ರಾಮಚಂದ್ರಾಪುರ ಮಠದ ಗೋರಕ್ಷಣಾ ಅಭಿಯಾನಕ್ಕೆ ಬಿಎಸ್ ವೈ ಬೆಂಬಲ
ಒಂದು ಹೊತ್ತಿನ ಆಹಾರ ಬಿಟ್ಟು, ಉಳಿಸಿದ ಹಣವನ್ನು ಗೋವಿಗೆ ಮೇವು ಒದಗಿಸುವುದಕ್ಕಾಗಿ ನೀಡುವ GiveUpAMeal ಎಂಬ ಶ್ರೀಮಠದ ವಿಭಿನ್ನ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರು, ಮೇ 15: ಬರದಿಂದಾಗಿ ಮೇವಿಲ್ಲದೆ ಪರದಾಡುತ್ತಿರುವ ಗೋವುಗಳ ರಕ್ಷಣೆಗಾಗಿ ರಾಮಚಂದ್ರಪುರ ಮಠ GiveUpAMeal ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಆನ್ ಲೈನ್ ಅಭಿಯಾನ ಆರಂಭಿಸಿರುವ ಬಗ್ಗೆ ಒನ್ ಇಂಡಿಯಾದಲ್ಲಿ ನೀವು ಈಗಾಗಲೇ ಓದಿದ್ದೀರಿ.
ಒಂದು ಹೊತ್ತಿನ ಆಹಾರ ಬಿಟ್ಟು, ಉಳಿಸಿದ ಹಣವನ್ನು ಗೋವಿಗೆ ಮೇವು ಒದಗಿಸುವುದಕ್ಕಾಗಿ ನೀಡುವ ಶ್ರೀಮಠದ ಈ ವಿಭಿನ್ನ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ಸೂಚಿಸಿದ್ದಾರೆ.[ರಾಮಚಂದ್ರಾಪುರ ಮಠದ ಯಶಸ್ವೀ 'ಗೋಯಾತ್ರೆ'ಗೆ ಮತ್ತೊಂದು ಗರಿ]

ಯಡಿಯೂರಪ್ಪನವರ ಆಹ್ವಾನದ ಮೇರೆ GiveUpAMeal ನಿಯೋಗ ನಿನ್ನೆ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿತ್ತು. ಆ ಸಂದರ್ಭದಲ್ಲಿ, ಗೋವುಗಳ ರಕ್ಷಣೆಗೆ ಮಠ ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.
Sri @BSYBJP ji called the citizens of d state to support #GouPranaBhiksha by #GiveUpAMeal and released a video.https://t.co/twe3U2owiN pic.twitter.com/rbVDTx7Ukn
— #GiveUpAMeal Shishir (@shishir_heg) May 15, 2017
GiveUpAMeal ಹೇಗೆ ಜನಪ್ರಿಯ ಆನ್ಲೈನ್ ಅಭಿಯಾನವಾಗಿದೆ, ಈ ಅಭಿಯಾನದಿಂದಾಗಿ ಜನರಲ್ಲಿ ಗೋ ರಕ್ಷಣೆಯ ಬಗ್ಗೆ ಹೇಗೆ ಅರಿವು ಮೂಡಿದೆ ಎಂಬಿತ್ಯಾದಿ ಮಾಹಿತಿಯನ್ನು ನಿಯೋಗ ನೀಡಿತು. ಸಮಾಧಾನದಿಂದ ಎಲ್ಲವನ್ನೂ ಆಲಿಸಿಕೊಂಡ ಯಡಿಯೂರಪ್ಪ, ಗೋ ರಕ್ಷಣೆಯ ಕುರಿತ ಮಠದ ಎಲ್ಲ ನಡೆಗೂ ತಮ್ಮ ಬೆಂಬಲವಿದೆ ಎಂದು ಹೇಳಿದರು. ಯಡಿಯೂರಪ್ಪ ಗೋರಕ್ಷಣೆಗೆ ಕೈಜೋಡಿಸುವುದಾಗಿ ಅಭಯ ನೀಡಿದ ವಿಡಿಯೋ ಇಲ್ಲಿದೆ.[ಉಪವಾಸವಿರುವ ಗೋರಕ್ಷಣೆಗಾಗಿ ಒಪ್ಪೊತ್ತಿನ ಊಟ ಬಿಡಿ]
ಗೋರಕ್ಷಣೆಗಾಗಿ ಮಠಕ್ಕೆ 10 ಲಕ್ಷ ರೂ. ಗಳನ್ನು ತಕ್ಷಣವೇ ನೀಡಿದ ಯಡಿಯೂರಪ್ಪ, GiveUpAMeal ಅಭಿಯಾನಕ್ಕೆ ಶುಭ ಹಾರೈಸಿದರು.
When #GiveUpAMeal team met Sri @BSYBJP yesterday, he not only heard the presentation made by d team very patiently,but also donated ₹10lakhs pic.twitter.com/pAQo6UP1GF
— #GiveUpAMeal 4 Cows (@shreeraamaa) May 15, 2017
ಮಲೆಹದೇಶ್ವರ ಬೆಟ್ಟದಲ್ಲಿ ಮೇವಿಲ್ಲದೆ ಹೈರಾಣಾಗಿರುವ ಗೋವುಗಳಿಗೂ ಈಗಾಗಲೇ ಗೋವು ಪೂರೈಸುವ ಕೆಲಸವನ್ನು ರಾಮಚಂದ್ರಾಪುರ ಮಠ ಮಾಡಿದ್ದು, ಕಳದ ತಿಂಗಳಷ್ಟೇ 880 ಟನ್ ಮೇವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಕಳಿಸಿತ್ತು.
ಜಗ್ಗೇಶ್ ಬೆಂಬಲ
ನವರಸ ನಾಯಕ ಜಗ್ಗೇಶ್ ಅವರು ಸಹ ಬಿ ಎಸ್ ಯಡಿಯೂರಪ್ಪ ಅವರ ನಡೆಯನ್ನು ಬೆಂಬಲಿಸಿದ್ದಾರೆ. ಗೋರಕ್ಷಣೆಯನ್ನು ಆದ್ಯ ಕರ್ತವ್ಯ ಎಂದುಕೊಂಡಿರುವ ರಾಮಚಂದ್ರಾಪುರ ಮಠದ GiveUpAMeal ಅಭಿಯಾನಕ್ಕೆ ತಮ್ಮ ಪೂರ್ಣ ಪ್ರೋತ್ಸಾಹವಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ ವಿಡಿಯೋ ನಿಮಗಾಗಿ ಇಲ್ಲಿದೆ.
.@NimmaYash @nimmasuresh @CTRavi_BJP @nimmaupendra @KicchaSudeep @rvijayprakash @girishalva @mohnotgaurav18 @Ramesh10619511 @HinduDharma1 @SriSamsthana @OneindiaKannada @narendramodi @asu107asu @iamnagarjuna @vinayakmuroor @TrueIndology1 @God_BlessIndia @yuva_brigade @ShubhamDevadiya @tulunad16 @AnupamPkher @SrBachchan @akshaykumar @sgurumurthy @Angurlata @shreedevi22 @JagoBharathJago @Babu_Bhaiyaa @DrRavi75 @siddarthpaim @Shankaracarya36 @ShankaraPeetha @shakkuiyer @KiranKS @SharadaDiamond @smritiirani @rahul_goa @ragusmg @Brinda_rl @davidfrawleyved @HIMESH_SS @SV99999 @yvkmoorthy @prettypadmaja @uttrashada @kamesh_gadia @CMofKarnataka @BSYBJP Here is what Navarasanayaka @Jaggesh2 has to say about #GiveUpAMeal for #goupranabhiksha. Touched by his kindness and love for Gou! THQ sir! pic.twitter.com/utID5STK9S
— #GiveUpAMeal Akshu (@AkshathaBhatTP) May 15, 2017
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications