ಬಿಜೆಪಿಯವರಿಗೆ ಹಬ್ಬದಂತಾದ ಕೊರೊನಾ ವೈರಸ್!

ಬೆಂಗಳೂರು,

ಅ.
27:
ರಾಜರಾಜೇಶ್ವರಿ
ವಿಧಾನಸಭೆ
ಕ್ಷೇತ್ರದಲ್ಲಿ
ನೆಮ್ಮದಿ
ನೆಲೆಯೂರಬೇಕಾದರೆ,
ಕ್ರಿಮಿನಲ್
ಚಟುವಟಿಕೆಗಳು
ಅಂತ್ಯವಾಗಬೇಕಾದರೆ,
ಮಹಿಳೆಯರ
ಮೇಲಿನ
ದೌರ್ಜನ್ಯಕ್ಕೆ
ಕಡಿವಾಣ
ಬೀಳಬೇಕು
ಎಂದಾದರೆ
ಕಾಂಗ್ರೆಸ್
ಪಕ್ಷದ
ಅಭ್ಯರ್ಥಿ
ಕುಸುಮಾ
ಅವರಿಗೆ
ಆಶೀರ್ವಾದ
ಮಾಡಿ
ಎಂದು
ರಾಜರಾಜೇಶ್ವರಿ
ವಿಧಾನಸಭೆ
ಕ್ಷೇತ್ರದ
ಮತದಾರರಲ್ಲಿ
ವಿಧಾನಸಭೆಯ
ವಿರೋಧ
ಪಕ್ಷದ
ನಾಯಕ
ಸಿದ್ದರಾಮಯ್ಯ
ಅವರು
ಮಾಡಿಕೊಂಡರು

id="toptextpromo">
id='are-slot-1'
class='oiad
oi-axt
oiadv'>

ಯಶವಂತಪುರ

ವಾರ್ಡ್‌ನಲ್ಲಿ
ಇಂದು
ಕುಸುಮಾ
ಅವರ
ಪರವಾಗಿ
ರೋಡ್
ಶೋ
ನಡೆಸಿ
ಮತ
ಯಾಚನೆ
ಮಾಡಿದ
ಸಿದ್ದರಾಮಯ್ಯ
ಅವರು,
ಬಿಜೆಪಿ
ಅಭ್ಯರ್ಥಿ
ಮುನಿರತ್ನ
ವಿರುದ್ಧ
ತೀವ್ರ
ವಾಗ್ದಾಳಿ
ನಡೆಸಿದರು.‌
ಮುನಿರತ್ನ
ಅವರು
ಶಾಸಕರಾದ
ಮೇಲೆ
ಕ್ಷೇತ್ರದ
ಮತದಾರರು
ನೆಮ್ಮದಿ
ಕಳೆದುಕೊಂಡಿದ್ದಾರೆ.
ಕ್ರಿಮಿನಲ್
ಚಟುವಟಿಕೆಗಳು
ಹೆಚ್ಚಾಗಿರುವುದೇ
ಇದಕ್ಕೆ
ಕಾರಣ
ಎಂದು
ಹೇಳಿದರು.
ಮತದಾರರಿಗೆ
ಮುನಿರತ್ನ
ನಾನಾ
ಆಮಿಷ
ಒಡ್ಡುತ್ತಿದ್ದಾರೆ.
ಕೇಬಲ್
ಕನೆಕ್ಷನ್
ಕೊಡಿಸುತ್ತಿದ್ದಾರೆ.‌
ಮತದಾರರ
ಗುರುತಿನ
ಚೀಟಿ
ಪಡೆದು
ಒಬ್ಬೊಬ್ಬರಿಗೆ
ಎರಡು
ಸಾವಿರ
ರೂಪಾಯಿ
ನೀಡುತ್ತಿದ್ದಾರೆ
ಎಂದು
ಆರೋಪಿಸಿದರು.

id='are-slot-2'
class='oiad
oi-axt
oiadv'>

ಮುನಿರತ್ನ ಮಾರಾಟವಾಗಿದ್ದಾರೆ

ಮುನಿರತ್ನ ಮಾರಾಟವಾಗಿದ್ದಾರೆ

ಮತದಾರರಿಗೆ ಹಂಚಲು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಹಣ ಎಲ್ಲಿಂದ ಬಂತು? ಅದು ಲೂಟಿ ಹೊಡೆದ ಹಣ. 50 ಕೋಟಿ ರೂ.ಗಳಿಗೆ ಅವರು ಬಿಜೆಪಿಗೆ ಮಾರಾಟವಾಗಿದ್ದಾರೆ. ಲೂಟಿಕೋರರಿಗೆ ಮತದಾರರು ಅವಕಾಶ ಮಾಡಿಕೊಡಬಾರದು ಎಂದು ಕಳಕಳಿಯ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಪ್ರಚಾರದಲ್ಲಿಮನವಿ ಮಾಡಿಕೊಂಡರು.

ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಾರೆ ಮುನಿರತ್ನ. ಅನುದಾನ ಕೊಟ್ಟವರು ಯಾರು. ಈ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿದ್ದು ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಎಂಬುದನ್ನು ಮತದಾರರು‌ ಮರೆಯಬಾರದು.

ಅಮಿತ್ ಶಾ ಕಾಲಿಗೆ ಬೀಳುತ್ತಾರೆ

ಅಮಿತ್ ಶಾ ಕಾಲಿಗೆ ಬೀಳುತ್ತಾರೆ

ಮುನಿರತ್ನ ಅವರು ಈ ಹಿಂದೆ ಅಮಿತ್ ಶಾ ಅವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು. ಈಗ ಶಾ ಕಾಲಿಗೆ ಬೀಳುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಪಳಗಿರುವ ಅದರಲ್ಲಿಯೇ ಮುಳುಗಿ ಹೋಗಿರುವ ವ್ಯಕ್ತಿ ಶಾಸಕರಾಗಬೇಕೇ ಅಥವಾ ಸುಸಂಸ್ಕೃತ ಹೆಣ್ಣು ಮಗಳು ಕುಸುಮಾ ಆಯ್ಕೆಯಾಗಬೇಕೇ ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಬಿಜೆಪಿಯವರಿಗೆ ಹಬ್ಬದಂತಾದ ಕೊರೊನಾ!

ಬಿಜೆಪಿಯವರಿಗೆ ಹಬ್ಬದಂತಾದ ಕೊರೊನಾ!

ಕೊರೊನಾದಿಂದ ರಾಜ್ಯದ ಜನತೆ ಸಂಕಷ್ಟ ಅನುಭವಿಸಿದರು. ಆದರೆ, ಬಿಜೆಪಿಗೆ ಕೊರೊನಾ ಹಬ್ಬವಾಗಿ ಪರಿಣಮಿಸಿತು. ಹೀಗಾಗಿಯೇ ವೈದ್ಯಕೀಯ ಉಪಕರಣಗಳ ಖರೀದಿ ಹೆಸರಲ್ಲಿ ಹಣ ಲೂಟಿ ಮಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚೆಕ್ ಮೂಲಕ ಲಂಚ ಪಡದರೆ ಅವರ ಮೊಮ್ಮಗ ಶಶಿಧರ ಮರಡಿ ಆರ್‍ಟಿಜಿಎಸ್ ಮೂಲಕ ತೆಗೆದುಕೊಳ್ಳುತ್ತಾರೆ. ಲಂಚ ತೆಗೆದುಕೊಳ್ಳುವ ವಿಚಾರದಲ್ಲಿ ಬಿಜೆಪಿಯವರು ಈಗ ಅಪ್‌ಗ್ರೇಡ್‌ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದರು.

Recommended Video

    Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada
    ಜೆಸಿಬಿಯಲ್ಲಿ ದೋಚುತ್ತಿದ್ದಾರೆ

    ಜೆಸಿಬಿಯಲ್ಲಿ ದೋಚುತ್ತಿದ್ದಾರೆ

    ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮಗ, ಮೊಮ್ಮಗ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದ್ದಾರೆ. ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ. ಬಿಜೆಪಿ ಹಿಂದುಳಿದವರು, ದಲಿತರು, ಬಡವರು, ಅಲ್ಪಸಂಖ್ಯಾತರ ಪರ ಇರುವ ಪಕ್ಷ ಅಲ್ಲ. ಈ ವರ್ಗದ ಬಗ್ಗೆ ಕಾಳಜಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ.

    ಅನ್ನಭಾಗ್ಯ, ಕ್ಷೀರಭಾಗತ್ಯ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಈವತ್ತು ಬಡವರು ಎರಡು ಹೊತ್ತು ನೆಮ್ಮದಿಯಾಗಿ ಊಟ ಮಾಡುತ್ತಿದ್ದರೆ ಅನ್ನಭಾಗ್ಯ ಯೋಜನೆಯೇ ಕಾರಣ. ಅನ್ನಭಾಗ್ಯ ಯೋಜನೆಯಲ್ಲಿ ಏಳು ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಇದೀಗ ಯಡಿಯೂರಪ್ಪ ಅವರು ಅದನ್ನು ಐದು ಕೆಜಿಗೆ ಇಳಿಸಿದ್ದಾರೆ. ಅವರೇನು ಅವರ ಅಪ್ಪನ ಮನೆಯಿಂದ ಹಣ ತಂದು ಕೊಡುತ್ತಿದ್ದರೇ. ನಾನೂ ನಮ್ಮ ಅಪ್ಪನ ಮನೆಯಿಂದ ಯೋಜನೆಗೆ ಹಣ ಕೊಟ್ಟಿರಲಿಲ್ಲ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದರು.

    ಮುನಿರತ್ನ ಅವರು ವ್ಯಾಪಾರ ಕುದುರಿಸಿಕೊಂಡು ಬಿಜೆಪಿಗೆ ಹೋದವರು. ಒಬ್ಬೊಬ್ಬರಿಗೆ 25 ಕೋಟಿ ಕೊಟ್ಟು ಬಿಜೆಪಿಯವರು ನಮ್ಮ ಶಾಸಕರನ್ನು ಖರೀದಿ ಮಾಡಿದರು. ಇಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ. ಆ ಪಕ್ಷದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+