ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಉಚಿತ ಪ್ರಯಾಣ ಮಾಡಿದವರೆಷ್ಟು?
ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣದ ಕೊಡುಗೆಯನ್ನು ಬಿಎಂಟಿಸಿ ಒದಗಿಸಿತ್ತು. ಪ್ರಯಾಣದ ಕೊಡುಗೆ ಬಳಸಿಕೊಂಡ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಪ್ರಯಾಣ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಪ್ರಯಾಣಿಕರಿಗೆ ತನ್ನ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತ್ತಿದ್ದು, ಬರೋಬ್ಬರಿ 35 ಲಕ್ಷ ಮಂದಿ ಪ್ರಯಾಣವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಾಕಷ್ಟು ಬಸ್ಗಳ ಕೊರತೆ ಇರುವುದು ಮುಖ್ಯವಾಗಿ ಗಮನಕ್ಕೆ ಬಂದಿದೆ.
ಪ್ರಮುಖ ಬಸ್ ನಿಲ್ದಾಣ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ, ಕೆ.ಆರ್. ಮಾರುಕಟ್ಟೆಯಲ್ಲಿ ನೂರಾರು ಮಂದಿ ಬಸ್ ಗಳಿಗಾಗಿ ಕಾದು ನಿಂತಿದ್ದರು. ಕೆ.ಆರ್. ಮಾರುಕಟ್ಟೆಯಲ್ಲಿ ತಾಳ್ಮೆ ಕಳೆದುಕೊಂಡ ಜನಸಮೂಹ ಆಟೋ ರಿಕ್ಷಾಗಳನ್ನು ಹುಡುಕಲು ಯತ್ನಿಸಿದ್ದರಿಂದ ಹಲವು ಮಾರ್ಗಗಳಿಗೆ ಬಸ್ಗಳು ಸಮರ್ಪಕವಾಗಿ ದೊರಕಲಿಲ್ಲ ಎಂಬ ಮಾತು ಜನರಲ್ಲಿ ಕೇಳಿ ಬಂದಿತು.
ಸೋಮವಾರದಂದು ಪ್ರಯಾಣಿಕರ ಸಂಖ್ಯೆ 35 ಲಕ್ಷ ದಾಟಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಅಧಿಕಾರಿಗಳು ತಿಳಿಸಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಅಂದಾಜಿನ ದಿನದ 50 ಲಕ್ಷಕ್ಕೆ ಹೋಲಿಸಿದರೆ ಈ ಸಂಖ್ಯೆಯು ದೊಡ್ಡದಾಗದಿದ್ದರೂ, ವಾರದ ದಿನದ ಸರಾಸರಿ 27 ಲಕ್ಷ ಇದೆ. ಲಾಕ್ಡೌನ್ ನಂತರದ ಅವಧಿಯಲ್ಲಿ ಇದು ಒಂದು ರೀತಿಯ ದಾಖಲೆಯನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೆ ಬಿಎಂಟಿಸಿ ಬಸ್ಸು ಹತ್ತಿಸುವ ಉದ್ದೇಶ
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಟ್ಟುಕೊಂಡು ಬಿಎಂಟಿಸಿಯ ಈ ಪ್ರಯೋಗವು ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಜನರನ್ನು ಆಕರ್ಷಿಸುವ ಗುರಿಯನ್ನು ಹೊಂದಿತ್ತು. ವಿಶೇಷವಾಗಿ ಬಿಎಂಟಿಸಿ ಸೇವೆಗಳನ್ನು ಬಳಸಿಕೊಳ್ಳದವರನ್ನು ಮತ್ತೆ ಬಸ್ಸು ಹತ್ತಿಸುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ, ನಗರದಲ್ಲಿ ಸಂಚರಿಸುವ ಪ್ರತಿಯೊಂದು ಬಸ್ಗಳು ಮಧ್ಯಾಹ್ನದ ವೇಳೆಯೂ ತುಂಬಿ ತುಳುಕುವಂತಿತ್ತು.

ಬಸ್ ಬೇಡಿಕೆಯಲ್ಲಿ ಪ್ರಮುಖ ಏರಿಕೆ
ಈ ಕೊಡುಗೆಗೆ ಜನರ ಅಗಾಧ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಇದು ರಜಾದಿನವಾಗಿದ್ದರಿಂದ, ಉಚಿತ ಸೇವೆಯು ಬೇಡಿಕೆಯಲ್ಲಿ ಪ್ರಮುಖ ಏರಿಕೆಗೆ ಕಾರಣವಾಗುವುದಿಲ್ಲ ಎಂದು ನಾವು ಭಾವಿಸಿದ್ದೆವು. ಬಸ್ಗಳಲ್ಲಿ ಇಂತಹ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಬಸ್ಗಳು ಮತ್ತು ಸಿಬ್ಬಂದಿಯ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನಾಕರ್ಷಣೆಯ ಕೇಂದ್ರಗಳಲ್ಲಿ ಜನವೋ ಜನ
ಸ್ವಾತಂತ್ರ್ಯ ದಿನಾಚರಣೆಯೂ ಸೇರಿದಂತೆ ಹಿಂದಿನ ಮೂರು ದಿನದ ಸಾಲು ರಜೆಯೂ ಜನರು ಸಂಚಾರ ಕಡಿಮೆಯಾಗಬಹುದು ಎಂದು ಬಿಎಂಟಿಸಿ ಸಂಸ್ಥೆ ನಿರೀಕ್ಷಿಸಿತ್ತು. ಆದರೆ ಜನರು ಸಾಲು ರಜೆಗಳನ್ನು ವಿಳಂಬವಾಗಿದ್ದ ಕೆಲಸಗಳು ಮತ್ತು ಮತ್ತಷ್ಟು ನಗರವನ್ನು ಕಣ್ತುಂಬಿಕೊಳ್ಳಲು ಬಳಸುತ್ತಾರೆ ಎಂದು ಯಾರು ಅನಿಸಿರಲಿಲ್ಲ. ನಗರದ ಪ್ರಮುಖ ಜನಾಕರ್ಷಣೆಯ ಕೇಂದ್ರಗಳು, ಮಾಲ್ಗಳು, ಸಿನಿಮಾ ಮಂದಿರಗಳು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ನಿಲ್ದಾಣಗಳಲ್ಲಿ ಅಕ್ಷರಶಃ ಜನರ ಸಮೂಹ
ಜನರು ಪ್ರಮುಖ ನಿಲ್ದಾಣಗಳಲ್ಲಿ ಕಾದು ಕಾದು ನಿಂತೇ ಇದ್ದದ್ದು ಎಲ್ಲೆಲ್ಲೂ ಕಂಡು ಬಂದಿತ್ತು. ಶಿವಾಜಿನಗರ, ಮೆಜಸ್ಟಿಕ್, ಯಶವಂತಪುರ ಹಾಗೂ ಬೆಂಗಳೂರು ಹೊರವಲಯ ಸೇರುವ ಬಹುತೇಕ ನಿಲ್ದಾಣಗಳು ಅಕ್ಷರಶಃ ಜನರ ಸಮೂಹದಿಂದ ಕಂಡುಬಂದವು ಬೆಂಗಳೂರಿಗೆ ಮೂರು ದಿನಗಳ ರಜೆ ಮುಗಿಸಿ ಬರುವವರ ಸಂಖ್ಯೆಯು ಅಧಿಕವಾಗಿತ್ತು. ಹೀಗಾಗಿ ಬಸ್ಗಳು ಜನರಿಗೆ ಸಾಲದೆ ಹೋದದ್ದು ಸುಳ್ಳಲ್ಲ. ಆದ್ದರಿಂದ ಜನರೇ ಸಿಕ್ಕ ಸಿಕ್ಕ ವಾಹನಗಳು ಆಟೋ, ಕ್ಯಾಬ್, ಖಾಸಗಿ ಸಾರಿಗೆ ವಾಹನಗಳ ಮೊರೆಹೋಗಿದ್ದರು. ಅಂತೂ ತಮ್ಮ ಮನೆ ಮುಟ್ಟುವಲ್ಲಿ ಹರಸಾಹಸಪಟ್ಟರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications