Get Updates
Get notified of breaking news, exclusive insights, and must-see stories!

3 ವರ್ಷಕ್ಕೆ ಎಂದು 14 ವರ್ಷಗಳ ಕಾಲ ಲೀಸ್‌ ಮನೆಯಲ್ಲಿದ್ದ ವಕೀಲನಿಗೆ ಹೈಕೋರ್ಟ್ ಮಾಡಿದ್ದೇನು?

ಬೆಂಗಳೂರು, ಆಗಸ್ಟ್ 28: 2009ರಲ್ಲಿ ವಸತಿ ಕಟ್ಟಡವೊಂದರ ನೆಲಮಹಡಿಯನ್ನು ಸ್ನೇಹಿತರೊಬ್ಬರಿಂದ ಮೂರು ವರ್ಷಗಳ ಅವಧಿಗೆ ಲೀಸ್‌ಗೆ ಪಡೆದು 14 ವರ್ಷಗಳ ಕಾಲ ಠಿಕಾಣಿ ಹೂಡಿದ್ದ ವಕೀಲನೊಬ್ಬನಿಗೆ 60 ದಿನಗಳೊಳಗೆ ಅದನ್ನು ತೆರವು ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ.

10,00,000 ರೂ ಪ್ರೀಮಿಯಂ ಮೊತ್ತವನ್ನು ಪಾವತಿಸಲಾಗಿದೆ ಮತ್ತು ಒಪ್ಪಂದವು ಮೂರು ವರ್ಷಗಳ ಅವಧಿಗೆ ಇದೆ ಮತ್ತು ಅವರು 2009 ರಲ್ಲಿ ನಿವೇಶನವನ್ನು ತೆಗೆದುಕೊಂಡರೂ, ಸುಮಾರು 14 ವರ್ಷಗಳ ಕಾಲ ಅವರು ಆಸ್ತಿಯಲ್ಲಿ ಜಾಗ ಖಾಲಿ ಮಾಡದೆ ಠಿಕಾಣಿ ಹೂಡಿದ್ದಾರೆ ಎಂದು ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಹೇಳಿದರು.

high-court-order

ಲೀಸ್‌ ಮನೆಯಲ್ಲಿದ್ದ ವಕೀಲ ಎಲ್ ದೊರೆಸ್ವಾಮಿ ಅವರಿಗೆ ಈ ಆದೇಶದ ದಿನಾಂಕದಿಂದ 60 ದಿನಗಳ ಒಳಗೆ ಸ್ಥಳವನ್ನು ಖಾಲಿ ಮಾಡುವಂತೆ ಸೂಚಿಸಿತು ಮತ್ತು ಒಂದು ವೇಳೆ ಮನೆ ಖಾಲಿ ಮಾಡದೆ ವಿಫಲವಾದರೆ, ಕಾನೂನಿನ ಪ್ರಕಾರ ಸ್ವಾಧೀನಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು. ಆಸ್ತಿಯ ಮಾಲೀಕರಿಗೆ ಅವರ ವಕೀಲರು ಜಾಗ ಖಾಲಿ ಮಾಡುವ ಸಮಯದಲ್ಲಿ ಪ್ರೀಮಿಯಂ ಆಗಿ ಪಾವತಿಸಿದ 10,00,000 ರೂ.ಗಳನ್ನು ಪಾವತಿಸಲು ಸೂಚಿಸಲಾಯಿತು.

ದೊರೆಸ್ವಾಮಿ ಅವರನ್ನು ಆವರಣದಿಂದ ಹೊರಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೆಳಹಂತದ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೃಷ್ಣಪ್ರಸಾದ್ ಎ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು 2009 ರಲ್ಲಿ ಮಲ್ಲೇಶ್ವರಂನಲ್ಲಿರುವ ಆವರಣದ ನೆಲಮಹಡಿಯನ್ನು ತಮ್ಮ ಸ್ನೇಹಿತ ಮತ್ತು ವಕೀಲನೂ ಆದ ದೊರೆಸ್ವಾಮಿಗೆ 10 ಲಕ್ಷ ರೂಪಾಯಿ ಭದ್ರತಾ ಠೇವಣಿ ಪಡೆದ ಮೇಲೆ ಬಾಡಿಗೆ 3,400 ರೂ. ಬಿಟ್ಟುಕೊಟ್ಟಿದ್ದರು.

ಮೂರು ವರ್ಷ ತಡವಾಗಿ ಬಾಡಿಗೆ ಪಾವತಿಸಲು ಸಾಧ್ಯವಾಗದ ವಕೀಲರು ಅದನ್ನು ಠೇವಣಿಯಿಂದ ಕಡಿತಗೊಳಿಸುವಂತೆ ಹೇಳಿದರು. ಕೃಷ್ಣಪ್ರಸಾದ್ ತೆರವು ಆದೇಶವನ್ನು ಕೋರಿ 2016 ರಲ್ಲಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದರು. ಆದರೆ ದೊರೆಸ್ವಾಮಿ ಅವರು ತಿಂಗಳಿಗೆ 21,000 ರೂ ಬಾಡಿಗೆಯನ್ನು ನಿಗದಿಪಡಿಸಿದ ಬಾಡಿಗೆ ನಿಯಂತ್ರಕರನ್ನು ಸಂಪರ್ಕಿಸಿದರು. ಅದನ್ನೂ ಪಾವತಿಸಿಲ್ಲ ಎಂದು ಕೃಷ್ಣಪ್ರಸಾದ್ ಕಿಡಿಕಾರಿದರು. ಬಾಡಿಗೆ ನಿಯಂತ್ರಕರ ಆದೇಶದ ವಿರುದ್ಧ ಕೃಷ್ಣಪ್ರಸಾದ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಣ್ಣ ಕಾರಣಗಳ ಹಿನ್ನೆಲೆ ನ್ಯಾಯಾಲಯ ವಜಾಗೊಳಿಸಿತು.

ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ದೊರೆಸ್ವಾಮಿ ಅವರು ಮನೆಯಲ್ಲಿ ಮುಂದುವರಿಯಲು ಇಲ್ಲಸಲ್ಲದ ಕಾರಣಗಳನ್ನು ನೀಡುತ್ತಿದ್ದಾರೆ ಎಂಬ ಅಂಶವನ್ನು ಹೈಕೋರ್ಟ್ ಗಮನಿಸಿತು. ದೊರೆಸ್ವಾಮಿ ಅವರ ಕಾರ್ಯವೈಖರಿಯನ್ನು ಗಮನಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿತು.

ಪ್ರತಿವಾದಿಯ ನಡವಳಿಕೆಯನ್ನು ವಿಚಾರಣಾ ನ್ಯಾಯಾಲಯವು ಗಮನಿಸುವುದಿಲ್ಲ. ಪ್ರತಿವಾದಿಯು ಹಿಡುವಳಿದಾರನಾಗಿದ್ದು, ಅವನು ಅಭ್ಯಾಸ ಮಾಡುವ ವಕೀಲನಾಗಿದ್ದಾನೆ. ಅವನು ಮನೆಯಲ್ಲಿ ಮುಂದುವರೆಯಲು ಇಲ್ಲಸಲ್ಲದ ಕಾರಣಗಳನ್ನು ನೀಡುತ್ತಿದ್ದಾನೆ ಎಂಬ ಅಂಶವನ್ನು ಗಮನಿಸಿದೆ ಎಂದು ಹೈಕೋರ್ಟ್ ಹೇಳಿತು. ಈ ನಿಟ್ಟಿನಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ಹೈಕೋರ್ಟ್, ದೊರೆಸ್ವಾಮಿ ವಿರುದ್ಧ ಮನೆ ತೆರವು ಮಾಡುವಂತೆ ಆದೇಶ ಜಾರಿಗೊಳಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+