ಗ್ರಾಹಕ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ
ಬೆಂಗಳೂರು, ನವೆಂಬರ್ 03 : ಕೇಬಲ್ ಟಿವಿ, ಮೊಬೈಲ್, ಈ ಕಾಮರ್ಸ್, ಗ್ರಾಹಕ ರಕ್ಷಣೆ ಅಥವಾ ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿರುವಿರಾ? ಚಿಂತೆ ಬೇಡ, ಈ ವರ್ಕ್ ಶಾಪ್ ನಲ್ಲಿ ಭಾಗವಹಿಸಿ, ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.
ಕೊ ಮೀಡಿಯಾ ಲ್ಯಾಬ್ ಮತ್ತು ಗ್ರಾಹಕ ಹಿತರಕ್ಷಣಾ ಸಂಘವು ಸಿಟಿಜನ್ ಮ್ಯಾಟರ್ಸ್ ಸಹಯೋಗದೊಂದಿಗೆ ನವೆಂಬರ್ 4ರಂದು ಶನಿವಾರ ಸಾರ್ವಜನಿಕರಿಗಾಗಿ ಬೆಂಗಳೂರಿನ ಪ್ಯಾಲೆಸ್ ರಸ್ತೆಯ, ಏಟ್ರಿಯಾ ಟವರ್ಸ್ ನಲ್ಲಿ 'ಗ್ರಾಹಕ ಜಾಗೃತಿ ಕಾರ್ಯಕ್ರಮ' ಆಯೋಜಿಸಿದೆ.

ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಮಾಜಿ ವಿಜ್ಞಾನಿ ರವೀಂದ್ರನಾಥ ಗುರು, ಜಿ-ಮಂತ್ರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ರತ್ನಮ್, ಮಾಹಿತಿ ತಂತ್ರಜ್ಞಾನ ಕಾನೂನು ಸಲಹೆಗಾರರಾದ ಪ್ರತಿಮಾ ನಾರಾಯಣ್, ಯುನೈಟೆಡ್ ಇನ್ಸುರೆನ್ಸ್ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ಎಂ.ಏ.ಅಜೀಜ್, ಸರ್ಕಾರದ ವಿವಿಧ ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಎಂ.ಎಲ್.ಅಶೋಕ್ ಅವರುಗಳು ಭಾಗವಹಿಸಲಿದ್ದಾರೆ.
ಭಾಗವಹಿಸಬೇಕಿದ್ದರೆ ನೀವು ಮೊದಲೇ ನೋಂದಾಯಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.












Click it and Unblock the Notifications