ಬೆಂಗಳೂರಿನ 10 ಕೆರೆಗೆ ಕೊಳಚೆ ನೀರು: ಡಿಸಿ ಶಂಕರ್ ಮಾಹಿತಿ
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನ 10ಕೆರೆಗಳಿಗೆ ಕಲುಷಿತ ನೀರು ಸೇರುತ್ತಿದೆ ಎಂದು ಬೆಂಗಳೂರು ಡಿಸಿ ವಿಜಯ್ ಶಂಕರ್ ಮಾಹಿತಿ ನೀಡಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದ ಸಂದರ್ಭ ಈ ಮಾಹಿತಿಯನ್ನು ನೀಡಿದ್ದು, ಕೆರೆಗಳಿಗೆ ಕಲುಷಿತ ನೀರು ಸೇರುತ್ತಿದ್ದು, ಜಲಚರಗಳು ಸಂಪೂರ್ಣವಾಗಿ ಸಾವನ್ನಪ್ಪುತ್ತಿವೆ, ಜತೆಗೆ ಸುತ್ತಮುತ್ತಲಿನ ಜನತೆಗೂ ಇದು ಅಪಾಯಕಾರಿಯಾಗಿದೆ ಎಂದಿದ್ದಾರೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಎರಡು ಬಾರಿ ಸಭೆ ಕರೆಯಲಾಗಿದೆ.
ಮಾರ್ಕಿಂಗ್ ಮಾಡಿರೋ ಜಾಗವನ್ನು ಸ್ಥಳೀಯರು ಅಳಿಸುತ್ತಿದ್ದಾರೆ, ಒತ್ತುವರಿ ಮುಗಿಯುವವರೆಗೂ ಸರ್ವೆಯವರು ಜೊತೆಯಲ್ಲೇ ಇರಲಿ ಎಂದು ಸೂಚಿಸಲಾಗಿದೆ. ತೆರವು ಕಾರ್ಯಾಚರಣೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ಕಾರ್ಖಾನೆಗಳಿಂದ ಬರುವ ನೀರು ಸೇರಿ ಅಲ್ಲಿರುವ ಜಲಚರಗಳು ಸಾವನ್ನಪ್ಪುವಂತೆ ಮಾಡುತ್ತಿದೆ. ಅದರ ಜತೆಗೆ ನೊರೆ ಉತ್ಪತ್ತಿಯಾಗುತ್ತಿದ್ದು ಅಲ್ಲಿನ ಜನತೆ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ್ದರೆ ಎಲ್ಲಾ ಕೆರೆಗಳನ್ನು ಶುದ್ಧಗೊಳಸಿಉವ ಅಗತ್ಯವಿದೆ ಎಂದು ಹೇಳಿದರು.












Click it and Unblock the Notifications