ಬೇಸಿಗೆಗೂ ಮುನ್ನವೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್?!
ಬೆಂಗಳೂರು, ಜನವರಿ 21: ಈಗಾಗಲೇ ಅಗತ್ಯ ವಸ್ತುಗಳು, ತರಕಾರಿ ಮತ್ತು ಇಂಧನ ದರ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಬೇಸಿಗೆಗೂ ಮುನ್ನವೇ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಬಿಸಿ ಮುಟ್ಟಲಿದೆ.
ನಿರ್ವಹಣಾ ವೆಚ್ಚ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಿಸಲು ಮುಂದಾಗಿದ್ದು, ಸದ್ಯದಲ್ಲೇ ವಿದ್ಯುತ್ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.
ಈ ಕುರಿತು ಸುಳಿವು ನೀಡಿರುವ ಇಂಧನ ಸಚಿವ ವಿ.ಸುನಿಲ್ ಕುಮಾರ್, ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯ. ವಿದ್ಯುತ್ ಮಾರ್ಗ ಬದಲಾವಣೆ, ಹೊಸ ಉಪ ವಿಭಾಗ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಕೊಟ್ಟ ನಂತರ ವಿದ್ಯುತ್ ವಿತರಣಾ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿವೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಾಲ್ಕು ಸಾವಿರ ಕೋಟಿ ರೂ. ಸೇರಿದಂತೆ ಬೆಂಗಳೂರು ಜಲ ಮಂಡಳಿ, ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಇಲಾಖಾವಾರು ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿದ್ಯುತ್ ಬಾಕಿ ಪಾವತಿಗೆ ಪ್ರಯತ್ನಿಸಲಾಗುವುದು ಎಂದರು.
ರಾಜ್ಯದಲ್ಲಿ
ಕಲ್ಲಿದ್ದಲು
ಸಮಸ್ಯೆ
ಇಲ್ಲ
ಸದ್ಯಕ್ಕೆ
ರಾಜ್ಯದಲ್ಲಿ
ಕಲ್ಲಿದ್ದಲು
ಸಮಸ್ಯೆ
ಇಲ್ಲ.
ವಿದ್ಯುತ್
ಬಳಕೆ
ಪ್ರಮಾಣ
15,000
ಮೆಗಾವ್ಯಾಟ್ನಷ್ಟಿದ್ದು,
ಈ
ಬಾರಿ
ಮಳೆ
ಚೆನ್ನಾಗಿ
ಆಗಿರುವುದರಿಂದ
ಬೇಸಿಗೆಯಲ್ಲಿ
ವಿದ್ಯುತ್
ಸಮಸ್ಯೆ
ಉಂಟಾಗುವುದಿಲ್ಲ
ಎಂದು
ಹೇಳಿದರು.
ಟಿಸಿ ಸುಟ್ಟು ಹೋದ 24 ಗಂಟೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅದೇ ರೀತಿ ಟಿಸಿ ಸುಡದಂತೆ ಎಚ್ಚರಿಕೆ ವಹಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಣ ಪಾವತಿಸಿದ 30 ದಿನಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಶಾಲಾ ಆವರಣದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ ಎಂದು ಇಂಧನ ಸಚಿವರು ತಿಳಿಸಿದರು.
1872
ಕಿರಿಯ
ಪವರ್
ಮ್ಯಾನ್
ಹುದ್ದೆಗಳ
ಭರ್ತಿಗೆ
ಕ್ರಮ
ಖಾಲಿ
ಇರುವ
1872
ಕಿರಿಯ
ಪವರ್
ಮ್ಯಾನ್
ಮತ್ತು
ಕಿರಿಯ
ಪರಿಚಾರಕ
ಹುದ್ದೆಗಳನ್ನು
ಭರ್ತಿ
ಮಾಡಲು
ಕ್ರಮ
ಕೈಗೊಳ್ಳಲಾಗಿದ್ದು,
ಈಗಾಗಲೇ
ಆಯ್ಕೆ
ಪಟ್ಟಿ
ಪ್ರಕಟವಾಗಿದೆ.
15
ದಿನಗಳಲ್ಲಿ
ಅಭ್ಯರ್ಥಿಗಳಿಗೆ
ಆದೇಶ
ನೀಡಲಾಗುವುದು
ಎಂದರು.
ಆನ್ಲೈನ್
ಬುಕ್ಕಿಂಗ್
ಜಾರಿ
ರವೀಂದ್ರ
ಕಲಾಕ್ಷೇತ್ರ
ಸಭಾಂಗಣ
ಸೇರಿದಂತೆ
ರಾಜ್ಯಾದ್ಯಂತ
ಇರುವ
ಎಲ್ಲಾ
ರಂಗ
ಮಂದಿರಗಳಿಗೂ
ಆನ್ಲೈನ್
ಬುಕ್ಕಿಂಗ್
ವ್ಯವಸ್ಥೆಯನ್ನು
ಜಾರಿಗೆ
ತರಲಾಗುವುದು
ಎಂದು
ಕನ್ನಡ
ಮತ್ತು
ಸಂಸ್ಕೃತ
ಸಚಿವರಾಗಿರುವ
ಸುನೀಲ್
ಕುಮಾರ್
ತಿಳಿಸಿದರು.
ರವೀಂದ್ರ ಕಲಾಕ್ಷೇತ್ರ ಸಭಾಂಗಣವನ್ನು ಕಾಯ್ದಿರಿಸುವ ವಿಚಾರದಲ್ಲಿ ಅವ್ಯವಹಾರ ನಡೆಯುತ್ತಿವೆ ಎಂಬ ದೂರುಗಳು ಕಲಾವಿದರು ಹಾಗೂ ಸಂಘ-ಸಂಸ್ಥೆಗಳಿಂದ ಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಿಡಿತ ಮತ್ತು ಲಾಬಿ ತಪ್ಪಿಸಲು. ಕಲಾಕ್ಷೇತ್ರ ಸಭಾಂಗಣವು ಎಲ್ಲರಿಗೂ ಸಿಗುವಂತೆ ಪಾರದರ್ಶಕವಾಗಿ ಆನ್ಲೈನ್ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದರು.
ಫೆ.15ರಂದು ಈ ಆನ್ಲೈನ್ ಸೇವೆಯ ಲೋಕಾರ್ಪಣೆ ಮಾಡಲಾಗುವುದು. ಸಂಸ ಬಯಲು ರಂಗಮಂದಿರ, ನಯನ ಸಭಾಂಗಣ ಸೇರಿದಂತೆ ರಾಜ್ಯದಾದ್ಯಂತ ಇರುವ ಎಲ್ಲಾ ರಂಗ ಮಂದಿರಗಳಿಗೂ ಇದು ಅನ್ವಯವಾಗಲಿದೆ. ರವೀಂದ್ರ ಕಲಾಕ್ಷೇತ್ರದ ದುರಸ್ತಿಗೆ 1.50 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಲಾಗುವುದು. ಹಾಗೆಯೇ ಅದರ ಬಾಡಿಗೆ ದರ ಪರಿಷ್ಕರಿಸಲಾಗುವುದೆಂದರು.
Recommended Video
ರವೀಂದ್ರ ಕಲಾಕ್ಷೇತ್ರ ಮಾದರಿಯ 4 ಕಲಾಕ್ಷೇತ್ರಗಳನ್ನು ನಿರ್ಮಿಸಲು ಜಾಗಗಳನ್ನು ಗುರುತಿಸಲಾಗಿದೆ. ಈ ವರ್ಷದ ಬಜೆಟ್ನಲ್ಲಿ ಅದಕ್ಕೆ ಅನುದಾನ ಕೋರಲಾಗುವುದು. ದೇವನಹಳ್ಳಿ, ಸೂರ್ಯನಗರ, ದೇವಿಕಾರಾಣಿ ಎಸ್ಟೇಟ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ರಂಗಮಂದಿರ ನಿರ್ಮಿಸುವ ಉದ್ದೇಶವಿದೆ.
ಕಲಾ ಗ್ರಾಮದಲ್ಲಿ ಕೋವಿಡ್ ಪ್ರಮಾಣ ಇಳಿಕೆ ನಂತರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ "ಅಮೃತ ಭಾರತಿಗೆ ಕನ್ನಡದಾರತಿ' ಶೀರ್ಷಿಕೆಯಲ್ಲಿ ಒಂದು ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ಯುವ ಪೀಳಿಗೆಗೆ ಪರಿಚಯ ಮಾಡಿಕೊಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.