ಎಂದೋ ಮಾಡಿದ್ದ ಸೇವೆ ಸ್ಮರಿಸಿ ಇಂದು ಆಂಬ್ಯುಲೆನ್ಸ್ ಉಡುಗೊರೆ ಕೊಟ್ಟ ಮಹಾತಾಯಿ!
ಬೆಂಗಳೂರು, ಜೂ. 07: ಎಷ್ಟೋ ವರ್ಷಗಳ ಹಿಂದೆ ತನ್ನ ಪತಿಯ ತಂದೆ ತೋರಿಕೊಂಡಿದ್ದರು. ಆಗ ನೂರಾರು ಮಂದಿ ಮುಂದೆ ನಿಂತು ನಮ್ಮವರಂತೆ ಸರ್ವ ಕಾರ್ಯವನ್ನು ಮಾಡಿ ಸೇವೆ ಸಲ್ಲಿಸಿದ್ದು ಬೆಂಗಳೂರಿನ ದೂರವಾಣಿ ನಗರದಲ್ಲಿರುವ ಕೇರಳಾ ಸಮಾಜಂ. ಆ ಸೇವೆಯನ್ನು ಮರೆಯದ ವಕೀಲ, ಸಮಾಜ ಸೇವಕರಾದ ದಿ. ರಾಮಚಂದ್ರ ಅವರ ಪತ್ನಿ ಸುಶೀಲಾದೇವಿ ಕೊರೊನಾ ಸೋಂಕಿತರ ಸೇವೆಗಾಗಿ ಲಕ್ಷಾಂತರ ಮೌಲ್ಯದ ಹೊಸ ಆಂಬ್ಯುಲೆನ್ಸ್ ಉಡುಗೊರೆ ನೀಡಿದ್ದಾರೆ.
ಕೆ.ಆರ್. ಪುರಂ ವೆಂಕಟೇಶ್ವರ ಚಿತ್ರಮಂದಿರ ಮಾಲೀಕರಾದ ದಿ. ರಾಮಚಂದ್ರ ಅವರು ಸಮಾಜ ಸೇವೆ ಮೂಲಕವೇ ಪರಿಚಿತರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತೀರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ದೂರವಾಣಿ ನಗರದಲ್ಲಿರುವ ಕೇರಳಾ ಸಮಾಜಂಗೆ ಉಚಿತ ಆಂಬ್ಯುಲೆನ್ಸ್ ನ್ನು ಉಡುಗೊರೆ ನೀಡುವ ಮೂಲಕ ಸುಶೀಲಾದೇವಿ ರಾಮಚಂದ್ರ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ.

ಫೋರ್ಸ್ ಕಂಪನಿಗೆ ಸೇರಿದ ಆಂಬ್ಯುಲೆನ್ಸ್ ಕೀಗಳನ್ನು ಶಾಸಕ ಭೈರತಿ ಬಸವರಾಜು ಅವರ ಮೂಲಕ ಕೇರಳಾ ಸಮಾಜಂಗೆ ಅರ್ಪಿಸಿದರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ಸುಶೀಲಾದೇವಿ ರಾಮಚಂದ್ರ ಅವರು, ಕೆ.ಆರ್. ಪುರಂನಲ್ಲಿ ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಯನ್ನು ಬಿಟ್ಟುಕೊಟ್ಟಿದ್ದರು. ಅಲ್ಲಿಯ ರಾಯರ ದೇಗುಲ ಜತೆಗೆ ಗುರುಕುಲಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇನ್ನೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಿ. ರಾಮಚಂದ್ರ ಅಪಾರ ಕೊಡುಗೆ ನೀಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

Recommended Video
ಬದುಕು ಯಾರಿಗೂ ಶಾಶ್ವತವಲ್ಲ. ಜೀವಗಳು ಅಮೂಲ್ಯ. ಹೀಗಾಗಿ ಕೊರೊನಾ ಸೋಂಕಿನಿಂದ ಆಂಬ್ಯುಲೆನ್ಸ್ ಸಿಗದೇ ಎಷ್ಟೊ ಮಂದಿ ಪರದಾಡಿದ್ದು ನೋಡಿದರೆ ಕಣ್ಣೀರು ಬರುತ್ತದೆ. ದೇವರು ಕೊಟ್ಟಿರುವ ಶಕ್ತಿಯಲ್ಲಿ ಸಮಾಜಕ್ಕೆ ಏನಾದರೂ ಮಾಡುತ್ತಿರಬೇಕು ಎಂಬ ಮಾತಲ್ಲಿ ನಂಬಿಕೆ ಇಟ್ಟು ನನ್ನ ಪತ್ನಿ ಜೀವನ ಪರ್ಯಂತ ಸಮಾಜಕ್ಕೆ ಏನಾದರೂ ಕೊಡುತ್ತಿದ್ದರು. ಅದನ್ನೇ ನಂಬಿದ ನಾನು ಕೂಡ ದೂರವಾಣಿ ನಗರದಲ್ಲಿರುವ ಕೇರಳಾ ಸಮಾಜಂಗೆ ಆಂಬ್ಯುಲೆನ್ಸ್ ನೀಡಿದ್ದೇನೆ. ಇದರಿಂದ ನಾಲ್ಕು ಮಂದಿಗೆ ಸಹಾಯ ಆದರೆ ಸಾಕು ಅದರಿಂದ ಸಿಗುವ ಸಂತೋಷವೇ ನನಗೆ ಶ್ರೇಷ್ಠ. ಏನೋ ನಿರೀಕ್ಷೆ ಇಟ್ಟುಕೊಂಡು ಯಾವತ್ತು ಸೇವೆ ಮಾಡಬಾರದು. ಕಳೆದ 25 ವರ್ಷದಿಂದ ಕೇರಳಾ ಸಮಾಜಂ ಮಾಡುತ್ತಿರುವ ಸೇವೆ ನೋಡುತ್ತಿದ್ದೇನೆ. ಯಾರಿಗೆ ತೊಂದರೆ ಆದರೂ ತಮ್ಮ ಮನೆಯವರಂತೆ ಹಾರೈಕೆ ಮಾಡುತ್ತಾರೆ. ಆ ಸಮಾಜದಲ್ಲಿ ಎರಡು ಸಾವಿರ ಮಂದಿ ನೋಂದಣಿ ಮಾಡಿದ್ದಾರೆ. ಹೀಗಾಗಿ ಬಡವರ ಸೇವೆ ಮಾಡುವ ಜವಾಬ್ಧಾರಿ ನೀಡಿ ಆಂಬ್ಯೂಲೆನ್ಸ್ ನ್ನು ದಿವಂಗತ ರಾಮಚಂದ್ರ ಅವರ ಸ್ಮರಣಾರ್ಥ ಕೇರಳಾ ಸಮಾಜಂಗೆ ನೀಡಿದ್ದೇನೆ ಎಂದರು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications