ಭಿಕ್ಷುಕರನ್ನು ಕಂಡರೆ ಈ ನಂಬರ್ ಗೆ ಕಾಲ್ ಮಾಡಿ...
ಬೆಂಗಳೂರು, ಜೂನ್ 9: ಭಿಕ್ಷುಕ ಮುಕ್ತ ಕರ್ನಾಟಕ ನಿರ್ಮಿಸುವ ಉದ್ದೇಶ ಹೊತ್ತ ಕರ್ನಾಟಕ ಸರ್ಕಾರ ಕರ್ನಾಟಕ ಭಿಕ್ಷಾಟನಾ ನಿಷೇಧ ಕಾಯ್ದೆ 1975 ರಡಿ ಭಿಕ್ಷಾಟನೆಯನ್ನು ರಾಜ್ಯದಾದ್ಯಂತ ನಿಷೇಧಿಸಿದೆ. ಸರ್ಕಾರವೇ ನೀಡಿದ ಸಾರ್ವಜನಿಕಪ್ರಕಟಣೆಯಂತೆ, ಭಿಕ್ಷೆ ಬೇಡುವುದು ಶಿಕ್ಷಾರ್ಹ ಅಪರಾಧ, ಎಲ್ಲಿಯೇ ಭಿಕ್ಷೆ ಬೇಡುವವರನ್ನು ಕಂಡರೂ ಟೋಲ್ ಫ್ರೀ ಸಂಖ್ಯೆ 10581 ಗೆ ಕರೆಮಾಡುವಂತೆ ಸರ್ಕಾರವೇ ಮನವಿ ಮಾಡಿದೆ.
ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಾಜ್ಯಾದ್ಯಂತ 14 ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಬಂಧನದಲ್ಲಿರಿಸಲಾಗುವುದು ಮತ್ತು ಆ ಪರಿಹಾರ ಕೇಂದ್ರಗಳಲ್ಲಿ ಅವರಿಗೆ ಸುಸಜ್ಜಿತ ಮೂಲಭೂತ ಸೌಕರ್ಯವನ್ನೂ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.

ಅವರಿಗೆ ಉಪಹಾರ, ಸಮವಸ್ತ್ರ, ಊಟಗಳನ್ನು ನೀಡುವುದಲ್ಲದೆ ವಿವಿಧ ವೃತ್ತಿತರಬೇತಿಗಳನ್ನೂ ನೀಡಲಾಗುವುದು ಎಂದು ಈ ಜಾಹೀರಾತಿನಲ್ಲಿ ತಿಳಿಸಲಾಗಿದೆ.












Click it and Unblock the Notifications