ನೋಟು ಸಮಸ್ಯೆ: ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ
ಐನೂರು ಹಾಗೂ ಸಾವಿರ ನೋಟುಗಳು ರದ್ದಾಗಿರುವುದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳಿಗೆ ಬೇರೆ ಮಾರ್ಗಾಗಳನ್ನು ಕಂಡು ಪರಿಹರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.
ಬೆಂಗಳೂರು, ನವೆಂಬರ್. 14 : ರಾಜ್ಯದೆಲ್ಲೆಡೆ 500 ರೂ ಹಾಗೂ 1000 ರೂ ನೋಟಿನ ಬದಲಾವಣೆಗೆ ಜನರು ತೊಂದರೆ ಪಡುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ವಿವಿಧ ಬ್ಯಾಂಕ್ ಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಜನರು ಬ್ಯಾಂಕ್ ಗಳ ಮುಂದೆ ಸರತಿ ಸಾಲಿನಲ್ಲಿ ದಿನವಿಡೀ ನಿಂತು, ಹಳೆಯ ನೋಟುಗಳನ್ನು ಬದಲಾಯಿಸುತ್ತಿರುವ ಸ್ಥಿತಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ಅಧಿಕಾರಿಗಳ ಹಾಗು ಬ್ಯಾಂಕುಗಳ ಉನ್ನತ ಅಧಿಕಾರಿಗಳ ಜ್ಯೋತೆ ಸಭೆ ನಡೆಸಿದ್ದೇನೆ. ಜನರ ಉಪಯೋಗಗಕ್ಕಾಗೀ ಬೇಕಿರುವ ನಗದು ಸರಬರಾಜಿಗೆ ಶ್ರಮಿಸಲು ಸೂಚಿಸಿದೆ.
— CM of Karnataka (@CMofKarnataka) November 14, 2016
ಜನರಿಗೆ ಆಗುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸಿ, ಅವರು ದಿನವಿಡೀ ಸರತಿ ಸಾಲಿನಲ್ಲಿ ನಿಂತು ಬವಣೆ ಪಡುವಂತೆ ಆಗಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
Common man is facing inconvenience & hardship due to Demonetization. Have instructed my Officers to work with Banks & help the people.
— CM of Karnataka (@CMofKarnataka) November 14, 2016
ಹಣ ಬದಲಿಸಿಕೊಳ್ಳಲು ಬ್ಯಾಂಕ್ ಮುಂದೆ ಕಿಕ್ಕಿರಿದು ನಿಂತಿದ್ದ ಜನರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಸ್ಕೆಟ್ ಮತ್ತು ನೀರು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು












Click it and Unblock the Notifications