Get Updates
Get notified of breaking news, exclusive insights, and must-see stories!

ಕನಕಪುರ ರಸ್ತೆ, ಕುಣಿಗಲ್‌ಗೆ ಶಾಕ್‌: ಈ ಹೊಸ ಜಾಗದಲ್ಲೇ 2ನೇ ಏರ್‌ಪೋರ್ಟ್‌ ನಿರ್ಮಿಸಲು ಕೇಂದ್ರದ ಮೇಲೆ ಒತ್ತಡ

ಕನಕಪುರ ರಸ್ತೆ ಅಥವಾ ಕುಣಿಗಲ್‌ ಬಳಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ರಾಜ್ಯ ಸರ್ಕಾರವು ಶತಪ್ರಯತ್ನ ಮಾಡುತ್ತಿದೆ. ಇದರ ನಡುವೆ ಇದೇ ವಿಚಾರಕ್ಕೆ ರಾಜಕೀಯ ನಾಯಕರ ಕಿತ್ತಾಟವೂ ಜೋರಾಗಿದೆ. ಈ ಎರಡನೇ ಏರ್‌ಪೋರ್ಟ್‌ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧವೇ ಸಚಿವರು ಶಾಸಕರು ತಿರುಗಿಬಿದ್ದಿದ್ದಾರೆ. ಇದೀಗ ಕನಕಪುರ ರಸ್ತೆಯೂ ಅಲ್ಲ, ಕುಣಿಗಲ್‌ ಬಳಿಯೂ ಅಲ್ಲ ಎನ್ನುವಂತೆ ಮತ್ತೊಂದು ಹೊಸ ಜಾಗದಲ್ಲಿ ಈ ಏರ್‌ಪೋರ್ಟ್‌ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಇಷ್ಟಕ್ಕೂ ಆ ಜಾಗ ಯಾವುದು ಗೊತ್ತಾ?

ರಾಜ್ಯ ಸರ್ಕಾರವು ಈ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕನಕಪುರ ರಸ್ತೆ ಹಾಗೂ ಕುಣಿಗಲ್‌ ಸೇರಿ ಮೂರು ಜಾಗಗಳನ್ನು ಗುರುತಿಸಿತ್ತು. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ತಂಡ ಕೂಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದೆ. ಇನ್ನೇನು ಅಲ್ಲಿಂದ ವರದಿ ಬಂದ ತಕ್ಷಣ ಸೂಚಿಸುವ ಜಾಗದಲ್ಲಿ ಏರ್‌ಪೋರ್ಟ್‌ ನಿರ್ಮಾಣ ಮಾಡಬೇಕು ಎಂದು ಸರ್ಕಾರ ಪ್ಲ್ಯಾನ್‌ ಮಾಡಿಕೊಂಡಿತ್ತು. ಆದರೆ ಮತ್ತೊಂದೆಡೆ ಈ ಜಾಗಗಳಲ್ಲಿ ಏರ್‌ಪೋರ್ಟ್‌ ನಿರ್ಮಾಣ ಬೇಡ ಎಂಬ ಕೂಗು ರಾಜಕೀಯ ನಾಯಕರಿಂದಲೇ ಬಲವಾಗಿ ಕೇಳಿಬಂದಿದೆ.

Demand Rises To Build Bengaluru Second Airport Near Sira Or Bukkapatna

ಕಾಂಗ್ರೆಸ್‌ ಪಕ್ಷದ ಹಲವು ಶಾಸಕರು ಹಾಗೂ ಸಚಿವರು ತುಮಕೂರು ಭಾಗದಲ್ಲೇ ಈ ಎರಡನೇ ವಿಮಾನ ನಿಲ್ದಾಣ ನಿರ್ಮಿಸಬೇಕು. ಇದರಿಂದ ಈ ಭಾಗದ ಹಲವು ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಧ್ವನಿ ಎತ್ತಿದ್ದಾರೆ. ಅತ್ತ ರಾಮನಗರ ಅಥವಾ ಬೆಂಗಳೂರು ದಕ್ಷಿಣ ಭಾಗದಲ್ಲಿ ಏರ್‌ಪೋರ್ಟ್‌ ನಿರ್ಮಿಸಲು ಡಿ.ಕೆ.ಶಿವಕುಮಾರ್‌ ಅವರು ಕೂಡ ಹರಸಾಹಸ ಪಡುತ್ತಿದ್ದಾರೆ. ಆದರೆ ಬಿಡದಿ ಸಮೀಪ ಏರ್‌ಪೋರ್ಟ್‌ ನಿರ್ಮಾಣವಾಗಲ್ಲ ಎಂದು ಸಚಿವ ಎಂಬಿ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಕುಣಿಗಲ್‌ ಸಮೀಪವೇ ಏರ್‌ಪೋರ್ಟ್‌ ನಿರ್ಮಾಣವಾಗುವುದು ಫಿಕ್ಸ್‌ ಎಂದು ಹೇಳಲಾಗುತ್ತಿದೆ.

Take a Poll

ಆದರೆ ಇದು ಕೂಡ ಬೆಂಗಳೂರಿನ ಸಮೀಪವೇ ಇರುವ ಕಾರಣಕ್ಕೆ ತುಮಕೂರು ಭಾಗದ ನಾಯಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಮೊದಲಿಗೆ ಶಿರಾ ಭಾಗದಲ್ಲಿ ಏರ್‌ಪೋರ್ಟ್‌ ನಿರ್ಮಿಸಿ, ಇದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಅನುಕೂಲ ಎಂದು ಹೇಳುತ್ತಿದ್ದಾರೆ. ಆದರೆ ಸರ್ಕಾರವು ಕನಕಪುರ ರಸ್ತೆ, ಕುಣಿಗಲ್‌ ಕಡೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಈ ನಾಯಕರು ಮುನಿಸಿಕೊಂಡಿದ್ದಾರೆ. ಅಲ್ಲದೆ ಶಿರಾ ಭಾಗಕ್ಕೆ ಏರ್‌ಪೋರ್ಟ್‌ ತರಲು ಬಿಜೆಪಿ ನಾಯಕರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.

ತುಮಕೂರು ಭಾಗದಲ್ಲಿ ಏರ್‌ಪೋರ್ಟ್‌ಗೆ ಬೆಸ್ಟ್‌ ಜಾಗ!

ಈ ಬಗ್ಗೆ ತುಮಕೂರು ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ಸಂಸದ ವಿ.ಸೋಮಣ್ಣ ಸುಳಿವು ನೀಡಿದ್ದಾರೆ. ಶಿರಾ ಭಾಗದಲ್ಲಿ ಏರ್‌ಪೋರ್ಟ್‌ ಬರಬೇಕು ಎನ್ನುವುದು ಕಾಂಗ್ರೆಸ್‌ ನಾಯಕರು ಧ್ವನಿ ಎತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ. ಹಲವು ಶಾಸಕರು ನನಗೆ ಬಂದು ಈ ಬಗ್ಗೆ ಮನವಿ ಪತ್ರ ನೀಡಿದ್ದು, ಅದನ್ನು ಕೇಂದ್ರ ಸಚಿವರಿಗೆ ಸಲ್ಲಿಸಿ ಮನವಿಯೂ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲೇ ಏರ್‌ಪೋರ್ಟ್‌ ನಿರ್ಮಾಣಕ್ಕೆ ಸೂಕ್ತವಾದ ಸಾವಿರಾರು ಎಕರೆ ಜಾಗ ಇದೆ. ಅದನ್ನು ನಾನು ನೋಡಿದ್ದೇನೆ. ಶಿರಾದಲ್ಲೇ ಆಗಬೇಕು ಎಂದೇನಿಲ್ಲ, ಬುಕ್ಕಾಪಟ್ಟಣ ಬಳಿಯೂ ಒಳ್ಳೆಯ ಜಾಗವಿದೆ ಎಂದು ಸೋಮಣ್ಣ ಹೇಳಿದ್ದಾರೆ.

Demand Rises To Build Bengaluru Second Airport Near Sira Or Bukkapatna

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಸೋಮಣ್ಣ ಈ ವಿಚಾರವಾಗಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ತುಮಕೂರು ಭಾಗಕ್ಕೆ ಏರ್‌ಪೋರ್ಟ್‌ ತರಲು ಒತ್ತಡ ತಂದೇ ತರುತ್ತೇನೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ಬಿಜೆಪಿ ನಾಯಕರಿಂದಲೂ ಬೇಡಿಕೆ ಇರುವುದರಿಂದ ಕೇಂದ್ರ ಬಿಜೆಪಿ ಸರ್ಕಾರ ತುಮಕೂರು ಭಾಗದಲ್ಲೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಗ್ರೀನ್‌ಸಿಗ್ನಲ್‌ ಕೊಡುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+