ಲಿಂಗಾಯತರ ಬೀದಿ ಜಗಳ ನಿಲ್ಲಲಿ! (ಹೀಗೊಂದು ನಿಷ್ಪಕ್ಷಪಾತ ನಿಲುವು)
ಲಿಂಗಾಯತ ಸಮಾಜದ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಡುವವರು ಸಂಯಮದಿಂದ ವರ್ತಿಸಲಿ. 'ಬಸವ ಜ್ಯೋತಿ' ಮಾಸಿಕದ ಸಂಪಾದಕಿ ಕವನ ಅವರ ಅಭಿಪ್ರಾಯ.
ವೀರಶೈವರಿಂದ ಬೇರ್ಪಟ್ಟು ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ಲಿಂಗಾಯತರು, ಪ್ರತ್ಯೇಕ ಧರ್ಮವಾದರೆ ವೀರಶೈವ-ಲಿಂಗಾಯತ ಎಂದೇ ಪ್ರತ್ಯೇಕವಾಗಲಿ ಎಂದು ವೀರಶೈವರು ಪರಸ್ಪರ ಕಿತ್ತಾಡಿಕೊಂಡು ಮಾಡುತ್ತಿರುವ ಹಾದಿ ರಂಪ, ಬೀದಿ ಜಗಳಗಳಿಗೆ ಇನ್ನಾದರೂ ತೆರೆಬಿದ್ದು, ಎಲ್ಲರೂ ಒಂದಾಗಿ, ಪ್ರತ್ಯೇಕ ಧರ್ಮಕ್ಕಾಗಿ ಶಾಂತಿಯುತ ಹೋರಾಟ ಮಾಡಲಿ ಎಂದು 'ಬಸವ ಜ್ಯೋತಿ' ಮಾಸಿಕದ ಮುಖ್ಯ ಸಂಪಾದಕರಾದ ಕವನಾ ಅವರು ಹಾರೈಸಿದ್ದಾರೆ.
Recommended Video

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಅವರನ್ನು ಸಂದರ್ಶಿಸಿದ 'ಒನ್ ಇಂಡಿಯಾ'ದೊಂದಿಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅತ್ತ, ಪಂಚಪೀಠದವರ ಅನುಯಾಯಿಯಂತೆ ಮಾತನಾಡದೇ, ಇತ್ತ ಪ್ರತ್ಯೇಕ ಧರ್ಮಕ್ಕೆ ಹೋರಾಡುತ್ತಿರುವ ಲಿಂಗಾಯತ ಮಠಗಳ, ಧರ್ಮಗುರುಗಳ ಪರವಾಗಿಯೂ ಹೇಳದೆ ಒಂದು ರೀತಿಯ 'ತಟಸ್ಥ' ಮಾತುಗಳು ಇಂದಿನ ಲಿಂಗಾಯತ ಯುವ ಸಮೂಹ ತನ್ನ ಸಮಾಜದ ಹಿರಿಯರಿಂದ ಏನನ್ನು ಅಪೇಕ್ಷಿಸುತ್ತಿದೆ ಎಂಬುದನ್ನು ವಿವರಿಸುತ್ತದೆ.

- ಪಂಚಪೀಠ ಹಾಗೂ ಲಿಂಗಾಯತ ಧರ್ಮಗಳ ನಡುವಿನ ಒಡಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಒಡಕು ಮೂಡಲು ಪ್ರಮುಖ ಕಾರಣ ಪಂಚಪೀಠ ಮಠಗಳ ಸ್ವಾಮೀಜಿಗಳಲ್ಲಿದ್ದ ಔನ್ನತ್ಯದ ಭಾವನೆ. ಯಾವುದೇ ಸಭೆ, ಸಮಾರಂಭಗಳು ನಡೆಯಲಿ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿ ತಮ್ಮನ್ನು ವಿಐಪಿಗಳಂತೆ ಎಲ್ಲರೂ ನೋಡಿಕೊಳ್ಳಬೇಕು. ಎಲ್ಲರಿಗಿಂತ ಒಂದೆರಡು ಅಡಿ ಎತ್ತರದಲ್ಲೇ ಕುರ್ಚಿ ಹಾಕಬೇಕು ಎಂಬಿತ್ಯಾದಿ ನಿಯಮಗಳನ್ನು ಜಾರಿಗೆ ತಂದಿದ್ದೇ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ. ಇದೇ, ಲಿಂಗಾಯತರು ಪಂಚಪೀಠಗಳ ವಿರುದ್ಧ ಕೆರಳಲು ಪ್ರಮುಖ ಕಾರಣ ಎಂಬುದು ನನ್ನ ಅಭಿಪ್ರಾಯ.
- ಪಂಚಪೀಠಗಳ ಬಗ್ಗೆ ನಿಮಗೆ ಆಕ್ಷೇಪಣೆಗಳಿವೆಯೇ?
ನಾನು ಪಂಚಪೀಠಗಳ ಪರವಾಗಿಯೂ ಮಾತನಾಡುವುದಿಲ್ಲ, ಲಿಂಗಾಯತ ಮಠಗಳ ಬಗ್ಗೆಯೂ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ನಾನು ನ್ಯೂಟ್ರಲ್. ಆದರೆ, ಇಂದಿನ ವಾಸ್ತವತೆಯನ್ನು ಮನದಲ್ಲಿಟ್ಟುಕೊಂಡು ಮಾತನಾಡುತ್ತೇನೆ. ಬಸವಣ್ಣ ಹೇಳಿದ್ದೇನು, ಇವರು ಮಾಡಿದ್ದೇನು ಎಂಬುದನ್ನು ಗಮನಿಸಿದಾಗ ಪಂಚಪೀಠಗಳು ಹಾಗೂ ಅದರ ಅಧೀನದಲ್ಲಿರುವ ಮಠಗಳಲ್ಲಿ ಅನೇಕ ಲೋಪದೋಷಗಳು ಎದ್ದು ಕಾಣುತ್ತವೆ. ಸ್ತ್ರೀಯರನ್ನು ಸಮಾನವಾಗಿ ನಡೆಸಿಕೊಳ್ಳದಿರುವುದು, ಸಾಧ್ವಿಗಳಾಗ ಬಯಸುವ ಸ್ತ್ರೀಯರಿಗೆ ಆ ದಾರಿಯಲ್ಲಿ ಬೆಳೆಯಲು ಅವಕಾಶ ನೀಡದಿಲ್ಲದಿರುವುದು, ಗುರು-ಶಿಷ್ಯರೆಂಬ ಕಂದಕ ಸೃಷ್ಟಿಸಿರುವುದು, ತಾವು ಹೊಂದಿರುವ ಪೀಠಗಳ ಮುಖ್ಯಸ್ಥರ ಸ್ಥಾನಗಳಿಗೆ ತಮ್ಮ ನಂತರ ತಮ್ಮ ಸಂಬಂಧಿಗಳನ್ನೇ ತಂದು ಕೂರಿಸುವುದು... ಇತ್ಯಾದಿಗಳನ್ನು ನಾನು ಗಮನಿಸಿದ್ದೇನೆ. ಇದು ನಿಜಕ್ಕೂ ಬೇಸರ ತರಿಸುವ ವಿಚಾರ.
ಇಂಥ ಪರಿಸ್ಥಿತಿ ಲಿಂಗಯತ ಮಠಗಳಲ್ಲಿಲ್ಲ. ಅಲ್ಲಿ ಸ್ತ್ರೀ ಸಮಾನತೆ ಇದೆ. ಅಲ್ಲಿ ಸ್ತ್ರೀ ಸಾಧಕರಿಗೆ ಬೆಳೆಯಲು ಅವಕಾಶಗಳಿವೆ. ಬಸವ ತತ್ವಗಳಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಾತೆ ಮಹದೇವಿಯಂಥವರು ಪೀಠಾಧ್ಯಕ್ಷರಾಗಲು ಅವಕಾಶವಿದೆ. ಯಾವುದೇ ಬೇಧ-ಭಾವವಿಲ್ಲ. ಬಸವಣ್ಣ ಹೇಳಿದ್ದೂ ಇದನ್ನೇ. ಇದನ್ನು ಲಿಂಗಾಯತ ಮಠಗಳು ಪಾಲಿಸುತ್ತಿರುವಾಗ ಪಂಚಪೀಠಗಳು ಪಾಲಿಸದೇ ಇರುವುದು ಸಹಜವಾಗಿಯೇ ಬೇಸರ ತರಿಸುತ್ತದೆ.

- ನೀವು ಹೀಗೆ ಲಿಂಗಾಯತರನ್ನು ಹೊಗಳಿದರೆ ನಿಮ್ಮನ್ನು ಬ್ರಾಂಡ್ ಮಾಡಲಾಗುತ್ತದಲ್ಲವೇ?
ನಾನು ಅಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ನಾನು ಪಂಚಪೀಠಗಳ ಪರವಾಗಿಯೂ ಇಲ್ಲ, ಲಿಂಗಾಯತರ ಪರವಾಗಿಯೂ ಇಲ್ಲ. ಆದರೆ, ನಾನು ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವವಳು.
- ಪ್ರತ್ಯೇಕ ಧರ್ಮದ ಬಗ್ಗೆ ನಿಮ್ಮ ನಿಲುವೇನು?
ನಾನು ಒಬ್ಬ ಸಮಾಜ ಸೇವಕಿಯಾಗಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಸಾವಿರಾರು ಲಿಂಗಾಯತರ ಕುಟುಂಬಗಳನ್ನು ಹತ್ತಿರದಿಂದ ನೋಡಿದ್ದೇನೆ. ಲಿಂಗಾಯತ ಸಮಾಜದ ಹಲವಾರು ಜನರು ತುಂಬಾ ಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟಗಳಲ್ಲಿ ತೊಳಲಾಡುತ್ತಿದ್ದಾರೆ. ಅವರ ಮಕ್ಕಳು ಓದಲು ಹಣವಿಲ್ಲದೆ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಇಂಥವರಿಗೆ ಸರ್ಕಾರದಿಂದ ನೆರವು ಸಿಗಬೇಕಾದರೆ ಲಿಂಗಾಯತ ಸಮಾಜಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಲಿ ಎಂದೆನ್ನಿಸುತ್ತದೆ.
- ಒಂದು ತಟಸ್ಥ ಸ್ಥಾನದಲ್ಲಿ ನಿಂತಿರುವ ನೀವು ಈ ಸಂದರ್ಭದಲ್ಲಿ ಏನು ಹೇಳಲಿಚ್ಛಿಸುತ್ತೀರಿ?
ನಾನು ಹೇಳುವುದು ಇಷ್ಟೆ. ಪಂಚಪೀಠದವರಾಗಲೀ, ಲಿಂಗಾಯತ ಮಠಗಳ ಪೀಠಾಧ್ಯಕ್ಷರಾಗಲೀ ಮೊದಲು ಹಾದಿ ರಂಪ, ಬೀದಿ ಜಗಳ ಮಾಡುವುದನ್ನು ಬಿಡಬೇಕು. ಮಾಧ್ಯಮಗಳ ಮುಂದೆ ಸಡಿಲವಾದ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು. ಉದಾಹರಣೆಗೆ, ರಂಭಾಪುರಿ ಕ್ಷೇತ್ರದ ಗುರುಗಳು ಮಾತೆ ಮಹದೇವಿಯವರ ಬಗ್ಗೆ ಆಕ್ಷೇಪಾರ್ಹ ನುಡಿಗಳನ್ನು ಆಡಿದರು. ಅದರ ಅವಶ್ಯಕತೆ ಏನಿತ್ತು? ಹೀಗೆ, ಇತರರ ವೈಯಕ್ತಿಕ ವಿಚಾರಗಳನ್ನು ಉಲ್ಲೇಖಿಸಿ ಅವರನ್ನು ತೇಜೋವಧೆ ಮಾಡುವ ಅಧಿಕಾರ ಯಾರಿಗೂ ಇಲ್ಲ.
ಹಾಗೆಯೇ, ಮಾತೆ ಮಹದೇವಿವರೂ ಕೊಂಚ ತಾಳ್ಮೆ ವಹಿಸಿ ಸಮಯೋಚಿತ ಹೆಜ್ಜೆಗಳನ್ನಿಡಬೇಕು. ಮಾತೆತ್ತಿದರೆ ಮಾಧ್ಯಮಗಳ ಮುಂದೆ ಬಂದು ನಿಲ್ಲುವುದನ್ನು ಬಿಡಬೇಕು. ಮಾತೆ ಮಹದೇವಿ ಮಾತ್ರವಲ್ಲ ಎಲ್ಲಾ ಲಿಂಗಾಯತ ಮಠಾಧೀಶರೂ ಈ ಬಗ್ಗೆ ಕಾಳಜಿ ವಹಿಸಿ, ಪ್ರತ್ಯೇಕ ಧರ್ಮದ ವಿಚಾರಗಳು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ತಪ್ಪಿಸಬೇಕು.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications