Get Updates
Get notified of breaking news, exclusive insights, and must-see stories!

ಶುಕ್ರವಾರದ ಕೆಲವು ವೈವಿಧ್ಯಮಯ ಸುದ್ದಿಗಳು

ಬೆಂಗಳೂರು, ಸೆಪ್ಟೆಂಬರ್,11 : ರಾಷ್ಟ್ರಾದ್ಯಾಂತ ಹಲವಾರು ವಿಭಿನ್ನ, ವಿಶೇಷ ಸಂದರ್ಭಗಳು ಮೇಳೈಸಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಟಿ ತಮನಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇವರೆಲ್ಲಾ ಪಾಲ್ಗೊಂಡಿದ್ದ ಹಲವಾರು ಸಂದರ್ಭಗಳ ಗುಚ್ಛವೇ ಈ ಶುಕ್ರವಾರದ ಸುದ್ದಿ ವಿಶೇಷ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೊಸ ಯೋಜನೆಯಾದ ನವ ಗೃಹ ಯೋಜನೆಗೆ ಚಾಲನೆ. ರಾಷ್ರಪತಿ ಭವನದಲ್ಲಿ ಸ್ವಚ್ಛ ಭಾರತ ಅಭಿಯಾನದಿಂದ ಚಹಾ ಕೂಟ ಏರ್ಪಟು. ಮುಂಬೈಯಲ್ಲಿ ಮಾಂಸ ನಿಷೇಧ ಕುರಿತಾಗಿ ಭುಗಿಲೆದ್ದ ಆಕ್ರೋಶ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡ ರೈತ ಯಾತ್ರೆ. ಎಫ್ ಟಿಐಐ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ. [ಚಿತ್ರಗಳಲ್ಲಿ: ದಿಗ್ಗಜ ಕ್ರಿಕೆಟ್ ಪಾಠ, ಸೆರೆನಾ ಅದ್ಭುತ ಆಟ]

ಈ ಎಲ್ಲಾ ಘಟನೆಗಳು ಶುಕ್ರವಾರ ರಾಷ್ಟ್ರದಾದ್ಯಂತ ಜರುಗಿದವು. ಒಟ್ಟಿನಲ್ಲಿ ಈ ಸುದ್ದಿಗಳು ಗಣ್ಯರ ಹಲವಾರು ಚಟುವಟಿಕೆಗಳ ಮೇಲೆ ಬೆಳಕು ಬೀರಲಿದೆ. ಅವರು ಭಾಗವಹಿಸಿದ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಲಿದೆ. ಹಾಗಾದರೆ ಶುಕ್ರವಾರದ ಸುದ್ದಿ ವಿಶೇಷತೆಗಳೇನು?

ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ಒಂದೆಡೆ

ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ಒಂದೆಡೆ

ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯನ್ ನ ನಿರ್ದೇಶಕ ಗಜೇಂದ್ರ ಚೌಹಾಣ್ ವಿಷಯದಲ್ಲಿ ಎದ್ದ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಸಲುವಾಗಿ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಸಾಕ್ಷ್ಯ ಚಿತ್ರ ನಿರ್ದೇಶಕ ಆನಂದ್ ಪಟವರ್ಧನ್ ಮುಂಬೈನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಕಂಡದ್ದು ಹೀಗೆ.

ಕೆಲವರು ನಿಂತರು, ಹಲವರು ಕೂತರು

ಕೆಲವರು ನಿಂತರು, ಹಲವರು ಕೂತರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಮಿಷನ್ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಚಹಾ ಕೂಟದಲ್ಲಿ ಹಲವಾರು ಗಣ್ಯರ ಸಮಾಗಮವಾಯಿತು. ಇದರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ಸಂಸದೀಯ ಸಚಿವ ಎಂ. ವೆಂಕಯ್ಯನಾಯ್ಡು, ಕೈಗಾರೀಕೋದ್ಯಮ ಅನಿಲ್ ಅಂಬಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನಟ ಮತ್ತು ನಿರ್ದೇಶಕ ಕಮಲ್ ಹಾಸನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೀಗೆ ನಾನಾ ಗಣ್ಯರು ಪಾಲಲ್ಗೊಂಡಿದ್ದರು.

ನವಗೃಹ ಯೋಜನೆಯಲ್ಲಿ ನರೇಂದ್ರ ಮೋದಿ

ನವಗೃಹ ಯೋಜನೆಯಲ್ಲಿ ನರೇಂದ್ರ ಮೋದಿ

ಭಾರತದ ಹಲವಾರು ರಾಜ್ಯ ಹಾಗೂ ನಗರಗಳು ಸೇರಿಕೊಂಡು ನವಗೃಹ ಯೋಜನೆಯನ್ನು ಶುಕ್ರವಾರ ಆರಂಭಿಸಿದರು. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ನಡೆದ 'ನವಗೃಹ ಯೋಜನಾ' ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮನೆ ಬೀಗದ ಕೀ ಕೊಟ್ಟು, ಶುಭ ಕೋರಿದರು.

ಮಾಂಸ ಮಾರಾಟ ನಿಷೇಧದ ವಿರುದ್ಧ

ಮಾಂಸ ಮಾರಾಟ ನಿಷೇಧದ ವಿರುದ್ಧ

ಜೈನ ಧರ್ಮದ ಪರ್ಯೂಷಣ್ ಉಪವಾಸ ವ್ರತದ ಪ್ರಯುಕ್ತ ಕಾಸ್ಮೋಪಾಲೀಟನ್ ಸಿಟಿ ಮುಂಬೈನಲ್ಲಿ ಸೆಪ್ಟೆಂಬರ್, 10, 13, 17, 18ರಂದು ಮಾಂಸ ಮಾರಾಟ ಹಾಗೂ ಪ್ರಾಣಿವಧೆಯನ್ನು ಮುಂಬೈ ನಗರ ಪಾಲಿಕೆ ನಿಷೇಧಿಸಿದೆ. ಈ ಆದೇಶವನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಕೋಳಿ, ಮೀನುಗಳನ್ನು ಮುಂದೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ಒಡಿಶಾದ ಪಾದಯಾತ್ರೆಯಲ್ಲಿ ರಾಹುಲ್

ಒಡಿಶಾದ ಪಾದಯಾತ್ರೆಯಲ್ಲಿ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ರೈತರನ್ನು ಬದುಕಿಸಿ ಎಂಬ ಪಾದಯಾತ್ರೆ ಕೈಗೊಂಡಿದ್ದು, ಒಡಿಶಾದ ಬರಗಾರ್ ಜಿಲ್ಲೆಯ ದೆಬಹಾಲ್ ಜಿಲ್ಲೆಯಲ್ಲಿನ ಯುವತಿಯರತ್ತ ರಾಹುಲ್ ಕೈ ಕುಲುಕಿದ್ದು ಹೀಗೆ.

ಕ್ರಿಕೆಟರ್ ಸಚಿನ್ ಮತ್ತು ನಟಿ ತಮನ್ನಾ

ಕ್ರಿಕೆಟರ್ ಸಚಿನ್ ಮತ್ತು ನಟಿ ತಮನ್ನಾ

ನವದೆಹಲಿಯ ರಾಷ್ಟಪತಿ ಭವನದಲ್ಲಿ ಸ್ವಚ್ಛಭಾರತ ಅಭಿಯಾನ ಏರ್ಪಡಿಸಿದ್ದ ಸಹಾ ಕೂಟದಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಹಾಗೂ ಸಿನಿಮಾ ನಟಿ ತಮನ್ನಾ ಕಾಣಿಸಿದ್ದು ಹೀಗೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+