ಹೋರಾಟಗಾರರ ದಾಹ ತಣಿಸುತ್ತಿದ್ದ ಪಿಂಟೂ ಪ್ರಕಾಶ್ ಕೋವಿಡ್ಗೆ ಬಲಿ!
ಬೆಂಗಳೂರು, ಮೇ. 22: ಸ್ವಾತಂತ್ರ್ಯ ಉದ್ಯಾನವನ ಪ್ರತಿಭಟಾನಾಕಾರರ ಪಾಲಿಗೆ ತಮ್ಮ ಬಹುಬೇಡಿಕೆ ಈಡೇರಿಸುವ ಹೋರಾಟದ ಕೇಂದ್ರ. ರಾಜ್ಯದ ಮೂಲೆ ಮೂಲೆಯಿಂದಲೂ ಬರುವ ಹೋರಾಟಗಾರರಿಗೆ ಬಾಯಾರಿಕೆ ಆದರೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ಕೊಳಾಯಿ ಕೂಡ ಇಲ್ಲ. ನಡೆದುಕೊಂಡು ಸುಸ್ತಾದ, ಹೋಗಾಟದ ಕೂಗಿನಿಂದ ಬಾಯಾರಿಕೆಯಾದವರಿಗೆ ಕ್ಷಣ ಮಾತ್ರದಲ್ಲಿ ಕುಡಿಯುವ ನೀರು ಒದಗಿಸುತ್ತಿದ್ದ ಬಡಪಾಯಿ ಜೀವ ವಾಟರ್ ಟ್ಯಾಂಕರ್ ಪಿಂಟೂ ಪ್ರಕಾಶ್ ಕೋವಿಡ್ ಗೆ ಬಲಿಯಾಗಿದ್ದಾರೆ. ಇವರ ಅಮೂಲ್ಯ ಸೇವೆಯನ್ನು ಪೊಲೀಸರು ಸ್ಮರಿಸಿಕೊಂಡಿದ್ದಾರೆ.
ರಾಜಧಾನಿ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಾರಕ್ಕೆ ಎರಡು ಮೂರು ಹೋರಾಟ ನಡೆಯುವ ಜಾಗ. ಪ್ರತಿಭಟನೆ, ಜಾಥಾ, ಅಮರಣಾಂತ ಉಪವಾಸ ಸತ್ಯಾಗ್ರಹ, ಅನಿರ್ಧಿಷ್ಟ ಅವಧಿ ಮುಷ್ಕರ ನಡೆಯುತ್ತವೆ. ಇನ್ನು ಬಂದೋಬಸ್ತ್ ಗೆಗಾಗಿ ಸಶಸ್ತ್ರ ಮೀಸಲು ಪಡೆ, ಸಂಚಾರ ಪೊಲೀಸರು, ಕಾನೂಣು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮೈ ಸುಡುವ ಬೇಸಿಗೆ ಕಾಲದಲ್ಲಂತೂ ಅಲ್ಲಿ ಬಾಯಾರಿಕೆ ಆದರೆ, ನೀರು ಕುಡಿಯಲು ಅರ್ಧ ಕಿ.ಮೀ ನಷ್ಟು ದೂರ ನಡೆದುಕೊಂಡೇ ಹೋಗಬೇಕು. ಒಂದು ಲೋಟ ಕುಡಿಯುವ ನೀರಿಗೂ ಅಲ್ಲಿ ತಾತ್ವಾರ. ಇದೊಂದು ಸಮಸ್ಯೆ ಹೋರಾಟಗಾರರಿಗೆ ಕುಡಿಯುವ ನೀರು ಸೌಲಭ್ಯ ಮಾಡಬೇಕು ಎಂಬ ಸಣ್ಣ ಜ್ಞಾನ ಸರ್ಕಾರದ ಯಾವ ಇಲಾಖೆಯ ಕಣ್ಣಿಗೂ ಬಿದ್ದಿಲ್ಲ. ಪಿಂಟೂ ಪ್ರಕಾಶ್ ಗೆ ಮಾತ್ರ ಅರಿವು ಇತ್ತು.

ಹೌದು. ಕೊರೊನಾ ಸೊಂಕಿಗೆ ಬಲಿಯಾಗಿರುವ ಬೆಂಗಳೂರು ಜಲ ಮಂಡಳಿ ವಾಟರ್ ಟ್ಯಾಂಕರ್ ಚಾಲಕ ಪಿಂಟೂ ಪ್ರಕಾಶ್ ಹೋರಾಟಗಾರರ ಪಾಲಿಗೆ, ಮುಷ್ಕರಕ್ಕೆ ನಿಯೋಜನೆಗೊಳ್ಳುವ ಪೊಲೀಸರ ದಣಿವಿಗೆ ಸ್ಪಂದಿಸುತ್ತಿದ್ದ ಬಡಪಾಯಿ ಜೀವ. ವಾಟರ್ ಮ್ಯಾನ್ ಪಿಂಟೂ ಅಂತಲೇ ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತರಾಗಿದ್ದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಹೋರಾಟದ ವೇಳೆ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಬಡಪಾಯಿ ಜೀವ ಅಳಿಲು ಸೇವೆ ಮಾಡುತ್ತಿತ್ತು. ಸಾವಿರಾರು ಮಂದಿಹ ದಾಹ ತಣಿಸುತ್ತಿದ್ದ ಅಮೂಲ್ಯ ವ್ಯಕ್ತಿತ್ವದ ಮೂಲಕ ಪರಿಚಿತರಾಗಿದ್ದ ಪಿಂಟೂ ಪ್ರಕಾಶ್ ಕೋರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಪಿಂಟೂ ಪ್ರಕಾಶ್ ಅವರ ಸೇವೆಯನ್ನು ಸ್ಮರಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಅವರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಯಾರ ಕಣ್ಣಿಗೂ ಕಾಣದಂತೆ ಕುಡಿಯುವ ನೀರು ಪೂರೈಸುವ ಮೂಲಕ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಅಳಿಲು ಸೇವೆಯನ್ನು ಕೊಂಡಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
-
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್












Click it and Unblock the Notifications