ಬಿಬಿಎಂಪಿ ಚುನಾವಣೆಗೆ ಸಜ್ಜಾದ ಬೆಂಗಳೂರು ಪೊಲೀಸ್
ಬೆಂಗಳೂರು, ಆಗಸ್ಟ್ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಚುನಾವಣಾ ಪ್ರಕ್ರಿಯೆ ಶಾಂತ ರೀತಿಯಿಂದ ನಡೆಸುವ ಸಂಬಂಧ ವಿಸ್ತೃತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಗುರುವಾರ ಹೇಳಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಬಹಿರಂಗ ಪ್ರಚಾರ ಗುರುವಾರ ಬೆಳಗ್ಗೆ ಅಂತ್ಯವಾಗಿದೆ. 22-08-2015 ರಂದು 198 ವಾರ್ಡ್ ಗಳಿಗೆ ಮತದಾನ ನಡೆಯಲಿದ್ದು,ವಿವಿಧ ರಾಜಕೀಯ ಪಕ್ಷಗಳಿಂದ ಒಟ್ಟಾರೆಯಾಗಿ 1121 ಅಭ್ಯರ್ಥಿಗಳು ಸ್ಪರ್ಧಿಯಲ್ಲಿರುತ್ತಾರೆ ಎಂದು ಮೇಘರಿಕ್ ಅವರು ವಿವರಿಸಿದರು.
ಕಳೆದ ಬಾರಿ ಶೇ.44ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ, ಬಿಬಿಎಂಪಿ, ನಗರಪೊಲೀಸ್ ಇಲಾಖೆ ಸಜ್ಜಾಗಿವೆ.

ಬಿಬಿಎಂಪಿ ಚುನಾವಣೆಗೆ ಪೂರ್ವ ತಯಾರಿ ಮುಖ್ಯಾಂಶಗಳು:
* ಒಟ್ಟು 6554 ಮತಗಟ್ಟೆಗಳಿದ್ದು ಅದರಲ್ಲಿ 1700-ಅತಿಸೂಕ್ಷ್ಮ,1991-ಸೂಕ್ಷ್ಮ ಮತ್ತು 2863-ಸಾಮಾನ್ಯ ಮತಗಟ್ಟೆಗಳಿವೆ.
* ಅತಿಸೂಕ್ಷ್ಮ ಮತಗಟ್ಟೆಗಳಿಗೆ 1-ಎಚ್ ಸಿ & 1-ಪಿಸಿ/1-ಹೋಮ್ ಗಾರ್ಡ್, ಸೂಕ್ಷ್ಮ ಮತಗಟ್ಟೆಗಳಿಗೆ 1- ಎಚ್ ಸಿ/ಪಿಸಿ & 1-ಹೋಮ್ ಗಾರ್ಡ್ ಮತ್ತು ಸಾಮಾನ್ಯ ಮತಗಟ್ಟೆಗಳಿಗೆ 1-ಪಿಸಿ ರಂತೆ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿರುತ್ತದೆ.
* 751 ಸೆಕ್ಟರ್ ಮೊಬೈಲ್ ಗಳನ್ನು ನಿಯೋಜಿಸಲಾಗಿದ್ದು ಸದರಿ ಮೊಬೈಲ್ ಗಳ ಉಸ್ತುವಾರಿ ಕರ್ತವ್ಯವನ್ನು ನಿರ್ವಹಿಸಲು 44 ಡಿಸಿಪಿ/ಎಸಿಪಿ ದರ್ಜೆಯ ಅಧಿಕಾರಿಗಳನ್ನು ಉಸ್ತುವಾರಿ ಮೊಬೈಲ್ ಗಳನ್ನು ನೇಮಿಸಲಾಗಿರುತ್ತದೆ.
* ಪ್ರತಿ ಠಾಣೆಗೆ 03 ಪಿಕೆಟಿಂಗ್ ಗಳ ಬೆಂಗಳೂರು ನಗರದಲ್ಲಿ 309 ಪಿಕೆಟಿಂಗ್ ಗಳ ವ್ಯವಸ್ಧೆ ಮಾಡಲಾಗಿದೆ.
* ಕರ್ನಾಟಕ ರಾಜ್ಯದ 02 ಪೊಲೀಸ್ ಕಮೀಷನರೇಟ್ ಹಾಗೂ 05 ವಲಯಗಳಿಂದ ಒಟ್ಟು 520-ಪಿಎಸ್ಐ/ಎಎಸ್ಐ & 3500 ಹೆಚ್ಸಿ-ಪಿಸಿ ಗಳೊಂದಿಗೆ, 7000 ಗೃಹ ರಕ್ಷಕ ಸಿಬ್ಬಂದಿಗಳು, 103 ಕೆ.ಎಸ್.ಆರ್.ಪಿ. ತುಕಡಿಗಳನ್ನು ಪ್ರತಿ ಪೊಲೀಸ್ ಠಾಣೆಗೆ 01 ರಂತೆ ನಿಯೋಜಿಸಲಾಗಿದೆ.
* ಈ ತುಕಡಿಯನ್ನು ಅರ್ಧ ಭಾಗವಾಗಿ ವಿಂಗಡಿಸಿ ನಂತರ ಒಟ್ಟಾರೆಯಾಗಿ 206 ತುಕಡಿಗಳನ್ನು ನೇಮಿಸುವುದರೊಂದಿಗೆ ಉಸ್ತುವಾರಿ ಕರ್ತವ್ಯಕ್ಕೆ ಸಿಪಿ ಸೇರಿದಂತೆ ಉಳಿದ ಎಲ್ಲಾ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಒಟ್ಟಾರೆಯಾಗಿ 19859 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.
* ಚುನಾವಣೆಯ ಸಂಬಂಧ 850 Static Sectors & 2500 ವೈರ್ ಲೆಸ್ ಗಳನ್ನು ಬಂದೋಬಸ್ತ್ ಭಾಗವಾಗಿ ವ್ಯವಸ್ಧೆಯನ್ನು ಏರ್ಪಡಿಸಲಾಗಿರುತ್ತದೆ.
* ಇದರ ಅಂಗವಾಗಿ ಒಟ್ಟು 1336 ವ್ಯಕ್ತಿಗಳ ವಿರುದ್ಧ ಐಪಿಸಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಶಾಂತಿ ಸುವ್ಯವಸ್ಧೆಯನ್ನು ಕಾಪಾಡಲು ಮುಚ್ಚಳಿಕೆ ಪಡೆಯಲಾಗಿದೆ. ಒಟ್ಟು 5268 ಆಯುಧಗಳನ್ನು ಪೊಲೀಸ್ ಸುಪರ್ದಿಗೆ ಜಮಾ ಮಾಡಿ ಕೊಳ್ಳಲಾಗಿದೆ ಅಲ್ಲದೆ 1794 ನ್ಯಾಯಾಲಯದ ವಾರೆಂಟ್ ಗಳನ್ನು ಬಜಾವಣೆ ಮಾಡಲಾಗಿದೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications