ಬಿರ್ಯಾನಿ ಪ್ರಿಯರಿಗೆ ಸುದ್ದಿ, ಉತ್ತರಹಳ್ಳಿಯಲ್ಲಿ ದಿಂಡಿಗಲ್ ತಲಪ್ಪಾಕಟ್ಟಿ
ಬೆಂಗಳೂರು, ಏಪ್ರಿಲ್ 2: ತಮಿಳುನಾಡಿನಲ್ಲಿ ದಿಂಡಿಗಲ್ ತಲಪ್ಪಾಕಟ್ಟಿ ಪ್ರಖ್ಯಾತ ಹೆಸರಾಗಿದೆ ಮತ್ತು ಈಗ ಅವರು ಉತ್ತರಹಳ್ಳಿಯಲ್ಲಿ ತಮ್ಮ ಮತ್ತೊಂದು ಮಳಿಗೆಯನ್ನು ತೆರೆಯುವ ಮೂಲಕ ತಮ್ಮ ಬಿರಿಯಾನಿ ಪ್ರೀತಿಯನ್ನು ಬೆಂಗಳೂರಿನಲ್ಲಿ ವಿಸ್ತರಿಸಿದ್ದಾರೆ. ದಿಂಡಿಗಲ್ ತಲಪ್ಪಾಕಟ್ಟಿ ಈಗಾಗಲೇ ಜಾಗತಿಕವಾಗಿ 7 ದೇಶಗಳಲ್ಲಿ ವ್ಯಾಪ್ತಿ ಹೊಂದಿದೆ ಮತ್ತು 80+ ಮಳಿಗೆಗಳನ್ನು ಹೊಂದಿದೆ.
ದಿಂಡಿಗಲ್ ತಲಪ್ಪಾಕಟ್ಟಿಯ ಚೀಫ್ ಬ್ಯುಸಿನೆಸ್ ಆಫೀಸರ್ ಅರವಿಂದ್ ಅಯ್ಯರ್, "ನಾವು ದಿಂಡಿಗಲ್ ತಲಪ್ಪಾಕಟ್ಟಿ("ಡಿಟಿ")ಯಲ್ಲಿ ವಿಶಿಷ್ಟ, ಅಧಿಕೃತ, ಸ್ಥಿರ ಮತ್ತು ಗುಣಮಟ್ಟದ ಆಹಾರ ಪೂರೈಸುವ 60 ವರ್ಷಗಳ ಪರಂಪರೆಯನ್ನು ಹೊಂದಿದ್ದೇವೆ. ನಾವು ಬಿರಿಯಾನಿ ಅಡುಗೆಯ ವಿಶಿಷ್ಟ ಶೈಲಿಗೆ ಹೆಮ್ಮೆ ಪಡುತ್ತೇವೆ ಅದು ತಲೆಮಾರುಗಳಿಂದ ವರ್ಗಾವಣೆಯಾಗಿ ಬಂದಿದೆ. ಗುಣಮಟ್ಟ ಮತ್ತು ರುಚಿ ಸದಾ ನಮಗೆ ಬಹುಮುಖ್ಯ ಆದ್ಯತೆಯಾಗಿವೆ. ಉನ್ನತ ಗುಣಮಟ್ಟದ ಸೀರಾಗಾ ಸಾಂಬಾ ಅಕ್ಕಿ, ಸಾಂಪ್ರದಾಯಿಕ ಮಸಾಲೆಗಳ ವಿಶೇಷ ಸಂಯೋಜನೆ, ಕೈಗಳಲ್ಲಿ ಅರೆಯಲಾದ ಮಸಾಲೆಗಳು ಮತ್ತು ವಿಭಿನ್ನ ರೀತಿಯ ಅಡುಗೆ ಶೈಲಿಯು ನಮ್ಮ ಬಿರಿಯಾನಿಯನ್ನು ವಿಶಿಷ್ಟ ಮತ್ತು ರುಚಿಕರವಾಗಿಸುತ್ತದೆ" ಎಂದರು.
''6 ರಾಷ್ಟ್ರಗಳಲ್ಲಿ 80+ ಶಾಖೆಗಳನ್ನು ಹೊಂದಿರುವ ಡಿಟಿ ಅತ್ಯಂತ ಪ್ರೀತಿಪಾತ್ರ ಭಾರತೀಯ ರೆಸ್ಟೋರೆಂಟ್ ಬ್ರಾಂಡ್ಗಳಲ್ಲಿ ಒಂದಾಗಿದೆ. ನಾವು ಎಷ್ಟು ಸಾಧ್ಯವೋ ಅಷ್ಟು ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರಿಗೆ ಮಹತ್ತರ ಹಾಗೂ ವಿಶಿಷ್ಟ ದಕ್ಷಿಣದ ಭಾರತೀಯ ಡೈನಿಂಗ್ ಅನುಭವ ಒದಗಿಸುತ್ತಿದ್ದೇವೆ" ಎಂದರು.

ಸದಾ ಗ್ರಾಹಕರಿಗೆ ಸಂತೃಪ್ತಿ ನೀಡುವ ದಿಂಡಿಗಲ್ ತಲಪ್ಪಾಕಟ್ಟಿ ಅವರ ವಿಶಿಷ್ಟ ತಿನಿಸುಗಳಾದ ತಲಪ್ಪಾಕಟ್ಟಿ ಮಟನ್ ಬಿರಿಯಾನಿ, ತಲಪ್ಪಾಕಟ್ಟಿ ಗನ್ ಫೈರ್ ಚಿಕನ್, ತಲಪ್ಪಾಕಟ್ಟಿ ಚಿಕನ್ ಬಿರಿಯಾನಿ, ಜಿಗರ್ಥಾಂಡಾ ಇತ್ಯಾದಿ ಒಳಗೊಂಡಿವೆ.

ಕಳೆದ 60 ವರ್ಷಗಳಿಂದ ಈ ಪ್ರಖ್ಯಾತ ಬಿರಿಯಾನಿ ಕಾಲದ ಪರೀಕ್ಷೆಯನ್ನು ಮೀರಿ ನಿಂತಿದೆ. 1957ರಲ್ಲಿ ದಿಂಡಿಗಲ್ನಲ್ಲಿ ನಾಗಸ್ವಾಮಿ ನಾಯ್ಡು, ಅವರಿಂದ ಪ್ರಾರಂಭವಾದ ಆನಂದ ವಿಲಾಸ್ ಬಿರಿಯಾನಿ ಹೋಟೆಲ್ ಈಗ ಖ್ಯಾತಿ ಪಡೆದಿರುವ ದಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ ಹೋಟೆಲ್ ಆಗಿ ಪರಿವರ್ತನೆಯಾಗಿದೆ.

ಉತ್ತರಹಳ್ಳಿಯಲ್ಲಿ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಮನೆಯಲ್ಲಿ ಸಿದ್ಧಪಡಿಸಿದ ಅಳವಡಿಕೆಗಳೊಂದಿಗೆ ಬೆರೆಸಿ ಮತ್ತು ಅದರ ಶ್ರೀಮಂತ ಪರಂಪರೆಯೊಂದಿಗೆ ಅತ್ಯುತ್ತಮವಾದ ಸಂಯೋಜನೆಯನ್ನು ಪಡೆಯಬಹುದು. ದಿಂಡಿಗಲ್ ತಲಪ್ಪಾಕಟ್ಟಿ ಈಗ ಉತ್ತರಹಳ್ಳಿಯಲ್ಲಿ ಸೇವೆ ಒದಗಿಸಲು ಸಜ್ಜಾಗಿದೆ.
Recommended Video
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications