ಐಟಿ ಇಲಾಖೆ ವಿರುದ್ಧ ಹೋರಾಟಕ್ಕೆ ರಾಹುಲ್ ಗಾಂಧಿ ಸೂಚನೆ
ಬೆಂಗಳೂರು, ಆಗಸ್ಟ್ 2: ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪ್ರಭಾವಿ ಸಚಿವ ಹಾಗೂ ಹೈಕಮಾಂಡ್ ಆಪ್ತ ಡಿಕೆ ಶಿವಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸುತ್ತಿದ್ದಂತೆ ಐಟಿ ಇಲಾಖೆ ವಿರುದ್ಧವೇ ಕಾಂಗ್ರೆಸ್ ತಿರುಗಿ ಬಿದ್ದಿದೆ.
ಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆ
ಆದಾಯ ತೆರಿಗೆ ದಾಳಿಯಿಂದ ಕ್ರುದ್ಧವಾಗಿರುವ ಕಾಂಗ್ರೆಸ್ ಹೈಕಮಾಂಡ್ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡಲು ತೀರ್ಮಾನ ತೆಗೆದುಕೊಂಡಿದೆ. ಹೀಗಾಗಿ ಉಭಯ ಸದನಗಳಲ್ಲಿ ಐಟಿ ದಾಳಿ ಕೋಲಾಹಲ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ.
ಡಿಕೆ ಶಿವಕುಮಾರ್ ಸಂಕ್ಷಿಪ್ತ ಪರಿಚಯ
ಜತೆಗೆ ಐಟಿ ಇಲಾಖೆ ವಿರುದ್ಧವೇ ಹೋರಾಟ ನಡೆಸುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಸೂಚಿಸಿದ್ದಾರೆ ಎನ್ನಲಾಗಿದೆ.
Comments
dk shivakumar it income tax gujarat congress lok sabha rajya sabha rahul gandhi siddaramaiah bengaluru ಡಿಕೆ ಶಿವಕುಮಾರ್ ಐಟಿ ಆದಾಯ ತೆರಿಗೆ ಕಾಂಗ್ರೆಸ್ ರಾಹುಲ್ ಗಾಂಧಿ ಲೋಕಸಭೆ ರಾಜ್ಯಸಭೆ
English summary
Congress to raise the issue of Income Tax raids in both the houses of Parliament, today. Earlier today, Income Tax Department officials conduct raid at Karnataka energy minister DK Shivakumar's residence and ‘Eagleton- The Golf Village’ resort where Congress Gujarat MLAs are staying.