ಬೆಂಗಳೂರಿನಲ್ಲಿ ಲಂಡನ್ ಮಾದರಿಯ ಸಾರಿಗೆ ಪ್ರಾಧಿಕಾರಕ್ಕಾಗಿ ಮಸೂದೆ
ಬೆಂಗಳೂರು, ಸೆಪ್ಟೆಂಬರ್ 24: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದಾರೆ. ಇದು ಬೆಂಗಳೂರಿನಲ್ಲಿ ನಗರ ಚಲನಶೀಲತೆಯನ್ನು ಯೋಜಿಸಲು ಮತ್ತು ನಿಯಂತ್ರಿಸಲು ಸೂಪರ್ ಪ್ರಾಧಿಕಾರವನ್ನು ರಚಿಸುತ್ತದೆ.
ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ (BMLTA) ಮಸೂದೆಯು ಪ್ರಸ್ತುತ ಬೆಂಗಳೂರಿನ ಸಾರಿಗೆಗಾಗಿ ಬಹುಸಂಖ್ಯೆಯ ಸ್ವತಂತ್ರ ಶಾಸನ, ಸಂಸ್ಥೆಗಳು ಮತ್ತು ಇಲಾಖೆಗಳನ್ನು ಒಳಗೊಂಡಿರುವ ಲಂಡನ್ನಂತಹ ಸಂಸ್ಥೆಯನ್ನು ಸ್ಥಾಪಿಸುವ ಪ್ರಯತ್ನವಾಗಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯ (DULT)ನೊಂದಿಗೆ ಕಾರ್ಯಕಾರಿ ಸಮಿತಿಯಾಗಿ ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ ಮಸೂದೆಯು ಕಾರ್ಯ ನಿರ್ವಹಿಸುತ್ತಿದೆ. ಈ ಮಸೂದೆಯು ಅದಕ್ಕೆ ಶಾಸನಬದ್ಧ ಅಧಿಕಾರವನ್ನು ನೀಡುತ್ತದೆ.

ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ ಮಸೂದೆ:
"BMLTA ಮಸೂದೆ ಪ್ರಕಾರ, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲಾ ಪ್ರಮುಖರನ್ನು ಒಂದು ಕಡೆ ಸೇರಿಸುತ್ತದೆ. BDA, BMTC, BBMP, BMRCL ಮತ್ತು ಸಾರಿಗೆ ಇಲಾಖೆಯಂತಹ ಅನೇಕ ಸಂಸ್ಥೆಗಳು ಅಥವಾ ಏಜೆಂಟ್ ಗಳು ನಗರ ಚಲನಶೀಲತೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಯೋಜಿಸುವುದು, ಅಭಿವೃದ್ಧಿಪಡಿಸುವುದು, ಅನುಷ್ಠಾನಗೊಳಿಸುವುದು ಮತ್ತು ಕಾರ್ಯ ನಿರ್ವಹಿಸುವ ಹೊಣೆಯನ್ನು ಹೊತ್ತುಕೊಳ್ಳುತ್ತವೆ. ನಗರ ಚಲನಶೀಲತೆಯನ್ನು ಸುವ್ಯವಸ್ಥಿತಗೊಳಿಸುವ ಮತ್ತು ಸುಧಾರಿಸುವ ಗುರಿ ಜೊತೆಗೆ ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ಮಸೂದೆಯಲ್ಲಿ ವಿವರಿಸಲಾಗಿದೆ.
BMLTA, ಬೆಂಗಳೂರು ಮಹಾನಗರ ಪ್ರದೇಶದ 1,294 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, "ಸುಸ್ಥಿರ ನಗರ ಸಾರಿಗೆಯ ಮೂಲಕ ತಡೆರಹಿತ ಚಲನಶೀಲತೆಯನ್ನು" ಉತ್ತೇಜಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುವ "ಸಮಗ್ರ ಚಲನಶೀಲ ಯೋಜನೆ" ಅನ್ನು ಸಿದ್ಧಪಡಿಸುತ್ತದೆ.
ಮಸೂದೆಯಲ್ಲಿ ಉಲ್ಲೇಖಿಸಿದ ಪ್ರಾಧಿಕಾರದ ಬಗ್ಗೆ ತಿಳಿಯಿರಿ:
ಈ ಪ್ರಾಧಿಕಾರವು ಪಾರ್ಕಿಂಗ್, ಮೋಟಾರುರಹಿತ ಸಾರಿಗೆ, ಸಾರಿಗೆ ಆಧಾರಿತ ಅಭಿವೃದ್ಧಿ, ಬಹು-ಮಾದರಿ ಏಕೀಕರಣ ಮತ್ತು ಸರಕು ಸಾಗಣೆಯ ನೀತಿಗಳನ್ನು ಅಂತಿಮಗೊಳಿಸುತ್ತದೆ ಎಂದು ಮಸೂದೆ ಹೇಳುತ್ತದೆ. ಸಮಗ್ರ ಚಲನಶೀಲತೆ ಯೋಜನೆ' ಪಾದಚಾರಿಗಳು, ಸೈಕಲ್ ಟ್ರ್ಯಾಕ್ಗಳು, ರಸ್ತೆ ಗುಣಮಟ್ಟ, ಮೂಲಸೌಕರ್ಯ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
BMLTA ಟ್ರಾಫಿಕ್ ಮ್ಯಾನೇಜ್ಮೆಂಟ್ ಯೋಜನೆಯನ್ನು ವರ್ಷಕ್ಕೆ ಒಮ್ಮೆ ಸಿದ್ಧಪಡಿಸುತ್ತದೆ. ಅದು ಟ್ರಾಫಿಕ್ ಫ್ಲೋ, ಸಿಗ್ನಲ್ ಆಪ್ಟಿಮೈಸೇಶನ್, ಕಾರಿಡಾರ್ ಮತ್ತು ಪ್ರದೇಶ-ಆಧಾರಿತ ಟ್ರಾಫಿಕ್ ಮ್ಯಾನೇಜ್ಮೆಂಟ್ ಯೋಜನೆಗಳನ್ನು ಇತರ ಮಧ್ಯಸ್ಥಿಕೆಗಳಲ್ಲಿ ಒಳಗೊಂಡಿರುತ್ತದೆ.
ಸಾರಿಗೆ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ:
ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರದ ನಿಯಮಗಳು, ನಿಬಂಧನೆಗಳು, ಆದೇಶಗಳು ಅಥವಾ ನಿರ್ದೇಶನಗಳನ್ನು ಅನುಸರಿಸಲು ವಿಫಲರಾದ ಯಾವುದೇ ವ್ಯಕ್ತಿಗೆ ಮೊದಲ ಉಲ್ಲಂಘನೆಯ ಮೇಲೆ 1 ಲಕ್ಷದವರೆಗೆ ಮತ್ತು ಎರಡನೇ ಅಥವಾ ನಂತರದ ಅಪರಾಧಕ್ಕೆ 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ನಿರಂತರ ಉಲ್ಲಂಘನೆಯ ಸಂದರ್ಭದಲ್ಲಿ, ದಿನಕ್ಕೆ 5,000 ರೂ.ವರೆಗೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಸರ್ಕಾರಿ ಇಲಾಖೆಗಳು ಮತ್ತು ಕಂಪನಿಗಳು ಸಹ ಉಲ್ಲಂಘನೆಗಾಗಿ ಶಿಕ್ಷೆ ಎದುರಿಸಬೇಕಾಗುತ್ತದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications