Get Updates
Get notified of breaking news, exclusive insights, and must-see stories!

ಕರ್ನಾಟಕ ಬಜೆಟ್ ಅರ್ಥ ಮಾಡಿಕೊಳ್ಳುವುದು ಹೇಗೆ?

ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯ ಸರ್ಕಾರಗಳೇ ಜನರ ಏಳಿಗೆಯ ನೇರ ಹೊಣೆಗಾರಿಕೆ ಹೊಂದಿವೆ. ಹೀಗಿದ್ದಾಗಲೂ ಭಾರತ ಸರ್ಕಾರದ ಬಜೆಟ್ಟಿಗೆ ಸಿಕ್ಕಷ್ಟು ಮಹತ್ವ, ಪ್ರಚಾರ ಮತ್ತು ಚರ್ಚೆ ರಾಜ್ಯ ಸರ್ಕಾರ ಮಂಡಿಸುವ ಬಜೆಟ್ಟಿಗೆ ಸಿಗುವುದಿಲ್ಲ.

ಹಾಗಿದ್ದರೆ ರಾಜ್ಯ ಸರ್ಕಾರದ ಬಜೆಟ್ ಯಾಕೆ ಮುಖ್ಯ? ಅದರಲ್ಲೇನಿದೆ? ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ರಾಜ್ಯ ಸರ್ಕಾರದ ನಿಲುವು, ನಿರ್ಧಾರಗಳನ್ನು ಜನಪರತೆಯ ಕಣ್ಣಿನಿಂದ ಅರಿಯಲು ಸಾಮಾನ್ಯ ಜನರಿಗೆ ನೆರವಾಗುವ ಉದ್ದೇಶದಿಂದ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

How to understand Karnataka Budget?

ಇದೇ ಮಾರ್ಚ್ 15ಕ್ಕೆ ಕರ್ನಾಟಕದ ಬಜೆಟ್ ಮಂಡನೆಯಾಗುತ್ತಿರುವ ಹೊತ್ತಿನಲ್ಲಿ "ಕರ್ನಾಟಕ ಬಜೆಟ್ ಅರ್ಥ ಮಾಡಿಕೊಳ್ಳುವುದು ಹೇಗೆ?" ಅನ್ನುವ ವಿಷಯದ ಬಗ್ಗೆ ಮಾತುಕತೆ@ಮುನ್ನೋಟ ಕಾರ್ಯಕ್ರಮವನ್ನು ಬೆಂಗಳೂರಿನ ಪಬ್ಲಿಕ್ ಪಾಲಿಸಿ ಥಿಂಕ್ ಟ್ಯಾಂಕ್ ಸಂಸ್ಥೆಯಾದ ತಕ್ಷಶಿಲಾದಲ್ಲಿ ಫೆಲೊ ಆಗಿರುವ ಪವನ್ ಶ್ರೀನಾಥ್ ಅವರು ನಡೆಸಿಕೊಡಲಿದ್ದಾರೆ.

ದಿನ : ಮಾರ್ಚ್ 5, ಭಾನುವಾರ
ಸಮಯ : ಸಂಜೆ 6ರಿಂದ 7.30ರ ವರೆಗೆ
ಸ್ಥಳ : ಮುನ್ನೋಟ, ನಂ. 67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು - 560 004.

ಈ ವಿಷಯ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರಿಗೂ ಅನ್ವಯವಾಗುವುದರಿಂದ ಆಸಕ್ತರು ಬಂದು ಕರ್ನಾಟಕ ಆಯವ್ಯಯ ವಿಷಯದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಚರ್ಚೆಯಲ್ಲಿ ಬಾಗವಹಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+