ಜಯದೇವ ಬಳಿ ರಸ್ತೆ ದಾಟಲು ಬೇಕೇಬೇಕು 'ವಾಕ್' ಬಟನ್
ಬೆಂಗಳೂರು, ಡಿಸೆಂಬರ್ 12 : ಇದು ಜಯದೇವ ಆಸ್ಪತ್ರೆ ಸಿಗ್ನಲ್ ನಲ್ಲಿ ಪ್ರತಿನಿತ್ಯ ಕಂಡುಬರುವ ದೃಶ್ಯ. ಸಾವಿರಾರು ಜನರು ಸದಾ ವಾಹನನಿಬಿಡವಾಗಿರುವ ಬನ್ನೇರುಘಟ್ಟ ರಸ್ತೆಯನ್ನು ದಾಟುತ್ತಲೇ ಇರುತ್ತಾರೆ.
ಅವರಲ್ಲಿ ಒಂದಿಷ್ಟು ಮಂದಿ ಜಯದೇವ ಆಸ್ಪತ್ರೆ ಚಿಕಿತ್ಸೆಗೆಂದು ಬರುವವರು, ಅವರ ಸಂಬಂಧಿಕರು, ಆಸ್ಪತ್ರೆಯಲ್ಲಿ ದಾಖಲಾಗಿರುವವರನ್ನು ನೋಡಲು ಬರುವವರು. ಇವರಲ್ಲಿ ಎಷ್ಟೋ ಮಂದಿ ಹಿರಿಯ ನಾಗರಿಕರು ಕೈಯಲ್ಲಿ ಬ್ಯಾಗನ್ನು ಹಿಡಿದು ದಾಟುತ್ತಿರುವುದನ್ನು ಕೂಡ ನೋಡಿರುತ್ತೇವೆ.
ಆ ರಸ್ತೆಯಲ್ಲಿ ಅಡ್ಡಾಡುವ ವಾಹನ ಚಾಲಕರಿಗೆ ಒಂದೇ ಲಕ್ಷ್ಯ, ಗುರಿಯನ್ನು ಶರವೇಗದಲ್ಲಿ ತಲುಪಬೇಕು. ಗಮ್ಯವನ್ನು ಆದಷ್ಟು ಬೇಗ ಸೇರಿಕೊಳ್ಳಬೇಕು. ಅಂಡರ್ ಪಾಸ್ ನಲ್ಲಿ ವೇಗವಾಗಿ ಬರುವವರು ಮಸೀದಿಯ ಬಳಿ ನಿಧಾನ ಮಾಡುತ್ತಾರಾದರೂ, ರಸ್ತೆ ದಾಟುವವರ ಕಣ್ಣಲ್ಲಿ ಎಲ್ಲಿ ಗುದ್ದಿಬಿಡುತ್ತಾರೋ ಎಂಬ ಭಯ ಆವರಿಸಿಕೊಂಡೇ ಇರುತ್ತದೆ.

ಈ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಹೇಗೆ?
ಎ) ರಸ್ತೆ ದಾಟುವವರಿಗಾಗಿ ಸ್ಕೈವಾಕ್ ನಿರ್ಮಿಸುವುದು. ಈ ರಸ್ತೆಯಲ್ಲಿ ಹಿರಿಯ ನಾಗರಿಕರು ಅಡ್ಡಾಡುವುದರಿಂದ, ಅವರು ಮೆಟ್ಟಿಲು ಹತ್ತಬೇಕಾಗಿರುವುದರಿಂದ ಇದು ಅವರಿಗೆ ಕಷ್ಟವಾಗಬಹುದು. ಹಾಗಿಲ್ಲದಿದ್ದರೆ...
ಬಿ) 60 ಸೆಕೆಂಡುಗಳ ಕಾಲ ರಸ್ತೆ ದಾಟಲು ಅನುವು ಮಾಡಿಕೊಡಲೆಂದು 'ನಡೆಯಿರಿ (Walk)' ಬಟನ್ ಇರುವ ಸಿಗ್ನಲ್ ಲೈಟನ್ನು ಅಳವಡಿಸುವುದು. (ಇಂಥ ಸಿಗ್ನಲ್ ಗಳನ್ನು ಸಿಂಗಪುರದಲ್ಲಿ ಕಾಣಬಹುದು.).
ಬೆಂಗಳೂರಿನ ನಾಗರಿಕರಿಗಾಗಿ 'ಸಿಟಿಜನ್ಸ್ ಫಾರ್ ಬೆಂಗಳೂರು' ಸಂಘಟನೆ ಇಂದು ಬಿಡಗಡೆ ಮಾಡುತ್ತಿರುವ 'ಬೇಕು ಬೇಡ ಸಂತೆ' ಪ್ರಣಾಳಿಕೆಯಲ್ಲಿ ಎರಡನೇ ಸೌಲಭ್ಯ ಇರಬೇಕೆಂದು ಅನುಮೋದಿಸಲಾಗಿದೆ.

ರಸ್ತೆ ವಾಹನಗಳಿಗೆ ಮಾತ್ರ ಸೇರಿರುವುದಿಲ್ಲ. ಅದು ಪಾದಚಾರಿಗಳ ಹಕ್ಕು ಕೂಡ. ಆದ್ದರಿಂದ, ವಾಹನ ಸಂಚಾರವನ್ನು 60 ಸೆಕೆಂಡುಗಳ ಕಾಲ ನಿಲ್ಲಿಸಿ ರಸ್ತೆ ದಾಟಲು ಅವಕಾಶ ಸಿಗಬೇಕು. ವಾಹನಗಳು ವಿರಳವಾದಾಗ ಮಾತ್ರ ಅತ್ತಿತ್ತ ನೋಡಿಕೊಂಡು ರಸ್ತೆ ದಾಟುವಂತಾಗಬಾರದು.
ಬೆಂಗಳೂರಿನಲ್ಲಿ ಸ್ಕೈವಾಕ್ ಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಅವನ್ನು ಬಳಸುವವರು ಮತ್ತು ಅದರಿಂದ ಆಗುತ್ತಿರುವ ಅನುಕೂಲಗಳು ಕೂಡ ಕಡಿಮೆಯೆ. ಅಲ್ಲದೆ, ಹಲವಾರು ಸ್ಕೈವಾಕ್ ಗಳು ಬರೀ ಜಾಹೀರಾತಿಗಾಗಿ ಮಾತ್ರ ಮೀಸಲಾಗಿವೆ. ಆದ್ದರಿಂದ 'ವಾಕ್' ಬಟನ್ ಅಳವಡಿಸಲು ಹಕ್ಕೊತ್ತಾಯ ಕೇಳಿಬಂದಿದೆ.
ಬೆಂಗಳೂರಿನ ನಾಗರಿಕರೆ, ನಿಮ್ಮ ಆಯ್ಕೆ ಕೂಡ 'ಬಿ' ಆಗಿದ್ದರೆ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ, ರಿಚ್ಮಂಡ್ ರಸ್ತೆಯ ಬಳಿಯ, ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ, ಸೇಂಟ್ ಜೋಸೆಫ್ ಕಾಲೇಜಿಗೆ ದೊಡ್ಡ ಸಂಖ್ಯೆಯಲ್ಲಿ ಬನ್ನಿ ಮತ್ತು ಈ ಅಭಿಯಾನಕ್ಕೆ ದನಿಗೂಡಿಸಿ.
ತೊಂಬತ್ತೊಂಬತ್ತು ವರ್ಷದ ಹಿರಿಯ ನಾಗರಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಚ್ ಎಸ್ ದೊರೆಸ್ವಾಮಿ ಅವರು ಬೆಂಗಳೂರಿಗಾಗಿ ಬೇಕು ಬೇಡ ಸಂತೆ ಸಿಟಿಜನ್ ಮ್ಯಾನಿಫೆಸ್ಟೋವನ್ನು ಬಿಡುಗಡೆ ಮಾಡಲಿದ್ದಾರೆ. ಸಿಟಿಜನ್ಸ್ ಫಾರ್ ಬೆಂಗಳೂರಿನ ಈ ಬೇಡಿಕೆಯನ್ನು ರಾಜಕಾರಣಿಗಳಿಗೆ ಸಲ್ಲಿಸಲಿದ್ದಾರೆ. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳೂ ಭಾಗವಹಿಸುತ್ತಿದ್ದಾರೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications