ಬೆಂಗಳೂರು : 2 ಗಂಟೆಯಲ್ಲಿ 4 ಕಡೆ ಸರಗಳ್ಳತನ
ಬೆಂಗಳೂರು, ಆಗಸ್ಟ್ 10 : ಬೆಂಗಳೂರಿನಲ್ಲಿ ಸರಗಳ್ಳರು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಸೋಮವಾರ ಬೆಳಗ್ಗೆ 2 ಗಂಟೆಯಲ್ಲಿ 4 ಕಡೆ ಸರಗಳ್ಳತನವಾಗಿದೆ. ಸರಗಳ್ಳರನ್ನು ಹಿಡಿಯಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಸೋಮವಾರ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿದ್ಯಾರಣ್ಯಪುರ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ 2ನೇ ಹಂತ, ಮಾಗಡಿ ರಸ್ತೆಯಲ್ಲಿ 2 ಗಂಟೆಯ ಅವಧಿಯಲ್ಲಿ ಸರಣಿ ಸರಗಳ್ಳತನ ಮಾಡಿದ್ದಾರೆ. [ಬೆಂಗಳೂರು : ಮುಂದುವರೆದ ಸರಗಳ್ಳತನ]

ಮಾಗಡಿ ರಸ್ತೆಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಲಕ್ಷ್ಮೀ ಎಂಬುವವರ 80 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. [1 ಗಂಟೆಯಲ್ಲಿ 10 ಕಡೆ ಸರಗಳ್ಳತನ]
Please be aware of Chain-snatching by helmet worn bike riders during early & evening hours @CPBlr @DcpComdCentre pic.twitter.com/wWJCqSW068
— BengaluruCityPolice (@BlrCityPolice) August 10, 2015 ವಿಶೇಷ ತಂಡ ರಚನೆ : ಸರಣಿ ಸರಗಳ್ಳತನದ ಬಗ್ಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದು, ಕಳ್ಳರನ್ನು ಬಂಧಿಸಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Magadi Road too reported chain snatching. @dcpnorthbcp & @DCPWestBCP teams on the alert. @CPBlr https://t.co/lbwMWO8HIt
— Pratap Reddy, IPS (@AddlCPWest) August 10, 2015 ಸರಗಳ್ಳರು ನಗರಕ್ಕೆ ಆಗಮಿಸಿದ್ದು ಜನರು ಜಾಗೃತರಾಗಿರಬೇಕು ಎಂದು ಬೆಂಗಳೂರು ಪೊಲೀಸರು ಟ್ವಿಟರ್ ಮೂಲಕ ಕರೆ ನೀಡಿದ್ದಾರೆ. ಬೈಕ್ ಸವಾರರ ಬಗ್ಗೆ ಎಚ್ಚರದಿಂದಿರಿ ಅನುಮಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications