ವಂಚನೆಗೊಳಗಾದ ಟೆಕ್ಕಿ: ಬೆಂಕಿಹಚ್ಚಿಕೊಂಡು ಆತ್ಮಹತ್ಯೆ
ಬೆಂಗಳೂರು, ಡಿಸೆಂಬರ್ 06 : ಖಾಸಗಿ ಟುಟೋರಿಯಲ್ ನಿಂದ 1.25 ಲಕ್ಷ ರೂ. ವಂಚನೆಗೊಳಗಾದ ಸಾಫ್ಟ್ ವೇರ್ ಎಂಜಿನಿಯರ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜೆಪಿನಗರದಲ್ಲಿ ನಡೆದಿದೆ.
ರಿತೇಶ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡವರು, ಟುಟೊರಿಯಲ್ ಮಾಲೀಕ ಆದಿತ್ಯ ಬಜಾಜ್ ಎಂಬುವರು ರಿತೇಶ್ ಅವರ ಏಳು ವರ್ಷದ ಮಗುವಿಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಸೀಟು ಕೊಡಿಸಲು 1.25 ಲಕ್ಷ ರೂ. ಹಣ ಪಡೆದಿದ್ದರು. ಆದರೆ ಸೀಟು ಸಿಕ್ಕಿರಲಿಲ್ಲ. ಹಣವನ್ನೂ ವಾಪಾಸ್ ಮಾಡಿರಲಿಲ್ಲ.

ಮಾರತ್ ಹಳ್ಳಿಯ ಖಾಸಗಿ ಕಂಪನಿಯ ಸಾಫ್ಟವೇರ್ ಎಂಜಿನಿಯರ್ ಆಗಿದ್ದ ರಿತೇಶ್ ಹಣ ವಸೂಲಿ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಬಜಾಜ್ ಹಣ ನೀಡಿರಲಿಲ್ಲ. ಹೀಗಾಗಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಬೆದರಿಕೆ ಒಡ್ಡಿದ ರಿತೇಶ್ ಕೊನೆಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ.
ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ ಆದಿತ್ಯ ಬಜಾಜ್ ಅವರಿಗೂ ಬೆಂಕಿಯಿಂದ ಸುಟ್ಟಗಾಯಗಳಾಗಿದ್ದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿತೇಶ್ ಕುಮಾರು ಅವರು 2.5 ಲಕ್ಷ ಕೊಡುವುದಾಗಿ ಹೇಳಿ1.25 ಲಕ್ಷ ಅಷ್ಟೇ ನೀಡಿದ್ದರು ಎಂದು ಬಜಾಜ್ ಹೇಳಿದ್ದಾರೆ. ರಿತೇಶ್ ಅವರು ವಾರ್ಷಿಕವಾಗಿ ೧೫ಲಕ್ಷ ವೇತನ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.












Click it and Unblock the Notifications