Get Updates
Get notified of breaking news, exclusive insights, and must-see stories!

ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಪ್ರತಿಭಟನೆ ಏಕೆ ಎಂದು ಗೊತ್ತಿತ್ತೆ?

ಬೆಂಗಳೂರು, ಏಪ್ರಿಲ್ 20 : ಕೇಂದ್ರ ಸರ್ಕಾರದ ನೂತನ ಭವಿಷ್ಯ ನಿಧಿ (ಪಿಎಫ್) ನೀತಿ ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಯಿತು. ಯಾವುದೇ ನಾಯಕರಿಲ್ಲದೇ, ಸಂಘಟನೆಗಳ ಬೆಂಬಲವಿಲ್ಲದೇ ಈ ಬೃಹತ್ ಹೋರಾಟ ನಡೆಯಿತು.

ಆಸಕ್ತಿಕರ ಸಂಗತಿ ಎಂದರೆ ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶೇ 60ರಷ್ಟು ನೌಕರರಿಗೆ ಏಕೆ ನಾವು ಹೋರಾಟ ಮಾಡುತ್ತಿದ್ದೇವೆ? ಎಂಬುದು ತಿಳಿದಿರಲಿಲ್ಲ. ಮೊದಲು ಪ್ರತಿಭಟನೆ ನಡೆಸುತ್ತಿದ್ದ ಜನರು ನಂತರ ಬಸ್ಸುಗಳಿಗೆ ಬೆಂಕಿ ಹಚ್ಚಿದರು, ಕಲ್ಲು ತೂರಾಟ ನಡೆಸಿದರು. [ಗಾರ್ಮೆಂಟ್ಸ್ ನೌಕರರ ಗೋಳಿನ ಕಥೆ ಬಿಚ್ಚಿಟ್ಟ ಸಾವಿತ್ರಿ]

protest

ರಾಜಕೀಯ ಪ್ರೇರಿತ : ಕರ್ನಾಟಕ ಬಿಜೆಪಿ ಇದೊಂದು ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ಹೇಳಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ನಡೆದ ಬೃಹತ್ ಪ್ರತಿಭಟನೆ ಇದಾಗಿದೆ. ರಾಜಕೀಯ ಪ್ರೇರಿತವಾಗಿ ನಡೆದ ಹೋರಾಟವಿದು ಎಂದು ಬಿಜೆಪಿ ನಾಯಕರು ದೂರಿದ್ದಾರೆ. ಈ ಪ್ರತಿಭಟನೆ ಹಿಂದೆ ಯಾರಿದ್ದಾರೆ? ಎಂದು ಪೊಲೀಸರು ಇನ್ನೂ ಆಲೋಚಿಸುತ್ತಿದ್ದಾರೆ. [ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?]

ಕೇಸು ವಾಪಸ್ ಪಡೆಯಿರಿ : 'ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಹಿಂಸಾಚಾರ ನಡೆಸುವ ಉದ್ದೇಶ ನಮಗೆ ಇರಲಿಲ್ಲ. ಗಾರ್ಮೆಂಟ್ಸ್ ಉದ್ಯೋಗಿಗಳ ಮೇಲೆ ಹಾಕಿರುವ ಕೇಸ್‌ಗಳನ್ನು ವಾಪಸ್ ಪಡೆಯಿರಿ. ಹಿಂಸಾಚಾರದ ಹಿಂದೆ ಬೇರೆ ವ್ಯಕ್ತಿಗಳ ಕೈವಾಡವಿದೆ. ಬಸ್ಸಿಗೆ ಬೆಂಕಿ ಹಚ್ಚಿದ್ದು, ಕಾರ್ಮಿಕರಲ್ಲ' ಎಂದು ಗಾರ್ಮೆಂಟ್ಸ್ ನೌಕರರ ಸಂಘದವರು ಹೇಳಿದ್ದಾರೆ. [ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್]

ಈ ಪ್ರತಿಭಟನೆ ಹಿಂದೆ ರಾಜಕೀಯ ಕೈವಾಡವಿದೆ. ರಾತ್ರೋರಾತ್ರಿ ಕಾರ್ಮಿಕರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ. ಸರ್ಕಾರ ಈ ಪ್ರತಿಭಟನೆ ಹಿಂದೆ ಭಾಗಿಯಾಗಿದೆ. ಗೃಹ ಸಚಿವ ಪರಮೇಶ್ವರ ಅವರು ಪರಿಸ್ಥಿತಿ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. [ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

ಪ್ರತಿಭಟನೆ ಕುರಿತು ಹೇಳಿಕೆ ನೀಡಿರುವ ಸಚಿವ ಪರಮೇಶ್ವರ ಅವರು, 'ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರು. ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣ, ಪೊಲೀಸರು ಲಾಠಿ ಚಾರ್ಜ್ ಮಾಡಲು ಸಾಧ್ಯವಾಗಿಲ್ಲ. ಈ ಪ್ರತಿಭಟನೆ ನಡೆಸಲು ಯಾವ ಸಂಘಟನೆಯವರು ಅನುಮತಿ ಪಡೆದಿರಲಿಲ್ಲ' ಎಂದು ಹೇಳಿದ್ದಾರೆ. [ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ]

'ಪ್ರತಿಭಟನೆ ನಡೆಸುತ್ತಿದ್ದವರು ಹೆಬ್ಬಗೋಡಿ ಪೊಲೀಸ್ ಠಾಣೆ ಮೇಲೆ ಏಕೆ ದಾಳಿ ಮಾಡಿದರು? ಎಂಬುದು ನಮಗೂ ತಿಳಿದಿಲ್ಲ. ತನಿಖೆಯ ನಂತರ ಮಾತ್ರ ಈ ಕುರಿತು ತಿಳಿಯಲಿದೆ. ಹೊರಗೆ 7 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸುತ್ತಿದ್ದರು. ಠಾಣೆಯಲ್ಲಿ 20 ಪೊಲೀಸರಿದ್ದರು. ಆಗ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗಿತ್ತು' ಎಂದು ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+