ಸಿಲಿಕಾನ್ ಸಿಟಿಯಲ್ಲಿ ಆಧುನಿಕ ಸಂಜೀವಿನಿ 'ಅಮೃತನೋನಿ'
ಬೆಂಗಳೂರು, ಜನವರಿ 31 : ಶಿವಮೊಗ್ಗದ ಶ್ರೀನಿವಾಸ್ ಮೂರ್ತಿ ಅವರು ತಮ್ಮ ಗಂಭೀರ ಕಾಯಿಲೆಯಿಂದ ಹೊರಬರಲು ನೆರವಾದ 'ಅಮೃತನೋನಿ' ಹಣ್ಣುಗಳ ಕುರಿತು ಫೆ.೧ರಂದು ಪ್ರೆಸ್ ಕ್ಲಬ್ ಆವರಣದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಿದ್ದಾರೆ.
ಜೀವವರ್ಧಕ, ಆಧುನಿಕ ಸಂಜೀವಿನಿ, ಕ್ಯಾನ್ಸರ್ ನಂಥ ಮಾರಕ ರೋಗಗಳಿಂದ ಹಿಡಿದು ಆಧುನಿಕ ಒತ್ತಡದ ಜೀವನ ಶೈಲಿಯಿಂದ ಬರುವ ಬಹುತೇಕ ರೋಗಗಳಿಗೆ ರಾಮಬಾಣ ಈ ಅಮೃತನೋನಿ ಹಣ್ಣುಗಳು. ಮಾನಸಿಕ ಒತ್ತಡ, ಅಲರ್ಜಿ, ಆಮವಾತ, ಅಸ್ತಮಾ, ಗಂಟುನೋವು, ಕೂದಲು ಉದುರುವಿಕೆ, ಸಕ್ಕರೆ ಕಾಯಿಲೆ, ಕ್ಷಯ, ಚರ್ಮರೋಗ, ನಿರ್ಮೂಲನೆ ಮಾಡುವ 150 ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಇದಾಗಿದೆ.

ಕರಾವಳಿಯ ಕೆಲ ಪ್ರದೇಶ, ಗೊಂಡಾರಣ್ಯ, ದ್ವೀಪ ರಾಷ್ಟ್ರಗಳಲ್ಲಷ್ಟೇ ಸಿಗುತ್ತಿದ್ದ ಅಮೃತನೋನಿ ಹಣ್ಣು ಮತ್ತು ಗಿಡಗಳನ್ನು ಜನರಿಗೆ ಪರಿಷಯಿಸುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ ಎಂದು ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ. ಸ್ರೀನಿವಾಸ ಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೇಡ್ ಗಾರ್, ಗುಡ್ಡೆಕೊಪ್ಪದ ನಿವಾಸಿಯಾಗಿದ್ದಾರೆ.












Click it and Unblock the Notifications