ಮೋದಿ ನಡೆ ಪರವಾಗಿ ಯುವ ಬ್ರಿಗೇಡ್ ಸಂಭ್ರಮ ದಿವಸದ ಚಿತ್ರಗಳು
ಬೆಂಗಳೂರು, ನವೆಂಬರ್ 28: ಸೋಮವಾರ (ನವೆಂಬರ್ 28) ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳ ಪಾಲಿಗೆ ಆಕ್ರೋಶ್ ದಿವಸ್. ನೋಟು ರದ್ದು ಮಾಡಿದ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಗಳಾಗುತ್ತಿವೆ. ನಿರ್ಧಾರಕ್ಕೆ ಸಂಬಂಧಿಸಿದ ವಿಚಾರಗಳ ಜಾರಿಯಲ್ಲಿ ಸರಕಾರ ಎಡವಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಈ ನಿರ್ಧಾರವನ್ನೇ ವಾಪಸ್ ಪಡೆಯಬೇಕು ಎಂಬ ಒತ್ತಾಯ ಹಲವರದು.
ಆದರೆ, ನಿರ್ಧಾರದ ಪರವಾಗಿ ಸೋಮವಾರದಂದು ಯುವ ಬ್ರಿಗೇಡ್ ನಿಂದ ಸಂಭ್ರಮ ದಿವಸ ಆಚರಿಸಲಾಗುತ್ತಿದೆ. ಈ ದಿನವನ್ನು ಕಾಮದಹನ, ದೀಪಾವಳಿ ಇತರೆ ಪರ್ವ ಕಾಲಕ್ಕೆ ಹೋಲಿಸಿ, ಕೆಟ್ಟದ್ದು ಕೊನೆಯಾಗಿದ್ದರ ಸಂಭ್ರಮವನ್ನು ಆಚರಿಸುವ ರೀತಿಯಲ್ಲಿ ಸಂಭ್ರಮ ದಿವಸ ಕಾಣುತ್ತಿದೆ.[ಆಕ್ರೋಶ ದಿನಕ್ಕೆ ಕ್ಯಾರೆ ಎನ್ನದ ಮಂಗಳೂರು ಜನ]
ಬೆಂಗಳೂರಿನ ಹಲವೆಡೆ ಯುವ ಬ್ರಿಗೇಡ್ ನೇತೃತ್ವದಲ್ಲಿ ಸಂಭ್ರಮ ದಿವಸ ಆಚರಣೆ ನಡೆಯುತ್ತಿದೆ. ಕಪ್ಪುಹಣದ ನಿರ್ಮೂಲನೆ ದೇಶದ ಪಾಲಿಗೆ ಮಹತ್ವದ ಕೆಲಸ. ಇಂಥ ಮಹತ್ತರ ಕೆಲಸ ನಡೆಯುವುದನ್ನು ಪರ್ವ ಕಾಲ ಎನ್ನಬೇಕಾಗುತ್ತದೆ. ಆದ್ದರಿಂದ ಈ ರೀತಿ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಯುವ ಬ್ರಿಗೇಡ್ ಹೇಳಿಕೊಂಡಿದೆ.

ಯುವಕರಿಗೆ ತಿಲಕ
ಯುವ ಬ್ರಿಗೇಡ್ ಆಯೋಜಿಸಿದ್ದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಭ್ರಮ ದಿವಸ್ ಕಾರ್ಯಕ್ರಮದಲ್ಲಿ ಮಹಿಳೆಯರು ಯುವಕರಿಗೆ ತಿಲಕವಿಟ್ಟರು

ಇದು ಯುದ್ಧವಲ್ಲ
ಯುವ ಬ್ರಿಗೇಡ್ ನೀಡಿರುವ ಕರೆಯಲ್ಲಿ ಇದು ಯುದ್ಧವಲ್ಲ ರಾಷ್ಟ್ರೀಯತೆಯ ಹಬ್ಬ ಎಂಬ ಒಕ್ಕಣೆಯಿದೆ

ಭವ್ಯ ಭಾರತ ಕಟ್ಟೋಣ
ಐನೂರು, ಸಾವಿರದ ನೋಟು ನಿಷೇಧದ ನಂತರ ಪತರಗುಟ್ಟಿರುವ ಪ್ರತಿಪಕ್ಷಗಳ ಕೆಲವರು ನವೆಂಬರ್ 28ರಂದು 'ಆಕ್ರೋಶ ದಿವಸ'ದ ಮೂಲಕ 'ಭಾರತ್ ಬಂದ್' ಆಚರಿಸಲು ಕರೆ ಕೊಟ್ಟಿದ್ದಾರೆ ಎಂದು ಆರಂಭವಾಗಿರುವ ಪತ್ರ ಬನ್ನು ಜೊತೆಗುಡೋಣ. ದೇಶವಿರೋಧಿ ಶಕ್ತಿಗಳನ್ನು ಸೋಲಿಸಿ ಭ್ರಷ್ಟಾಚಾರಮುಕ್ತ ಭವ್ಯ ಭಾರತ ಕಟ್ಟೋಣ!! ಎಂದು ಕೊನೆಯಾಗುತ್ತದೆ.

ಮಹಿಳಾ ಬ್ರಿಗೇಡ್
ಬೆಂಗಳೂರಿನಲ್ಲಿ ಯುವ ಬ್ರಿಗೇಡ್ ಆಚರಿಸಿದ ಸಂಭ್ರಮ ದಿವಸದಲ್ಲಿ ಮಹಿಳೆಯರು ಕಂಡುಬಂದಿದ್ದು ಹೀಗೆ.
-
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ












Click it and Unblock the Notifications