ಕಾರ್ಪೊರೇಟರ್ ಪತಿಯಿಂದ ಸೀರೆ ವ್ಯಾಪಾರಿ ಮೇಲೆ ಹಲ್ಲೆ
ಬೆಂಗಳೂರು, ನವೆಂಬರ್ 14: ಕ್ಷುಲ್ಲಕ ಕಾರಣಕ್ಕೆ ಕಾರ್ಪೊರೇಟರ್ ಪತಿ ಸೀರೆ ವ್ಯಾಪಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.
ಯಲಹಂಕ ರೌಡಿ ಶೀಟರ್ ಟಾಟಾ ರಮೇಶ್ ಹಾಗೂ ಅಲ್ಲಿನ ಕಾರ್ಪೊರೇಟರ್ ಪದ್ಮಾವತಿ ಗಂಡ ಅಮರ್ ನಾಥ್ ಅವರು ಹಲ್ಲೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಾಂಭಶಿವ ಹಲ್ಲೆಗೊಳಗಾದ ವ್ಯಕ್ತಿ, ಈತ ಮೊದಲು ಧರ್ಮಾವರಂನಲ್ಲಿ ವಾಸಿಸುತ್ತಿದ್ದ, ಸೀರೆ ವ್ಯಾಪಾರದಿಂದಲೇ ಜೀವನ ಸಾಗಿಸುತ್ತಿದ್ದ, ಸೀರೆ ಕೊಳ್ಳಲು ಬೆಂಗಳೂರಿಗೆ ಬರುತ್ತಿದ್ದ, ಹೀಗೆ ಪ್ರತಿ ಬಾರಿಯ ರೀತಿ ಈ ಬಾರಿಯೂ ಯಲಹಂಕದ ಮಲ್ಲಿಕಾರ್ಜುನ ಅವರಿಂದ ಸೀರೆಯನ್ನು ಕೊಳ್ಳುತ್ತಿದ್ದ, ಸೀರೆ ದುಡ್ಡು ಕೊಡುವುದು ತಡವಾಗಿದೆ ಎಂದು ಅಂಗಡಿ ಮಾಲೀಕನ ಕುಮ್ಮಕ್ಕಿ ಮೇರೆಗೆ ಬಟ್ಟೆ ಮಾಲೀಕನನ್ನು ಥಳಿಸಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications