Cyber crime: ಅಕೌಂಟ್ ಅಪ್ಡೇಟ್ ಮಾಡಲು ಹೋಗಿ ಕ್ಷಣದಲ್ಲೇ 35,000 ರೂ ಕಳೆದುಕೊಂಡ ವ್ಯಕ್ತಿ!
ಬೆಂಗಳೂರು, ಏಪ್ರಿಲ್. 30: ಸೈಬರ್ ಕ್ರೈಮ್ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸೈಬರ್ ಕ್ರೈಂ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದ್ದರೂ, ಈ ಸ್ಕ್ಯಾಮ್ಗೆ ಬೀಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೈಬರ್ ವಂಚಕರು ತಮ್ಮ ಬಲೆಗೆ ಬೀಳುತ್ತಾರೆ ಎಂಬಂತ ವ್ಯಕ್ತಿಗಳನ್ನು ಬಲೆಗೆ ಬೀಳಿಸಲು ಮತ್ತು ಅವರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕದಿಯಲು ಹೊಸ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ.
ಇಂತಹದ್ದೆ ಪ್ರಕರಣ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ವರದಿಯಾಗಿದೆ. ಖಾಸಗಿ ಕಂಪನಿಯೊಂದರ ನಿರ್ದೇಶಕ ಪ್ರದೀಪ್ ಎಂಬುವವರಿಗೆ ವಂಚನೆ ಮಾಡಿರುವ ಘಟನೆ ದಾಖಲಾಗಿದೆ. ಪ್ರದೀಪ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಮೋಹಿತ್ ಜೈನ್ ಎಂದು ಹೇಳಿಕೊಳ್ಳುವ ಸೈಬರ್ ವಂಚಕರೊಬ್ಬ ಪ್ರದೀಪ್ಗೆ ಕರೆ ಮಾಡಿ, ತಾನು ಸಿಟಿಬ್ಯಾಂಕ್ನಿಂದ ಬಂದಿದ್ದೇನೆ. ಬ್ಯಾಂಕ್ ಕಾರ್ಡ್ ಅಪ್ಡೇಟ್ ಮಾಡಬೇಕು ಹಾಗಾಗಿ ಹೊಸ ಮೆಷಿನ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

"ಮೋಹಿತ್ ಜೈನ್ ಅವರು ಸಿಟಿ ಬ್ಯಾಂಕ್ನಿಂದ ಎಂದು ನನಗೆ ಕರೆ ಮಾಡಿದರು. ನನ್ನ ಕಾರ್ಡ್ ಅನ್ನು ಅಪ್ಗ್ರೇಡ್ ಮಾಡುತ್ತಿದ್ದಾರೆ ಆದ್ದರಿಂದ ಅವರು ನನಗೆ ಸಾಧನವನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿ ಕಳೆದ ರಾತ್ರಿ ಅವರು ನನಗೆ ಸಾಧನವನ್ನು ಕಳುಹಿಸಿದ್ದಾರೆ. ಆದರೆ ಅದು ಫೋನ್ ಆಗಿತ್ತು. ಅವರು ನನ್ನ ಸಿಮ್ ಅನ್ನು ಅದರಲ್ಲಿ ಹಾಕಲು ಹೇಳಿದರು. ನಾನು ಸಿಮ್ ಹಾಕಿದೆ. ಅಪ್ಡೇಟ್ ಮಾಡಲು 60 ನಿಮಿಷ ಬೇಕು ಎಂದರು. 60 ನಿಮಿಷಗಳ ನಂತರ ನಾನು ಹೊಸ ಫೋನ್ನಲ್ಲಿ ಕರೆ ಫಾರ್ವರ್ಡ್ ಮಾಡುವ ವ್ಯವಸ್ಥೆ ಇದೆ ಎಂದು ಪರಿಶೀಲಿಸಿದೆ. ಆಗ ನನ್ನ ಖಾತೆಯಿಂದಸುಮಾರು 35,000 ರೂಪಾಯಿಗಳನ್ನು ಇಂಪ್ಸ್ ಮೂಲಕ ಸೆಂಡ್ ಮಾಡಲಾಗಿತ್ತು" ಎಂದಿದ್ದಾರೆ.
"ಅದೃಷ್ಟವಶಾತ್, ಮೋಹಿತ್ ಜೈನ್ ಅವರು ಹೇಳುವುದನ್ನು ಮಾಡುವಾಗ ನಾನು ಕಂಪ್ಯೂಟರ್ ಆನ್ ಮಾಡಿಕೊಂಡಿದ್ದೆ. ಕೆಲವೇ ನಿಮಿಷಗಳಲ್ಲಿ, ನನ್ನ ಖಾತೆಯಿಂದ 35,000 ರೂ. ವರ್ಗಾವಣೆಯಾದ ಬಗ್ಗೆ ನನಗೆ ತಿಳಿಯಿತು. ನಾನು ತಕ್ಷಣವೇ ನನ್ನ ಎಲ್ಲಾ ಕಾರ್ಡ್ಗಳನ್ನು ಬ್ಲಾಕ್ ಮಾಡಲು ಕಸ್ಟಮರ್ ಕೇರ್ಗೆ ತಿಳಿಸಿದೆ. ಎಲ್ಲಾ ಕಾರ್ಡ್ಗಳನ್ನು ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಬ್ಲಾಕ್ ಮಾಡಿದ್ದಾರೆ. ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಸಕ್ರಿಯಗೊಳಿಸಲು ಬ್ಯಾಂಕ್ಗೆ ಹೋಗಬೇಕಾಗಿದೆ" ಎಂದು ದೂರಿನಲ್ಲಿ ಹೇಳಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications