ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಬ್‌ಸ್ಟೇಷನ್‌ ಅಪೂರ್ಣ: ಬೆಂಗಳೂರು-ಮೈಸೂರು ವಿದ್ಯುತ್‌ ರೈಲು ವಿಳಂಬ

By Nayana
|
Google Oneindia Kannada News

ಬೆಂಗಳೂರು, ಜೂನ್‌ 26: ಮೈಸೂರು ಹಾಗೂ ಬೆಂಗಳೂರು ನಡುವಿನ ವಿದ್ಯುತ್‌ ರೈಲು ಮಾರ್ಗದಲ್ಲಿ ವಿದ್ಯುತ್‌ ಉಪಕೇಂದ್ರ ಸ್ಥಾಪನೆಯಲ್ಲಿ ವಿಳಂಬವಾಗುತ್ತಿರುವ ಕಾರಣ ವಿದ್ಯುತ್‌ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ.

ಈ ನಡುವಿನ ಮಾರ್ಗ ವಿದ್ಯುದೀಕರಣಗೊಂಡು ಆರು ತಿಂಗಳು ಕಳೆದಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ವಿದ್ಯುತ್ ರೈಲುಗಳು ಸಂಚರಿಸುತ್ತಿಲ್ಲ, ಮಂಡ್ಯದ ಎಲಿಯೂರಿನಲ್ಲಿ ಸ್ಥಾಪನೆಗೊಂಡಿರುವ ವಿದ್ಯುತ್‌ ಉಪಕೇಂದ್ರಕ್ಕೆ ಕೆಪಿಟಿಸಿಎಲ್‌ನಿಂದ ವಿದ್ಯುತ್‌ ಸರಬರಾಜಾಗುತ್ತಿಲ್ಲದ ಕಾರಣ ವಿದ್ಯುತ್‌ ಆಧಾರಿತ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಪ್ಲಾಸ್ಟಿಕ್‌ಗೆ ಗುಡ್‌ ಬೈ, ರೈಲ್ವೆ ನಿಲ್ದಾಣಗಳಲ್ಲಿ ಬರಲಿದೆ ವಾಟರ್‌ ಎಟಿಎಂ ಪ್ಲಾಸ್ಟಿಕ್‌ಗೆ ಗುಡ್‌ ಬೈ, ರೈಲ್ವೆ ನಿಲ್ದಾಣಗಳಲ್ಲಿ ಬರಲಿದೆ ವಾಟರ್‌ ಎಟಿಎಂ

ಮಂಡ್ಯ ಜಿಲ್ಲಾಡಳಿತ ಮತ್ತು ಈ ಭಾಗದ ಎಲ್ಲ ಚುನಾಹಿತ ಜನಪ್ರತಿನಿದಿಗಳು ಆದಷ್ಟು ಬೇಗ ಸಭೆ ಸೇರಿ ರೈತರ ಭೂಮಿಗೆ ಸಮರ್ಪಕವಾದ ಪರಿಹಾರವನ್ನು ನಿಗದಿ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕೊಡಬೇಕೆಂದು ಮೈಸೂರು ರೈಲು ಬಳಕೆದಾರರ ಮನವಿ ಮಾಡಿದೆ.

Electric train between Bengaluru and Mysuru still a dream

ರೈಲ್ವೆ ಇಲಾಖೆಯು ಎಲಿಯೂರಿನಲ್ಲಿ ಸ್ಥಾಪಿಸಿರುವ ಉಪವಿದ್ಯುತ್‌ ಕೇಂದ್ರಕ್ಕೆ ವಿದ್ಯುತ್‌ ಪೂರೈಕೆಗಾಗಿ ಕೆಪಿಟಿಸಿಎಲ್‌ 13 ಕೋಟಿ ರೂ. ಸಂದಾಯ ಮಾಡಿದೆ. ಈ ಕಾರ್ಯ ಪೂರ್ಣಗೊಳ್ಳಲು ಎಲಿಯೂರಿನಿಂದ ತೂಬಿನಕೆರೆವರೆಗೂ ಹೊಸ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಅಳವಡಿಸುವ ಅಗತ್ಯವಿದೆ.

ಈ ವಿದ್ಯುತ್‌ ಮಾರ್ಗವು ರೈತರ ಕೃಷಿ ಭೂಮಿಯ ಮೂಲಕ ಹಾದು ಹೋಗಬೇಕಾಗಿರುವುದರಿಂದ ಅಲ್ಲಿನ ರೈತರಿಗೆ ಸರಿಯಾದ ಪರಿಹಾರ ನಿಗದಿಯಾಗದ ಕಾರಣ ಕಾರ್ಯ ವಿಳಂಬಗೊಳ್ಳುತ್ತಿದೆ. ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯುತ್‌ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮೈಸೂರು ರೈಲು ಬಳೆಕದಾರರ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

English summary
As substation work at Eliyuru of Mandya district, electric train service between Bengaluru and Mysuru still remained a dream despite electric line alignment completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X