಂಭಗೊಂಡಿರುವ ಗೂಗಲ್ ಟ್ರಾನ್ ಲಾಥನ್ ಡಿಸೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ಗೂಗಲ್ ಅಕೌಂಟಿನಿಂದ ಲಾಗಿನ್ ಆಗಿ ಗೂಗಲ್ ಟ್ರಾನ್ಸ್ಲೇಥನ್ ಕಮ್ಯೂನಿಟಿಗೆ ಹೋಗಿ ಅಲ್ಲಿ ನೀಡಲಾಗಿರುವ ಸರಳ ವಾಕ್ಯಗಳನ್ನು ಭಾಷಾಂತರ ಮಾಡಬೇಕು. ಅತಿ ಹೆಚ್ಚು ಕ್ರಿಯಾಶೀಲರಾದ 50 ಬಳಕೆದಾರರಿಗೆ ಆಂಡ್ರಾಯ್ಡ್ ಒನ್ ಫೋನ್ ಗೆಲ್ಲಬಹುದು.
ಕಳೆದ ವರ್ಷ ಸುಮಾರು 20 ಸಾವಿರ ಜನ ಲಕ್ಷಾಂತರ ಪದಗಳ ಭಾಷಾಂತರ ಕಾರ್ಯದಲ್ಲಿ ತೊಡಗಿದ್ದರು. ಇದರಿಂದ ಇಂಗ್ಲೀಷ್ ಭಾಷೆ ಗೊತ್ತಿಲ್ಲದೆ ಆನ್ ಲೈನ್ ಗೆ ಬಂದು ಮಾಹಿತಿ ಹುಡುಕುವ ಅನೇಕ ಮಂದಿಗೆ ನೆರವಾಗಲಿದೆ. ತಮ್ಮದೇ ಭಾಷೆ, ಪದ, ವಾಕ್ಯಗಳನ್ನು ಹುಡುಕಿಕೊಳ್ಳಬಹುದು.ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ತುರ್ಜುಮೆ ಕಾರ್ಯ ಮುಂದುವರೆಸಿ. ನೋಂದಾಯಿಸಿಕೊಳ್ಳಲು ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications