ಜನಪದ ಸಾರ ಸೂಸುವ ಸೋಜುಗದ ಸೂಜು ಮಲ್ಲಿಗೆ, ತಪ್ಪದೇ ಪಾಲ್ಗೊಳ್ಳಿ
ಬೆಂಗಳೂರು, ಅಕ್ಟೋಬರ್ 24: ಸೋಜುಗದ ಸೂಜು ಮಲ್ಲಿಗೆ ಜನಪದ ಗೀತೆಯನ್ನು ಸಾಮಾನ್ಯವಾಗಿ ಕೇಳದವರಿಲ್ಲ, ಹುಟ್ಟು, ಮೂಲವನ್ನು ತಿಳಿಯದ ಜನಪದ ಪರಿಗಳು ಹಲವಾರು.
ಅಕ್ಟೋಬರ್ 28ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಸೋಜುಗದ ಸೂಜು ಮಲ್ಲಿಗೆ ಸಮ್ಮಿಶ್ರ ಗಾಯನ ಕಾರ್ಯಕ್ರಮ ನಡೆಯಲಿದೆ. ಅನನ್ಯ ಭಟ್, ಚಿಂತನ್ ಹಾಗೂ ವಿಕಾಸ್ ಸಂಗಡಿಗರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಗೀಗಿ-ಜೋಗಿ, ಲಾವಣಿ-ಸೋಬಾನೆ, ರಾಗಿ ಬೀಸುವ ಪದ ಹೀಗೆ ಹಲವಾರು ಪರಿಗಳಿವೆ, ಬೇರೆ ಹಾಡುಗಳಂತೆ ಪುಸ್ತಕವನ್ನು ಸೇರದೆ ಕೇವಲ ಬಾಯಿಂದ ಬಾಯಿಗೆ ಹರಡುವ ಮೂಲಕ ಆ ಭಾಗದ ವೈಶಿಷ್ಟ್ಯವನ್ನು ಸಾರುವ ಕೆಲಸವನ್ನು ಈ ಗೀತೆಗಳು ಮಾಡುತ್ತವೆ.
ಬಳುವಳಿಯಾಗಿ ಬಂದ ಈ ಪರ್ಯಾಯವಿಲ್ಲದ ಆಸ್ತಿಗಳನ್ನು ಇಂದಿ, ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ.











Click it and Unblock the Notifications