Viral Flu: ಬೆಂಗಳೂರಿನಲ್ಲಿ ಜ್ವರ ಪ್ರಕರಣಗಳು ಉಲ್ಬಣ: ಮಕ್ಕಳು ಮತ್ತು ವೃದ್ಧರಿಗೆ ವೈದ್ಯರ ಸಲಹೆ
ಬೆಂಗಳೂರು ಮಾರ್ಚ್ 27: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕವನ್ನು ಸೃಷ್ಟಿ ಮಾಡಿದೆ. ಹೀಗಾಗಿ ವೈದ್ಯರು ಲಸಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಅನುಸರಿಸುವಂತೆ ಸಾರ್ವಜನಿಕೆರಿಗೆ ಸೂಚನೆ ನೀಡಿದ್ದಾರೆ.
ಇತ್ತೀಚಿಗೆ ರಾಜ್ಯದೆಲ್ಲೆಡೆ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಜಾಗೃತಿ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಶ್ರುತಾ ಕೀರ್ತಿ (21) ಅವರು ತಮ್ಮ ಸ್ನೇಹಿತರೊಂದಿಗೆ ನಗರ ಪ್ರವಾಸಕ್ಕೆ ತೆರಳಿ ವಾಪಸ್ಸಾದ ಒಂದು ವಾರದ ನಂತರ ಅಸ್ವಸ್ಥರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಶ್ರುತಾ ಕೀರ್ತಿ ಅವರು, "ಆರಂಭದಲ್ಲಿ ನನಗೆ ನಿಜವಾಗಿಯೂ ಕೆಟ್ಟ ತಲೆನೋವು ಮತ್ತು ಗಂಟಲು ನೋವು ಇತ್ತು. ಅದರ ನಂತರ ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡಿತು" ಕೀರ್ತಿ ಹೇಳಿದ್ದಾರೆ. ಬಳಿಕ ಅವರು ತಲೆ ಸುತ್ತುವಿಕೆಯನ್ನೂ ಅನುಭವಿಸಿದ್ದಾರೆ. ಈ ವೇಳೆ ಕೀರ್ತಿ ಮನೆಯಲ್ಲಿ ಸ್ವಯಂ-ಔಷಧಿ ಮಾಡಲು ಪ್ರಯತ್ನಿಸಿದರು. ಆದರೆ ಅವರ ಸ್ಥಿತಿಯು ಇನ್ನಷ್ಟು ಹದಗೆಟ್ಟಿತು. ಕೆಲವು ದಿನಗಳ ನಂತರ, ಆಕೆಯನ್ನು ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ವಿಪರೀತ ಜ್ವರ ಇರುವುದರಿಂದ ಡ್ರಿಪ್ಸ್ ಕೂಡ ಹಾಕಲಾಯಿತು.

ಬೆಂಗಳೂರಿನಲ್ಲಿ ಹೆಚ್ಚಾದ ಕಾಲೋಚಿತ ಜ್ವರ
ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಆರೋಗ್ಯ ಇಲಾಖೆಯ ಆಯುಕ್ತ ಡಿ ರಂದೀಪ್ ಕಾಲೋಚಿತ ಜ್ವರ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ. "ರೋಗಲಕ್ಷಣಗಳು ಮುಂದುವರಿದರೆ ಅಥವಾ ಉಲ್ಬಣಗೊಂಡರೆ, ಸ್ವಯಂ-ಔಷಧಿಗಳಿಗಿಂತ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಿ" ಎಂದು ರಂದೀಪ್ ಅವರು ಹೇಳಿದರು. ಇನ್ಫ್ಲುಯೆನ್ಸವನ್ನು ಸಾಮಾನ್ಯವಾಗಿ ಕಾಲೋಚಿತ ಜ್ವರ ಎಂದು ಕರೆಯಲಾಗುತ್ತದೆ. ಇದು ಜ್ವರ, ಶೀತ, ಹಸಿವಿನ ಕೊರತೆ, ನೋಯುತ್ತಿರುವ ಗಂಟಲು, ಒಣ ಕೆಮ್ಮು, ಸ್ನಾಯುಗಳ ನೋವು, ತಲೆನೋವು ಮತ್ತು ಸೀನುವಿಕೆಯಿಂದ ಹೆಚ್ಚು ಬಳಲಿಸುತ್ತದೆ.

ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ 20-30% ಹೆಚ್ಚಳ
ಪ್ರಸ್ತುತ ಹೆಚ್ಚಾಗುತ್ತಿರುವ ಜ್ವರ, ಅಡೆನೊವೈರಸ್, ಇನ್ಫ್ಲುಯೆನ್ಸ A (H1N1 ಮತ್ತು H3N2) ಮತ್ತು ಇನ್ಫ್ಲುಯೆನ್ಸ B ಯಿಂದ ಉಂಟಾಗುತ್ತದೆ. "ಕಳೆದ ತಿಂಗಳಿಗೆ ಹೋಲಿಸಿದರೆ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ 20-30% ಹೆಚ್ಚಳವಾಗಿದೆ. ನಾವು ರೋಗ ದೃಢೀಕರಿಸಲು ಪರೀಕ್ಷೆಯನ್ನು ನೀಡುತ್ತೇವೆ. ಆದರೆ ಹೆಚ್ಚಿನ ಅಪಾಯವಿರುವವರು ಪರೀಕ್ಷೆಗೆ ಒಳಪಡುವುದು ಸೂಕ್ತ" ಎಂದು ಸ್ಪಾರ್ಶ್ ಆಸ್ಪತ್ರೆಯ ಉಷ್ಣವಲಯದ ಔಷಧ ಮತ್ತು ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ ಜಾನ್ ಪಾಲ್ ಎಂ ಹೇಳಿದರು.
"2023ರ ಮೊದಲ ಮೂರು ತಿಂಗಳಲ್ಲಿ 2022ರಲ್ಲಿ ನಾವು ಹೊಂದಿದ್ದ ಅರ್ಧದಷ್ಟು ಜ್ವರ ಪ್ರಕರಣಗಳನ್ನು ಕಾಣಬಹುದು" ಎಂದು ಸಕ್ರಾ ವರ್ಲ್ಡ್ ಹಾಸ್ಪಿಟಲ್ನ ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿಯ ಹಿರಿಯ ಸಲಹೆಗಾರ ಮತ್ತು ಎಚ್ಒಡಿ ಡಾ ರಜತ್ ಆತ್ರೇಯ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ ಜನವರಿಯಲ್ಲಿ ಎರಡು, ಫೆಬ್ರವರಿಯಲ್ಲಿ 13 ಮತ್ತು ಮಾರ್ಚ್ನಲ್ಲಿ ಶನಿವಾರದವರೆಗೆ 59 ಇನ್ಫ್ಲುಯೆಂಜಾ ಬಿ ಪ್ರಕರಣಗಳು ಕಂಡುಬಂದಿವೆ.

'ಆರಂಭಿಕ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ'
ಇದರಿಂದಾಗಿ ಹೆಚ್ಚು ಜಾಗೃತರಾಗಲು ವೈದ್ಯರು ಸಲಹೆಯನ್ನು ನೀಡಿದ್ದಾರೆ. ಜ್ವರ ಹೆಚ್ಚಾದರೆ ವೈದ್ಯಕೀಯ ಸಲಹೆಯನ್ನು ಪಡೆಯುವುದು ಮತ್ತು ಯಾರಾದರೂ ಅನುಮಾನಿಸಿದರೆ ಪರೀಕ್ಷೆಯನ್ನು ಪಡೆಯುವುದು ಮುಖ್ಯವಾಗಿದೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಮತ್ತು ಪ್ರಯಾಣ ಔಷಧಿ ಸಲಹೆಗಾರರಾದ ಡಾ ಸ್ವಾತಿ ರಾಜಗೋಪಾಲ್ ಹೇಳಿದರು. "ಆರಂಭಿಕವಾಗಿ ವೈದ್ಯರ ಬಳಿ ಹೋದರೆ ಆಂಟಿವೈರಲ್ ಔಷಧಿಗಳು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಬಹುದು" ಎಂದು ಅವರು ಹೇಳಿದರು. ಹೀಗಾಗಿ ಹೆಚ್ಚು ಜ್ವರ ಇನ್ನಿತರ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಮಕ್ಕಳು ಮತ್ತು ವೃದ್ಧರಿಗೆ ವೈದ್ಯರ ಸಲಹೆ
ಹೆಚ್ಚಿನ ಜ್ವರ ಲಕ್ಷಣಗಳು ವೈರಲ್ ಸೋಂಕಿನಿಂದ ಉಂಟಾಗುತ್ತವೆ ಮತ್ತು ಆದ್ದರಿಂದ ಪ್ರತಿಜೀವಕಗಳು ಚಿಕಿತ್ಸೆಗೆ ಸಹಾಯ ಮಾಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಬ್ಯಾಕ್ಟೀರಿಯಾದ ಸೋಂಕುಗಳಿಗೆ ಮಾತ್ರ ಪ್ರತಿಜೀವಕಗಳು ಕಾರ್ಯನಿರ್ವಹಿಸುತ್ತವೆ. "ದೇಹದ ಉಷ್ಣತೆ ಮತ್ತು ದೇಹದ ನೋವು ಹೆಚ್ಚಾದಾಗ ದಿನಕ್ಕೆ ಮೂರು ಬಾರಿ ಪ್ಯಾರಸಿಟಮಾಲ್ ತೆಗೆದುಕೊಳ್ಳಿ. ರೋಗಿಗೆ ಗಂಟಲಿನ ಕಿರಿಕಿರಿ ಅಥವಾ ಗಂಟಲಿನ ತುರಿಕೆ ಇದ್ದರೆ, ಅವರು ಆಂಟಿಹಿಸ್ಟಾಮೈನ್ ತೆಗೆದುಕೊಳ್ಳಬಹುದು" ಎಂದು ಸ್ಪರ್ಶ ಆಸ್ಪತ್ರೆಯ ಹಿರಿಯ ಸಲಹೆಗಾರ ಆಂತರಿಕ ವೈದ್ಯಕೀಯ ಡಾ.ಕೆ.ಪಿ.ಬಾಲರಾಜ್ ಹೇಳಿದರು. "ಇದು ಸ್ವಯಂ-ಸೀಮಿತಗೊಳಿಸುವ ಕಾಯಿಲೆಯಾಗಿದ್ದು ಅದು 3-5 ದಿನಗಳವರೆಗೆ ಇರುತ್ತದೆ" ಎಂದು ಅವರು ಹೇಳಿದರು.
"ನಾವು ಟೆಟ್ರಾವಲೆಂಟ್ ಫ್ಲೂ ಲಸಿಕೆಗಳನ್ನು ಹೊಂದಿದ್ದೇವೆ. ಇದು H1N1, H3N2 - ಎರಡು ಫ್ಲೂ A ರೂಪಾಂತರಗಳು - ಮತ್ತು ಕಾಲೋಚಿತ ಏಕಾಏಕಿ ಉಂಟುಮಾಡುವ ಎರಡೂ ಫ್ಲೂ ಬಿ ರೂಪಾಂತರಗಳ ವಿರುದ್ಧ ರಕ್ಷಣೆ ನೀಡುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ವೈದ್ಯಕೀಯ ಪರಿಸ್ಥಿತಿ ಹೊಂದಿರುವವರು ಲಸಿಕೆಯನ್ನು ಪಡೆಯಬೇಕೆಂದು ಶಿಫಾರಸು ಮಾಡಲಾಗಿದೆ. "ಡಾ ಆತ್ರೇಯಾ ಹೇಳಿದರು.












Click it and Unblock the Notifications