ಏರ್ಪೋರ್ಟ್ ಲೈನ್ ಮೆಟ್ರೊ: ಚಿಕ್ಕಜಾಲ ನಿವಾಸಿಗಳಿಂದ ನಿಲ್ದಾಣಕ್ಕೆ ಬೇಡಿಕೆ
ಬೆಂಗಳೂರು, ಎಪ್ರಿಲ್ 15: ನಮ್ಮ ಬೆಂಗಳೂರು ಮೆಟ್ರೊ ಯೋಜನೆಯಡಿ ವಿಮಾನ ನಿಲ್ದಾಣ ಮಾರ್ಗ ಕಾಮಗಾರಿ ಘೋಷಿಸಲಾಗಿದ್ದು, ಚಿಕ್ಕಜಾಲದ ಸ್ಥಳೀಯರು ಮೆಟ್ರೊ ನಿಲ್ದಾಣ ಕಲ್ಪಿಸುವಂತೆ ಬೆಡಿಕೆ ಇಟ್ಟಿದ್ದಾರೆ.
ಏರ್ಪೋರ್ಟ್ ಲೈನ್ ಕಾಮಗಾರಿಯ ಯೋಜನೆಯಲ್ಲಿ ಚಿಕ್ಕಜಾಲ ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಬಂದು ಸೇರುವ ಚಿಕ್ಕಜಾಲ ಮೆಟ್ರೋ ನಿಲ್ದಾಣ ಒದಗಿಸಬೇಕೆಂಬುದು ನಿವಾಸಿಗಳ ಒತ್ತಾಯವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿತಮಿತ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲೂ ಲೈನ್ ಕಾರಿಡಾರ್ ಫೇಸ್ -2 (ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರ) ಫೇಸ್ -2ಬಿ (ಕೆಆರ್ ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಕಾಮಗಾರಿಗಳು ನಡೆಯಲಿವೆ. ಇದನ್ನು ನಗರ ಭೂಸಾರಿಗೆ ನಿರ್ದೇಶನಾಲಯ (DULT) ಮತ್ತು ಬಿಎಂಆರ್ಸಿಎಲ್ ಜಂಟಿಯಾಗಿ ರೂಪಿಸುತ್ತಿವೆ. ಬ್ಲೂ ಲೈನ್ ಕಾರಿಡಾರ್ ಬಗ್ಗೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಇಲ್ಲಿ ಚಿಕ್ಕಜಾಲದ ನಿವಾಸಿಗಳು ಭೇಟಿ ನೀಡಿ ತಮಗೆ ನಿಲ್ದಾಣವೊಂದನ್ನು ಒದಗಿಸಬೇಕು ಎಂದು ಸಭೆಯಲ್ಲಿ ಕೋರಿಕೆ ಸಲ್ಲಿಸಿದ್ದಾರೆ.

ಚಿಕ್ಕಜಾಲದ ಸಾಫ್ಟವೇರ್ ಉದ್ಯೋಗಿ ಹಾಗೂ ನಿವಾಸಿ ಎನ್. ಮನೋಜ್ ಮಾತನಾಡಿ, 'ಜಿಕ್ಕಜಾಲ ಪ್ರದೇಶವು ಒಂದು ತಾಲೂಕು ಕೇಂದ್ರವಾಗಿದೆ. ಚಕ್ಕಜಾಲದಲ್ಲಿ ಶಾಲೆಗಳು ಕಾಲೇಜುಗಳು, ಆಸ್ಪತ್ರೆಗಳು ಮತ್ತು ಪೋಲಿಸ್ ಠಾಣೆಗಳ ಜನನಿಬಿಡ ಪ್ರದೇಶವಾಗಿದೆ. ಇಲ್ಲೊಂದು ಮೆಟ್ರೊ ನಿಲ್ದಾಣವಾದರೆ ಸಾರ್ವಜನಿಕರಿಗೆ ಅಪಾರ ಪ್ರಯೋಜನವಾಲಿದೆ,'' ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.
ಇನ್ನು ಸಭೆಯಲ್ಲಿ ನಗರಸಾರಿಗೆ ತಜ್ಞ ಸತ್ಯ ಅವರು ಮೆಟ್ರೊ ಕಾಮಗಾರಿ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿ, ''ಚಿಕ್ಕಜಾಲ ಪ್ರದೇಶವು ಕನಿಷ್ಠ 50 ಸಾವಿರ ಹೊಂದಿದೆ. ಬೆಂಗಳೂರಿನ ಅನೇಕ ನಗರಗಳಿಗೆ ಕೇಂದ್ರ ಬಿಂದುವಾಗಿರುವ ಚಿಕ್ಕಜಾಲಕ್ಕೆ ಒಂದು ಮೆಟ್ರೋ ನಿಲ್ದಾಣ ಒದಗಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಹಾಗೂ ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಅಗತ್ಯವಿದೆ. ಹೀಗಾಗಿ ಚಿಕ್ಕಜಾಲ ಮೆಟ್ರೊ ನಿಲ್ದಾಣ ಅವಶ್ಯಕ,'' ಎಂದು ಒತ್ತಾಯಿಸಿದರು.

Recommended Video
ಇನ್ನು ಬಿ-ಸೇಫ್ ರಾಯಭಾರಿ ಇಂದಿರಾ, ''ಇಲ್ಲಿನ ಮಹಿಳೆಯರು ಚಿಕ್ಕಜಾಲದ ಸುತ್ತಮುತ್ತಲಿನ ಹಾಗೂ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಸುರಕ್ಷಿತವಾಗಿ ಮನೆಗೆ ತಲುಪಲು ದಿನದ 24 ಗಂಟೆಗಳ ಕಾಲವು ಮೆಟ್ರೋ ರೈಲು ಸೇವೆ ಒದಗಿಸಬೇಕು,'' ಎಂದು ಬಿಎಂಆರ್ಸಿಎಲ್ ಅಧಿಕಾರಿಗಳನ್ನು ವಿನಂತಿಸಿದರು.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Namma Metro: ಏರ್ಪೋರ್ಟ್ ಮೆಟ್ರೋ ನೀಲಿ ಮಾರ್ಗಕ್ಕೆ ಬರಲಿವೆ 2 ಡ್ರವರ್ಲೆಸ್ ರೈಲು -
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications