ವಸತಿ ಪ್ರದೇಶದಲ್ಲಿ ಕಮರ್ಷಿಯಲ್ ಚಟುವಟಿಕೆಗೆ ಬಿಬಿಎಂಪಿ ಬ್ರೇಕ್!
ಬೆಂಗಳೂರು ನ.10. ಬೆಂಗಳೂರು ನಗರದ ಜನವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆ ಹೊರತುಪಡಿಸಿ ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ಬ್ರೇಕ್ ಹಾಕಲಿದೆ. ಆ ಕುರಿತು ಸ್ವತಃ ಬಿಬಿಎಂಪಿಯೇ ಹೈಕೋರ್ಟ್ನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ.
ನಗರದ ವಿಲ್ಸನ್ ಗಾರ್ಡನ್ ಜನವಸತಿ ಪ್ರದೇಶದ ರಸ್ತೆ ಮತ್ತು ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ತಲೆ ಎತ್ತಿರುವ ಹೂವಿನ ಅಂಗಡಿಗಳನ್ನು ತೆರೆವುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಪಿ.ಬಿ.ವರಳೆ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು.
ಆ
ವೇಳೆ
ಪಾಲಿಕೆ
ಪರ
ವಕೀಲರು,
ವಸತಿ
ಪ್ರದೇಶಗಳಲ್ಲಿ
ಸಾರ್ವಜನಿಕ
ಅಗತ್ಯ
ಸೇವೆ
ಬಿಟ್ಟು
ಉಳಿದ
ವಾಣಿಜ್ಯ
ವ್ಯವಹಾರಗಳಿಗೆ
ಅವಕಾಶ
ನೀಡುವುದಿಲ್ಲ
ಎಂದು
ಬಿಬಿಎಂಪಿ
ಹೈಕೋರ್ಟ್ಗೆ
ಭರವಸೆ
ನೀಡಿದೆ.
ಅನುಮತಿ
ನೀಡುವಂತಿಲ್ಲ:
ಪಾಲಿಕೆಯ
ಪ್ರಮಾಣಪತ್ರವನ್ನು
ಪರಿಗಣಿಸಿದ
ನ್ಯಾಯಪೀಠ,
ಪರಿಷ್ಕೃತ
ಮಾಸ್ಟರ್
ಪ್ಲಾನ್-೨೦೧೫
ಪ್ರಕಾರ
ವಸತಿ
ಪ್ರದೇಶದಲ್ಲಿ
ಅನುಮತಿ
ನೀಡಲಾದ
ಚಟುವಟಿಕೆಗಳಿಗೆ
ಬಿಟ್ಟು
ಇತರೆ
ಯಾವುದೇ
ಚುಟುವಟಿಕೆಗಳಿಗೆ
ಅನುಮತಿ
ನೀಡುವಂತಿಲ್ಲ,
ಒಂದು
ವೇಳೆ
ನೀಡಿದರೆ
ಅಥವಾ
ಅನಧಿಕೃತವಾಗಿ
ವಾಣಿಜ್ಯ
ಚಟುವಟಿಕೆ
ನಡೆದರೆ
ಅದಕ್ಕೆ
ಪಾಲಿಕೆಯೇ
ಹೊಣೆ
ಹೊರಬೇಕಾಗುತ್ತದೆ
ಎಂದು
ಹೇಳಿತು.
ಜತೆಗೆ, ವಿಲ್ಸನ್ ಗಾರ್ಡನ್ ಬಡಾವಣೆಯಲ್ಲಿರುವ 41 ಅನಧಿಕೃತ ಹೂವಿನ ಅಂಗಡಿ ಮತ್ತು ದಾಸ್ತಾನು ಘಟಕಗಳ ತೆರವು ಕಾರ್ಯಚರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು.
ವಿಲ್ಸನ್ ಗಾರ್ಡನ್ನಲ್ಲಿ ತೆರವು: ಬಿಬಿಎಂಪಿ ಪರ ವಕೀಲರು, ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ಅಂಗಡಿಗಳು, ಹಾಲಿನ ಬೂತ್ಗಳು, ಸ್ಟೇಷನರಿ ಅಂಗಡಿ, ಬೇಕರಿಗಳು, ಎಸ್ಟಿಡಿ ಬೂತ್ ಮತ್ತು ಬ್ಯಾಂಕ್ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ.
ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಹಾಗೆಯೇ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಆ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿದರು.
ಅಲ್ಲದೆ, ಹೈಕೋರ್ಟ್ ಆದೇಶದಂತೆ ವಿಲ್ಸನ್ ಗಾರ್ಡನ್ ವಸತಿ ಪ್ರದೇಶದಲ್ಲಿ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅನಧಿಕೃತವಾಗಿ ತೆರೆಯಲಾಗಿರುವ 101 ಹೂವಿನ ಅಂಗಡಿಗಳ ಪೈಕಿ ಈಗಾಗಲೇ 60 ಅನ್ನು ತೆರವುಗೊಳಿಸಲಾಗಿದೆ. ಉಳಿದ 41 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಜತೆಗೆ, ಹಿಂದಿನ ಸ್ಥಳೀಯ ಅಧಿಕಾರಿಗಳಿಂದ ಆರು ಹೂವಿನ ಅಂಗಡಿಗಳಿಗೆ ಅನಧಿಕೃತವಾಗಿ ವ್ಯಾಪಾರ ಪರವಾನಗಿ ದೊರೆತಿದೆ. ಅನಧಿಕೃತ ಪರವಾನಗಿ ಮಂಜೂರು ಮಾಡಿದ ಸಂಬಂಧಪಟ್ಟ ಆರೋಗ್ಯ ಅಧಿಕಾರಿ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತರು ಸೂಕ್ತ ಕ್ರಮ ಜುರುಗಿಸಲಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.