ಲೈಸನ್ಸ್ ಪಡೆಯದ ಹಿಂದವೀ ಮೀಟ್ ಮಾರ್ಟ್: ಮಾಲೀಕರಿಗೆ ಬಿಬಿಎಂಪಿ ನೋಟಿಸ್
ಬೆಂಗಳೂರು, ಏ.19: ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಪ್ರಚಲಿತಕ್ಕೆ ಬಂದ ಹಿಂದವೀ ಮೀಟ್ ಮಾರ್ಟ್ ಬಿಬಿಎಂಪಿಯಿಂದ ಪರವಾನಗಿಯನ್ನೇ ಪಡೆದಿಲ್ಲ. ಹೀಗೆ ಅಗತ್ಯ ಅನುಮತಿ ಇಲ್ಲದೆ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಬಿಬಿಎಂಪಿ ನೋಟ್ ಜಾರಿ ಮಾಡಿದೆ.
ಹಲಾಲ್ ಕಟ್ ಜಟ್ಕಾ ಕಟ್ ವಿಚಾರ ತಾರಕ್ಕೇರಿತ್ತು. ಕೆಲವು ಹಿಂದೂ ಸಂಘಟನೆಗಳು ಹಲಾಲ್ ವಿರುದ್ದ ಸಮರವನ್ನೇ ಸಾರಿದ್ದರು. ಈ ವೇಳೆ ಹಿಂದವೀ ಮೀಟ್ ಮಾರ್ಟ್ ಮಾಲೀಕರು ಜಟ್ಕಾ ಕಟ್ ಮಾಡಿದ ಮಾಂಸವನ್ನೇ ಮಾರಾಟ ಮಾಡಟುತ್ತೇವೆ, ಹಿಂದೂಗಳು ನಮ್ಮಲ್ಲಿ ಬಂದು ಮಾಂಸ ಖರೀದಿ ಮಾಡಿ ಎಂದು ಪ್ರಚಾರ ಮಾಡಿದರು. ಯುಗಾದಿ ಹೊಸತೂಡಕು ಸಮಯದಲ್ಲಿ ಭರ್ಜರಿ ವ್ಯಾಪಾರವನ್ನೂ ಸಹ ಮಾಡಿದ್ದರು. ಇದೀಗ ಹಿಂದುವೀ ಮೀಟ್ ಮಾರ್ಟ್ಗೆ ಬಿಬಿಎಂಪಿ ಶಾಕ್ ನೀಡಿದೆ. ಲೈಸನ್ಸ್ ಪಡೆಯದೆ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ.
8ಕ್ಕೂ ಹೆಚ್ಚು ಕಡೆ ಮಳಿಗೆ:
ಹಿಂದುವೀ ಮೀಟ್ ಮಾರ್ಟ್ ನಗರದಲ್ಲಿ 8ಕ್ಕೂ ಹೆಚ್ಚು ಕಡೆಗಳಲ್ಲಿ ತನ್ನ ವ್ಯಾಪಾರ ಕೇಂದ್ರವನ್ನು ತೆೆರೆದಿದೆ. ಬಿಬಿಎಂಪಿಯಿಂದ ವ್ಯಾಪಾರ ಅನುಮತಿ ಪಡಯದ ಕಾರಣ ರಾಜರಾಜೇಶ್ವರಿ ವಲಯದ ಪಶುಪಾಲನ ಸಹಾಯಕ ನಿರ್ದೇಶಕರು ನೊಟೀಸ್ ನೀಡಿದ್ದಾರೆ. ಇನ್ನು ಲೈಸನ್ಸ್ ಪಡೆಯದಿದ್ದರೇ ಅಂಗಡಿಗಳಿಗೆ ಬೀಗ ಜಡಿಯುವುದಾಗಿಯೂ ಮೌಖಿಕವಾಗಿ ಎಚ್ಚರಿಕೆಯನ್ನು ನೀಡಿದೆ. ಕೋಳಿಯ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲೂ ಪ್ರತ್ಯೇಕ ನೊಟೀಸ್ ನೀಡಿಲಾಗಿದೆ.

ಪರವಾನಗಿಯನ್ನು ಪಡೆಯದೇ ಅಥವಾ ನವೀಕರಿಸದೇ ಅನಧಿಕೃತವಾಗಿ ಉದ್ದಿಮೆ ನಡೆಸುವಂತಿಲ್ಲ. ಕೋಳಿ ಕುರಿ ಮಾಂಸವನ್ನು ಮಾರಾಟ ಮಾಡಬೇಕಾದರೆ ಬಿಬಿಎಂಪಿಯಿಂದ ಅನುಮತಿಯನ್ನು ಪಡೆದಿರಬೇಕು. ಕರ್ನಾಟಕ ಮುನ್ಸಿಪಲ್ ಕಾಯ್ದೆ 1976ರ ಕಲಂ 353ರ ಅನ್ವಯ ಉದ್ದಿಮೆಗೆ ಅನುಮತಿಯನ್ನು ಪಡೆದಿಲ್ಲವಾದರೇ ಅಥವಾ ಅನುವತಿಯನ್ನು ನವೀಕರಿಸದಿದ್ದರೇ, ಅನುಮತಿ ನೀಡುವ ವೇಳೆ ವಿಧಿಸಲಾಗಿರುವ ಷರತ್ತನ್ನು ಪೂರೈಸದಿದ್ದರೇ ಬಿಬಿಎಂಪಿಯ ಅಧಿಕಾರಿಗಳು ನೊಟೀಸ್ ನೀಡಬಹುದಾಗಿದೆ.
ಉದ್ದಿಮೆ ಪರವಾನಗಿ (ಲೈಸನ್ಸ್) ಪಡೆಯಲು ಶುಲ್ಕ ಎಷ್ಟು ಗೊತ್ತಾ? ಕೋಳಿ, ಹಂದಿ, ಮೀನು, ಕುರಿ ಅಥವಾ ಮೇಕೆ, ದನ ಹೀಗೆ ಮಾಂಸವನ್ನು ಮಾರಾಟ ಮಾಡಬೇಕಾದಲ್ಲಿ ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿಯನ್ನು ಪಡೆಯಬೇಕು. ಕೋಳಿಯನ್ನು ಮಾತ್ರ ಮಾರಾಟ ಮಾಡಬೇಕಾದಲ್ಲಿ 2500 ಪರವಾನಗಿ ಶುಲ್ಕವನ್ನು ಕಟ್ಟಬೇಕಿದೆ. ಕೋಳಿ, ಕುರಿ ಅಥವಾ ಮೇಕೆ ಮಾಂಸ, ಮೀನು ಮಾರಾಟಮಾಡಬೇಕಾದಲ್ಲಿ 10,500 ರೂ ಶುಲ್ಕವನ್ನು ಕಟ್ಟಬೇಕಿದೆ. ಇನ್ನು ಪರವಾನಗಿ ಪಡೆದ ಬಳಿಕ ಪ್ರತಿವರ್ಷ ಬಿಬಿಎಂಪಿಗೆ ಶುಲ್ಕವನ್ನು ಕಟ್ಟಬೇಕಿದೆ.

ಮುನೇಗೌಡ ಹೇಳುವುದೇನು?
ಹಿಂದವೀ ಮೀಟ್ ಮಾರ್ಟ್ನ ಮಾಲೀಕ ಬಿಬಿಎಂಪಿ"ಬಿಬಿಎಂಪಿ ನಿಯಮವನ್ನು ಪಾಲಿಸುವಂತೆ ಬಿಬಿಎಂಪಿ ನೊಟೀಸ್ ನೀಡಿದೆ ಅದನ್ನು ನಾವು ಪಾಲಿಸುತ್ತೇವೆ. ಸಹಜವಾಗಿ ಏಪ್ರಿಲ್ ನಲ್ಲಿ ಟ್ರೇಡ್ ಲೈಸನ್ಸ್ ರಿನಿವಲ್ ಮಾಡಬೇಕಿದೆ ಹಣವನ್ನು ಕಟ್ಟಿ ನವೀಕರಿಸಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications