ಮಳೆಯಿಂದಾಗಿ ಬಯಲಾಯ್ತೇ 'ನಮ್ಮ ಮೆಟ್ರೋ' ಕಾಮಗಾರಿ ಸಾಚಾತನ?
ಮಳೆಯಿಂದಾಗಿ ಸೋರುತ್ತಿರುವ ನಮ್ಮ ಮೆಟ್ರೋ ನಿಲ್ದಾಣಗಳು. ಮೆಟ್ರೋ ಕಾಮಗಾರಿಯನ್ನು ಪ್ರಶ್ನಿಸುತ್ತಿವೆ ಈ ವಾಟರ್ ಲೀಕೇಜ್.
ಬೆಂಗಳೂರು, ಆಗಸ್ಟ್ 28: 'ನಮ್ಮ ಮೆಟ್ರೋ' ಮಾರ್ಗಗಳು ಉದ್ಘಾಟನೆಯಾದಾಗ ಬೆಂಗಳೂರಿಗರಾದ ನಾವು ಹಿರಿಹಿರಿ ಹಿಗ್ಗಿದೆವು. ವಿಶ್ವಮಟ್ಟದ ಸಂಪರ್ಕ ಸೌಲಭ್ಯವೊಂದು ನಮ್ಮಲ್ಲೂ ತಲೆಯಿತ್ತೆಂದು ಬೀಗಿದೆವು. ಮೆಟ್ರೋ ರೈಲಿನಲ್ಲಿ ಸಂಚರಿಸಿ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೆವು. ಆದರೆ, ಈ ಎಲ್ಲಾ ಖುಷಿ, ಹಿರಿಮೆ, ಸಂಭ್ರಮಗಳು ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಅಗಾಧ ಮಳೆಗೆ ಕೊಚ್ಚಿಕೊಂಡು ಹೋಗಿವೆ.
Recommended Video

ಹೌದು. ನಾವು ವಿಶ್ವಮಟ್ಟದ ಸೌಲಭ್ಯವೆಂದು ಕಲ್ಪಿಸಿಕೊಂಡಿದ್ದ ನಮ್ಮ ಮೆಟ್ರೋ ನಿರ್ಮಾಣದಲ್ಲಿನ ಲೋಪ ದೋಷಗಳು ಈಗ ಕಣ್ಣಿಗೆ ರಾಚುತ್ತಿವೆ. ಅಗಾಧ ಮಳೆಯಿಂದಾಗಿ, ಹಲವಾರು ಮೆಟ್ರೋ ನಿಲ್ದಾಣಗಳಲ್ಲಿರುವ ಮೇಲ್ಛಾವಣೆಗಳು ಸೋರುತ್ತಿವೆ. ಫ್ಲಾಟ್ ಫಾರಂನೊಳಗೆ ನೀರು ನುಗುತ್ತಿವೆ. ನೆಲ ಮಟ್ಟದಿಂದ ಕೆಳಗಿರುವ ಮೆಟ್ರೋ ನಿಲ್ದಾಣಗಳಿಗೆ ಮಳೆ ನೀರು ನುಗ್ಗಿ ನಿಲ್ದಾಣಗಳಲ್ಲಿ ನೀರು ನಿಲ್ಲುವಂತಾಗುತ್ತಿದೆ.

ಇದು, ನಮ್ಮ ಮೆಟ್ರೋ ಬಗ್ಗೆ ಜನರಿಗೆ ಭ್ರಮ ನಿರಸನವಾಗುವಂತೆ ಮಾಡಿದೆ. ಎಂ.ಜಿ. ರಸ್ತೆ ನಿಲ್ದಾಣ, ಕಬ್ಬನ್ ಪಾರ್ಕ್ ನಿಲ್ದಾಣ ಸೇರಿದಂತೆ ಹಲವರು ಮೆಟ್ರೋ ಸ್ಟೇಷನ್ ಗಳ ಮೇಲ್ಛಾವಣೆ ಸೋರುತ್ತಿವೆ ಅಥವಾ ನಿಲ್ದಾಣದೊಳಗ್ಗೆ ನೀರು ಬಂದು ನಿಲ್ಲುತ್ತಿದೆ. ಟಿಕೆಟ್ ಕೌಂಟರ್ ಗಳು, ಫ್ಲಾಟ್ ಫಾರಂಗಳು - ಹೀಗೆ ಎಲ್ಲೆಲ್ಲೂ ನೀರು ಸೋರುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ತಂದಿದೆ.
ಅಷ್ಟೇ ಅಲ್ಲ, ನಮ್ಮ ಮೆಟ್ರೋದ ಪ್ರಮುಖಾತಿ ಪ್ರಮುಖ ನಿಲ್ದಾಣವಾದ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಕೂಡ ಇಂಥ ಲೋಪದೋಷಗಳಿಂದ ಹೊರತಾಗಿಲ್ಲ. ಹಸಿರು ಹಾಗೂ ನೇರಳೆ ಮಾರ್ಗಗಳಿಗೆ ಜಂಕ್ಷನ್ ಇದಾಗಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ 3ನೇ ಹಾಗೂ 4ನೇ ಫ್ಲಾಟ್ ಫಾರಂ ನ ಮೇಲ್ಛಾವಣೆಯು ಈಗಾಗಲೇ ಲೀಕ್ ಆಗುತ್ತಿದೆ.
ಸುಮಾರು 7.5 ಎಕರೆ ವಿಸ್ತೀರ್ಣದಲ್ಲಿ 500 ಕೋಟಿ ರು. ವೆಚ್ಛದಲ್ಲಿ ಕಟ್ಟಲಾಗಿರುವ ಈ ನಿಲ್ದಾಣವು 2016ರ ಏಪ್ರಿಲ್ ನಲ್ಲಿ ಭಾಗಶಃ ಉದ್ಘಾಟನೆಗೊಂಡಿತ್ತು. ಇದೇ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಜನಸೇವೆಗೆ ಲಭ್ಯವಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಜನರಿಗೆ ತೆರೆದುಕೊಂಡ ನಂತರದ ಕೆಲವೇ ತಿಂಗಳುಗಳಲ್ಲೇ ಇಂಥ ದುಸ್ಥಿಗೆ ಬಂದಿರುವುದು ಶೋಚನೀಯ ಎಂದು ಮೆಟ್ರೋ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications