ದೇವೇಗೌಡರ ವಿರುದ್ಧ ಸ್ಪರ್ಧೆಗೆ ನಾನು ರೆಡಿ: ಸದಾನಂದಗೌಡ
ಬೆಂಗಳೂರು, ಮಾರ್ಚ್ 11: ದೇವೇಗೌಡ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ತಯಾರಿದ್ದೇನೆ ಎಂದು ಬಿಜೆಪಿ ಸಚಿವ ಸದಾನಂದಗೌಡ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸದಾನಂದಗೌಡರು, ಇಲ್ಲಿವರೆಗೆ ನನಗಿಂತ ವಯಸ್ಸಿನಲ್ಲಿ ಚಿಕ್ಕವರ ಎದುರು ಸ್ಪರ್ಧೆ ಮಾಡಿದ್ದೇನೆ, ಮೊದಲ ಬಾರಿಗೆ ದೊಡ್ಡವರ ಎದುರು ಸ್ಪರ್ಧೆ ಮಾಡಲಿದ್ದೇನೆ, ಅದನ್ನು ಗೌರವಯುತವಾಗಿ ಸ್ವೀಕರಿಸಿ ಗೆಲ್ಲುವ ವಿಶ್ವಾಸವಿದೆ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪರ್ಧಿಸುವ ಕ್ಷೇತ್ರ ಅಂತಿಮ
ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದು ಬಹುತೇಕ ಅಂತಿಮವಾಗಿದೆ. ಸದಾನಂದ ಗೌಡ ಅವರು ಅಲ್ಲಿನ ಹಾಲಿ ಸಂಸದರಾಗಿದ್ದು, ಈ ಬಾರಿ ಸಹ ಅದೇ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ.
ನಾನು ಬೆಂಗಳೂರು ಉತ್ತರ ಕ್ಷೇತ್ರದಿಂದ ಬೇರೆಡೆಗೆ ವಲಸೆ ಹೋಗುತ್ತೇನೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ನಾನು ಎಲ್ಲಿಯೂ ಹೋಗುವುದಿಲ್ಲ. ಪಕ್ಷ ಟಿಕೆಟ್ ನೀಡಿದ ಕಡೆ ಸ್ಪರ್ಧಿಸುತ್ತೇನೆ, ನನಗೆ ಪಕ್ಷ ಗೆಲ್ಲುವುದು ಮುಖ್ಯ ಎಂದು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಟ್ವೀಟ್!
ಕಳೆದ ಐದು ವರ್ಷದಲ್ಲಿ ನಾನು ಸಚಿವನಾಗಿ ಮಾಡಿದ ಕೆಲಸ ಹಾಗೂ ಸಂಸದನಾಗಿ ಕ್ಷೇತ್ರಕ್ಕೆ ಮಾಡಿದ ಕೆಲಸಗಳೇ ನನ್ನನ್ನು ಗೆಲ್ಲಿಸುತ್ತವೆ ಎಂದ ಅವರು, ಬಿಜೆಪಿಯು ಫೆಬ್ರವರಿ ಮೊದಲಿನಿಂದಲೂ ಚುನಾವಣಾ ತಯಾರಿಯಲ್ಲಿ ನಿರತವಾಗಿದೆ. ರಾಜ್ಯದ ಉಳಿದೆರಡು ಪಕ್ಷಗಳಿಗಿಂತಲೂ ಬಿಜೆಪಿ ಮುಂದಿದೆ ಎಂದು ಅವರು ಹೇಳಿದರು.