ಹೆಚ್ಚುತ್ತಿರುವ ಅಪರಾಧ: ಎರಡನೇ ಸ್ಥಾನಕ್ಕೆ ಬೆಂಗಳೂರು ಲಗ್ಗೆ

ಬೆಂಗಳೂರು, ಮಾರ್ಚ್ 3: ನಗರದ ಸಿಟಿಜನ್ಸ್ ಫಾರ್ ಡೆಮಾಕ್ರಸಿಯು 'ಹೀಗಿರಲಿಲ್ಲ ನಮ್ಮ ಬೆಂಗಳೂರು' ಎಂಬ ಬೆಂಗಳೂರಿನ ಅವ್ಯವಸ್ಥೆ ಕುರಿತು ಜನಜಾಗೃತಿ ಮೂಡಿಸುವ ಪ್ರದರ್ಶನ ಮತ್ತು ಮಾನವ ಸರಪಳಿ ಕಾರ್ಯಕ್ರಮವನ್ನು ಶನಿವಾರ ಸಂಜೆ 4.30ಕ್ಕೆ ಟೌನ್ ಹಾಲ್ ಎದುರು ಹಮ್ಮಿಕೊಂಡಿದೆ.

ಬೆಂಗಳೂರು ನಗರ ದೇಶದ ಎರಡನೇ ಅತಿ ಹೆಚ್ಚು ಅಪರಾಧ ಸಂಭವಿಸುವ ನಗರ ಎಂಬ ಅಪಖ್ಯಾತಿಗೆ ಒಳಗಾಗಿದ್ದು, ಈ ಕುರಿತು ಅಪರಾಧಗಳ ದಾಖಲೆ ಬ್ಯೂರೋ ವರದಿ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಸರ ಅಪಹರಣ, ಮಹಿಳೆಯರ ಮೇಲಿನ ದೌರ್ಜನ್ಯ, ಜನ ಸಾಮಾನ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು, ಎಟಿಎಂ ಕಳ್ಳತನಕ್ಕೆ ಹಲವಾರು ರೀತಿಯ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಪ್ರಜ್ಞೆ ಮೂಡಿಸಲು ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ.

Citizens to hold human chain because Not My Bengaluru

ನಗರದಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಮಾನವ ಸರಪಳಿ ನಡೆಸಲಾಗುತ್ತದೆ ಎಂದು ಸಿಟಿಜನ್ ಫಾರ್ ಬೆಂಗಳೂರು ತಿಳಿಸಿದೆ.ಈ ಜನ ಜಾಗೃತಿ ಕಾರ್ಯಕ್ರಮದಲ್ಲಿ ಚಿತ್ರ ನಟ ಸುಚೇಂದ್ರ ಪ್ರಸಾದ್, ಹೃದ್ರೋಗ ತಜ್ಞೆ ವಿಜಯ ಲಕ್ಷ್ಮೀ ಬಾಳೆ ಕುಂದರಿ, ನಿವೃತ್ತ ಐಪಿಎಸ್ ಅಧಿಕಾರಿ ಶಿವಕುಮಾರ್, ಹಿರಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ, ಸಿನಿಮಾ ನಟ ಜಗ್ಗೇಶ್, ಸಾಹಿತಿ ಸೇತುರಾಂ ಪತ್ರಕರ್ತ ಇಂದ್ರಜಿತ್ ಲಂಕೇಶ್, ಮಾದಿಗ ದಂಡೋರ ಹೋರಾಟ ಸಮಿತಿಯ ಶಂಕರಪ್ಪ, ಇತಿಹಾಸ ರಜ್ಞ ಸುರೇಶ್ ಮೋನಾ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಕಿ ವಿಜಯಲಕ್ಷ್ಮೀ ಮಾನೆ, ಚಿತ್ರನಟರಾದ ಅವಿನಾಶ, ತಾರಾ ಅನುರಾಧ, ಲಹರಿ ವೇಲು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+